MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬಳ್ಳಾರಿ: ಕೋವಿಡ್‌ ಬಾಧಿತರಿಗೆ ನಿತ್ಯ ದಾಸೋಹ

ಬಳ್ಳಾರಿ: ಕೋವಿಡ್‌ ಬಾಧಿತರಿಗೆ ನಿತ್ಯ ದಾಸೋಹ

ಕೆ.ಎಂ. ಮಂಜುನಾಥ್‌ಬಳ್ಳಾರಿ(ಜೂ.04): ಕೋವಿಡ್‌ ಸೋಂಕಿತರ ಸಂಕಷ್ಟಗಳಿಗೆ ಮಿಡಿಯದವರಿಲ್ಲ. ಎಲ್ಲರ ಬದುಕು ಒಂದೇ ಎಂದು ಭಾವಿಸಿದವರು ತಮ್ಮಿಂದಾದ ನೆರವು ನೀಡಲು ಮುಂದಡಿ ಇಟ್ಟು ತೆರೆಮರೆಯಲ್ಲಿಯೇ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. 

2 Min read
Author : Kannadaprabha News | Asianet News
Published : Jun 04 2021, 10:34 AM IST
Share this Photo Gallery
  • FB
  • TW
  • Linkdin
  • Whatsapp
16
<p>ತಾಲೂಕಿನ ಶ್ರೀಧರಗಡ್ಡೆ ಗ್ರಾಮಸ್ಥರು ಇದಕ್ಕೆ ಹೊರತಲ್ಲ. ನಿತ್ಯ ಹತ್ತಾರು ಕೆಜಿ ಆಹಾರವನ್ನು ತಯಾರಿಸಿಕೊಂಡು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು, ಕುಟುಂಬ ಸದಸ್ಯರು ಸೇರಿದಂತೆ ಕೋವಿಡ್‌ ಕಾರ್ಯದಲ್ಲಿ ನಿರತರಾಗಿರುವ ಸೇವಾ ಸಿಬ್ಬಂದಿಗೆ ಉಚಿತವಾಗಿ ಆಹಾರ ಪೂರೈಸುವ ಮೂಲಕ ಕೊರೋನಾ ಸೋಂಕಿತರು ಹಾಗೂ ಕೋವಿಡ್‌ ಹೋರಾಟದ ಸೇನಾನಿಗಳಿಗೆ ಹಸಿವು ನೀಗಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕಳೆದ 21 ದಿನಗಳಿಂದ ಒಂದು ದಿನವೂ ತಪ್ಪಿಸದೆ ದಾಸೋಹದಂತೆ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ.</p>

<p>ತಾಲೂಕಿನ ಶ್ರೀಧರಗಡ್ಡೆ ಗ್ರಾಮಸ್ಥರು ಇದಕ್ಕೆ ಹೊರತಲ್ಲ. ನಿತ್ಯ ಹತ್ತಾರು ಕೆಜಿ ಆಹಾರವನ್ನು ತಯಾರಿಸಿಕೊಂಡು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು, ಕುಟುಂಬ ಸದಸ್ಯರು ಸೇರಿದಂತೆ ಕೋವಿಡ್‌ ಕಾರ್ಯದಲ್ಲಿ ನಿರತರಾಗಿರುವ ಸೇವಾ ಸಿಬ್ಬಂದಿಗೆ ಉಚಿತವಾಗಿ ಆಹಾರ ಪೂರೈಸುವ ಮೂಲಕ ಕೊರೋನಾ ಸೋಂಕಿತರು ಹಾಗೂ ಕೋವಿಡ್‌ ಹೋರಾಟದ ಸೇನಾನಿಗಳಿಗೆ ಹಸಿವು ನೀಗಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕಳೆದ 21 ದಿನಗಳಿಂದ ಒಂದು ದಿನವೂ ತಪ್ಪಿಸದೆ ದಾಸೋಹದಂತೆ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ.</p>

ತಾಲೂಕಿನ ಶ್ರೀಧರಗಡ್ಡೆ ಗ್ರಾಮಸ್ಥರು ಇದಕ್ಕೆ ಹೊರತಲ್ಲ. ನಿತ್ಯ ಹತ್ತಾರು ಕೆಜಿ ಆಹಾರವನ್ನು ತಯಾರಿಸಿಕೊಂಡು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು, ಕುಟುಂಬ ಸದಸ್ಯರು ಸೇರಿದಂತೆ ಕೋವಿಡ್‌ ಕಾರ್ಯದಲ್ಲಿ ನಿರತರಾಗಿರುವ ಸೇವಾ ಸಿಬ್ಬಂದಿಗೆ ಉಚಿತವಾಗಿ ಆಹಾರ ಪೂರೈಸುವ ಮೂಲಕ ಕೊರೋನಾ ಸೋಂಕಿತರು ಹಾಗೂ ಕೋವಿಡ್‌ ಹೋರಾಟದ ಸೇನಾನಿಗಳಿಗೆ ಹಸಿವು ನೀಗಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕಳೆದ 21 ದಿನಗಳಿಂದ ಒಂದು ದಿನವೂ ತಪ್ಪಿಸದೆ ದಾಸೋಹದಂತೆ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ.

26
<p>ಗ್ರಾಮದ ಶ್ರೀಕೊಟ್ಟೂರು ಸ್ವಾಮಿ ಮಠದಲ್ಲಿ ಸೇರುವ ಯುವಕರು ಕೋವಿಡ್‌ ಸೋಂಕಿನಿಂದ ಬಳಲುತ್ತಿರುವವರಿಗೆ ನೆರವಾಗಬೇಕು. ಇಂತಹ ಸಂಕಷ್ಟ ಸ್ಥಿತಿಯಲ್ಲಿಯೇ ನಾವು ನೆರವಿಗೆ ಧಾವಿಸಬೇಕು ಎಂದು ನಿರ್ಧರಿಸಿದ್ದಾರೆ. ಅಂತೆಯೇ ಮೊದಲ ದಿನ 10ರಿಂದ 15 ಕೆಜಿಯಷ್ಟು ಆಹಾರ ತಯಾರಿಸಿ, ನಗರದ ವಿಮ್ಸ್‌ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ಸೋಂಕಿತರ ಕುಟುಂಬದ ಸದಸ್ಯರು, ಪೊಲೀಸರು, ನರ್ಸ್‌ಗಳು, ಹೋಂ ಗಾರ್ಡ್‌ಗಳಿಗೆ ನೀಡಿದ್ದಾರೆ.&nbsp;</p>

<p>ಗ್ರಾಮದ ಶ್ರೀಕೊಟ್ಟೂರು ಸ್ವಾಮಿ ಮಠದಲ್ಲಿ ಸೇರುವ ಯುವಕರು ಕೋವಿಡ್‌ ಸೋಂಕಿನಿಂದ ಬಳಲುತ್ತಿರುವವರಿಗೆ ನೆರವಾಗಬೇಕು. ಇಂತಹ ಸಂಕಷ್ಟ ಸ್ಥಿತಿಯಲ್ಲಿಯೇ ನಾವು ನೆರವಿಗೆ ಧಾವಿಸಬೇಕು ಎಂದು ನಿರ್ಧರಿಸಿದ್ದಾರೆ. ಅಂತೆಯೇ ಮೊದಲ ದಿನ 10ರಿಂದ 15 ಕೆಜಿಯಷ್ಟು ಆಹಾರ ತಯಾರಿಸಿ, ನಗರದ ವಿಮ್ಸ್‌ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ಸೋಂಕಿತರ ಕುಟುಂಬದ ಸದಸ್ಯರು, ಪೊಲೀಸರು, ನರ್ಸ್‌ಗಳು, ಹೋಂ ಗಾರ್ಡ್‌ಗಳಿಗೆ ನೀಡಿದ್ದಾರೆ.&nbsp;</p>

ಗ್ರಾಮದ ಶ್ರೀಕೊಟ್ಟೂರು ಸ್ವಾಮಿ ಮಠದಲ್ಲಿ ಸೇರುವ ಯುವಕರು ಕೋವಿಡ್‌ ಸೋಂಕಿನಿಂದ ಬಳಲುತ್ತಿರುವವರಿಗೆ ನೆರವಾಗಬೇಕು. ಇಂತಹ ಸಂಕಷ್ಟ ಸ್ಥಿತಿಯಲ್ಲಿಯೇ ನಾವು ನೆರವಿಗೆ ಧಾವಿಸಬೇಕು ಎಂದು ನಿರ್ಧರಿಸಿದ್ದಾರೆ. ಅಂತೆಯೇ ಮೊದಲ ದಿನ 10ರಿಂದ 15 ಕೆಜಿಯಷ್ಟು ಆಹಾರ ತಯಾರಿಸಿ, ನಗರದ ವಿಮ್ಸ್‌ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ಸೋಂಕಿತರ ಕುಟುಂಬದ ಸದಸ್ಯರು, ಪೊಲೀಸರು, ನರ್ಸ್‌ಗಳು, ಹೋಂ ಗಾರ್ಡ್‌ಗಳಿಗೆ ನೀಡಿದ್ದಾರೆ. 

36
<p>ಊಟದ ಬೇಡಿಕೆ ಹೆಚ್ಚಾಗಿದೆ ಎಂದರಿತ ಯುವಕರು ನಿತ್ಯವೂ ಆಹಾರ ತಯಾರಿಸಿ ಪೂರೈಸುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಮದ ಎಲ್ಲರೂ ಸಾಥ್‌ ನೀಡಿದ್ದು ಇದೀಗ ನಿತ್ಯ 50ರಿಂದ 60 ಕೆಜಿ ಅಕ್ಕಿಯ ಆಹಾರ ತಯಾರಿಸಲಾಗುತ್ತಿದೆ. ಚಪಾತಿ, ಪಲ್ಯೆ, ಅನ್ನ, ಸಾಂಬಾರ, ಮಜ್ಜಿಗೆ, ಬಿಸಿ ಬೇಳೆಬಾತ್‌, ಚಿತ್ರಾನ್ನ, ರೈಸ್‌ಬಾತ್‌ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ಪೂರೈಸಲಾಗುತ್ತಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನಿತ್ಯವೂ ತಪ್ಪದೆ ಪೂರೈಸಲಾಗುತ್ತಿದೆ. ಅಡುಗೆ ತಯಾರಿಕೆ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಆಗಮಿಸಿ ಚಪಾತಿ ತಯಾರಿಸಿದರೆ, ಕೆಲವರು ತರಕಾರಿ ಹೆಚ್ಚಿ ಕೊಡುತ್ತಾರೆ. ಮತ್ತೆ ಕೆಲವರು ಆಹಾರದ ಪೊಟ್ಟಣಗಳನ್ನು ತಯಾರಿಸುತ್ತಾರೆ. ಮತ್ತೆ ಕೆಲವರು ನಗರಕ್ಕೆ ಆಗಮಿಸಿ, ಪೂರೈಕೆ ಮಾಡುತ್ತಾರೆ.</p>

<p>ಊಟದ ಬೇಡಿಕೆ ಹೆಚ್ಚಾಗಿದೆ ಎಂದರಿತ ಯುವಕರು ನಿತ್ಯವೂ ಆಹಾರ ತಯಾರಿಸಿ ಪೂರೈಸುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಮದ ಎಲ್ಲರೂ ಸಾಥ್‌ ನೀಡಿದ್ದು ಇದೀಗ ನಿತ್ಯ 50ರಿಂದ 60 ಕೆಜಿ ಅಕ್ಕಿಯ ಆಹಾರ ತಯಾರಿಸಲಾಗುತ್ತಿದೆ. ಚಪಾತಿ, ಪಲ್ಯೆ, ಅನ್ನ, ಸಾಂಬಾರ, ಮಜ್ಜಿಗೆ, ಬಿಸಿ ಬೇಳೆಬಾತ್‌, ಚಿತ್ರಾನ್ನ, ರೈಸ್‌ಬಾತ್‌ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ಪೂರೈಸಲಾಗುತ್ತಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನಿತ್ಯವೂ ತಪ್ಪದೆ ಪೂರೈಸಲಾಗುತ್ತಿದೆ. ಅಡುಗೆ ತಯಾರಿಕೆ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಆಗಮಿಸಿ ಚಪಾತಿ ತಯಾರಿಸಿದರೆ, ಕೆಲವರು ತರಕಾರಿ ಹೆಚ್ಚಿ ಕೊಡುತ್ತಾರೆ. ಮತ್ತೆ ಕೆಲವರು ಆಹಾರದ ಪೊಟ್ಟಣಗಳನ್ನು ತಯಾರಿಸುತ್ತಾರೆ. ಮತ್ತೆ ಕೆಲವರು ನಗರಕ್ಕೆ ಆಗಮಿಸಿ, ಪೂರೈಕೆ ಮಾಡುತ್ತಾರೆ.</p>

ಊಟದ ಬೇಡಿಕೆ ಹೆಚ್ಚಾಗಿದೆ ಎಂದರಿತ ಯುವಕರು ನಿತ್ಯವೂ ಆಹಾರ ತಯಾರಿಸಿ ಪೂರೈಸುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಮದ ಎಲ್ಲರೂ ಸಾಥ್‌ ನೀಡಿದ್ದು ಇದೀಗ ನಿತ್ಯ 50ರಿಂದ 60 ಕೆಜಿ ಅಕ್ಕಿಯ ಆಹಾರ ತಯಾರಿಸಲಾಗುತ್ತಿದೆ. ಚಪಾತಿ, ಪಲ್ಯೆ, ಅನ್ನ, ಸಾಂಬಾರ, ಮಜ್ಜಿಗೆ, ಬಿಸಿ ಬೇಳೆಬಾತ್‌, ಚಿತ್ರಾನ್ನ, ರೈಸ್‌ಬಾತ್‌ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ಪೂರೈಸಲಾಗುತ್ತಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನಿತ್ಯವೂ ತಪ್ಪದೆ ಪೂರೈಸಲಾಗುತ್ತಿದೆ. ಅಡುಗೆ ತಯಾರಿಕೆ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಆಗಮಿಸಿ ಚಪಾತಿ ತಯಾರಿಸಿದರೆ, ಕೆಲವರು ತರಕಾರಿ ಹೆಚ್ಚಿ ಕೊಡುತ್ತಾರೆ. ಮತ್ತೆ ಕೆಲವರು ಆಹಾರದ ಪೊಟ್ಟಣಗಳನ್ನು ತಯಾರಿಸುತ್ತಾರೆ. ಮತ್ತೆ ಕೆಲವರು ನಗರಕ್ಕೆ ಆಗಮಿಸಿ, ಪೂರೈಕೆ ಮಾಡುತ್ತಾರೆ.

46
<p>ನಿತ್ಯ 50ರಿಂದ 60 ಕೆಜಿಗೆ 500ಕ್ಕೂ ಹೆಚ್ಚು ಆಹಾರದ ಪೊಟ್ಟಣ ತಯಾರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಬೇರೆ ತರಹದ್ದೇ ಊಟವಿರುತ್ತದೆ. ನಿತ್ಯದ ಊಟದ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಳ್ಳುತ್ತಾರೆ. ಕೆಲವರು ಅಕ್ಕಿ, ಗೋದಿ ಹಿಟ್ಟು, ತರಕಾರಿ ಕೊಡಿಸುತ್ತಾರೆ. ಗ್ರಾಮದ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಊಟ ತಯಾರಿಕೆ ಪ್ರಕ್ರಿಯೆಲ್ಲಿ ನಿತ್ಯ 50ಕ್ಕೂ ಹೆಚ್ಚು ಜನರು ತೊಡಗಿಸಿಕೊಳ್ಳುತ್ತಾರೆ.</p>

<p>ನಿತ್ಯ 50ರಿಂದ 60 ಕೆಜಿಗೆ 500ಕ್ಕೂ ಹೆಚ್ಚು ಆಹಾರದ ಪೊಟ್ಟಣ ತಯಾರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಬೇರೆ ತರಹದ್ದೇ ಊಟವಿರುತ್ತದೆ. ನಿತ್ಯದ ಊಟದ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಳ್ಳುತ್ತಾರೆ. ಕೆಲವರು ಅಕ್ಕಿ, ಗೋದಿ ಹಿಟ್ಟು, ತರಕಾರಿ ಕೊಡಿಸುತ್ತಾರೆ. ಗ್ರಾಮದ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಊಟ ತಯಾರಿಕೆ ಪ್ರಕ್ರಿಯೆಲ್ಲಿ ನಿತ್ಯ 50ಕ್ಕೂ ಹೆಚ್ಚು ಜನರು ತೊಡಗಿಸಿಕೊಳ್ಳುತ್ತಾರೆ.</p>

ನಿತ್ಯ 50ರಿಂದ 60 ಕೆಜಿಗೆ 500ಕ್ಕೂ ಹೆಚ್ಚು ಆಹಾರದ ಪೊಟ್ಟಣ ತಯಾರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಬೇರೆ ತರಹದ್ದೇ ಊಟವಿರುತ್ತದೆ. ನಿತ್ಯದ ಊಟದ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಳ್ಳುತ್ತಾರೆ. ಕೆಲವರು ಅಕ್ಕಿ, ಗೋದಿ ಹಿಟ್ಟು, ತರಕಾರಿ ಕೊಡಿಸುತ್ತಾರೆ. ಗ್ರಾಮದ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಊಟ ತಯಾರಿಕೆ ಪ್ರಕ್ರಿಯೆಲ್ಲಿ ನಿತ್ಯ 50ಕ್ಕೂ ಹೆಚ್ಚು ಜನರು ತೊಡಗಿಸಿಕೊಳ್ಳುತ್ತಾರೆ.

56
<p>ಶ್ರೀಧರಗಡ್ಡೆ ಬಳಿಯ ಅಲೆಮಾರಿಗಳು ವಾಸವಾಗಿರುವ ಗುಡಾರ ನಗರಕ್ಕೂ ಆಗಾಗ್ಗೆ ಆಹಾರ ಪೂರೈಸಲಾಗುತ್ತಿದೆ. ಕೋವಿಡ್‌ನಿಂದ ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿ ಇರುವುದರಿಂದ ಶ್ರೀಧರಗಡ್ಡೆಯ ಗ್ರಾಮಸ್ಥರು ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಾರೆ.</p>

<p>ಶ್ರೀಧರಗಡ್ಡೆ ಬಳಿಯ ಅಲೆಮಾರಿಗಳು ವಾಸವಾಗಿರುವ ಗುಡಾರ ನಗರಕ್ಕೂ ಆಗಾಗ್ಗೆ ಆಹಾರ ಪೂರೈಸಲಾಗುತ್ತಿದೆ. ಕೋವಿಡ್‌ನಿಂದ ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿ ಇರುವುದರಿಂದ ಶ್ರೀಧರಗಡ್ಡೆಯ ಗ್ರಾಮಸ್ಥರು ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಾರೆ.</p>

ಶ್ರೀಧರಗಡ್ಡೆ ಬಳಿಯ ಅಲೆಮಾರಿಗಳು ವಾಸವಾಗಿರುವ ಗುಡಾರ ನಗರಕ್ಕೂ ಆಗಾಗ್ಗೆ ಆಹಾರ ಪೂರೈಸಲಾಗುತ್ತಿದೆ. ಕೋವಿಡ್‌ನಿಂದ ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿ ಇರುವುದರಿಂದ ಶ್ರೀಧರಗಡ್ಡೆಯ ಗ್ರಾಮಸ್ಥರು ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಾರೆ.

66
<p>ಕಳೆದ 21 ದಿನಗಳಿಂದ ಕೋವಿಡ್‌ ಸೋಂಕಿತರಿಗೆ, ಕುಟುಂಬ ಸದಸ್ಯರಿಗೆ, ಹೋಂ ಗಾರ್ಡ್‌ ಸೇರಿದಂತೆ ಆಹಾರದ ಕೊರತೆ ಎದುರಿಸುವ ಪ್ರತಿಯೊಬ್ಬರಿಗೂ ಊಟ ನೀಡಲಾಗುತ್ತಿದೆ. ಇಡೀ ಗ್ರಾಮಸ್ಥರು ಅನ್ನದಾಸೋಹದ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂದು ಶ್ರೀಧರಗಡ್ಡೆ ಎಚ್‌.ಎಂ. ವೀರಭದ್ರಯ್ಯಸ್ವಾಮಿ ತಿಳಿಸಿದ್ದಾರೆ.&nbsp;</p>

<p>ಕಳೆದ 21 ದಿನಗಳಿಂದ ಕೋವಿಡ್‌ ಸೋಂಕಿತರಿಗೆ, ಕುಟುಂಬ ಸದಸ್ಯರಿಗೆ, ಹೋಂ ಗಾರ್ಡ್‌ ಸೇರಿದಂತೆ ಆಹಾರದ ಕೊರತೆ ಎದುರಿಸುವ ಪ್ರತಿಯೊಬ್ಬರಿಗೂ ಊಟ ನೀಡಲಾಗುತ್ತಿದೆ. ಇಡೀ ಗ್ರಾಮಸ್ಥರು ಅನ್ನದಾಸೋಹದ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂದು ಶ್ರೀಧರಗಡ್ಡೆ ಎಚ್‌.ಎಂ. ವೀರಭದ್ರಯ್ಯಸ್ವಾಮಿ ತಿಳಿಸಿದ್ದಾರೆ.&nbsp;</p>

ಕಳೆದ 21 ದಿನಗಳಿಂದ ಕೋವಿಡ್‌ ಸೋಂಕಿತರಿಗೆ, ಕುಟುಂಬ ಸದಸ್ಯರಿಗೆ, ಹೋಂ ಗಾರ್ಡ್‌ ಸೇರಿದಂತೆ ಆಹಾರದ ಕೊರತೆ ಎದುರಿಸುವ ಪ್ರತಿಯೊಬ್ಬರಿಗೂ ಊಟ ನೀಡಲಾಗುತ್ತಿದೆ. ಇಡೀ ಗ್ರಾಮಸ್ಥರು ಅನ್ನದಾಸೋಹದ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂದು ಶ್ರೀಧರಗಡ್ಡೆ ಎಚ್‌.ಎಂ. ವೀರಭದ್ರಯ್ಯಸ್ವಾಮಿ ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಹೊಸ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ, ದೆಹಲಿಗೆ ಬನ್ನಿ ಎಂದ ಹೆಚ್‌ಡಿಕೆ, ರೈತರಿಗೆ ಸಿಗುವುದೇ ನ್ಯಾಯ?
Recommended image2
ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ
Recommended image3
ಕೈಗಾ ಅಣುಸ್ಥಾವರ: ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ: ಡಾ.ಅಜಿತ್ ಕುಮಾರ್ ಮೊಹಂತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved