ಜನೌಷಧಿ ಕೇಂದ್ರಗಳಲ್ಲಿ ಶೇ. 90ರ ವರೆಗೆ ರಿಯಾಯಿತಿ: ಡಿವಿಎಸ್
ಬೆಂಗಳೂರು(ನ.09): ರಾಜ್ಯದಲ್ಲಿ ಕಾಗದ ತಯಾರಿಕೆಗೆ ಅಕೇಶಿಯಾ (ನೀಲಗಿರಿ) ಬದಲು ಬಿದಿರು ಬಳಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಮಲ್ಲಸಂದ್ರ ವಾರ್ಡ್ನ ಪೈಪ್ಲೈನ್ನಲ್ಲಿ ಅಟಲ್ ಜೀ ಜನಸೇವಾ ಕೇಂದ್ರ, ರಾಷ್ಟ್ರೋತ್ಥಾನ ಸಾಹಿತ್ಯ ಗ್ರಂಥಾಲಯ ಹಾಗೂ ಏಕತಾ ಭವನ ಉದ್ಘಾಟನೆ ಮಾಡಿದ ಅವರು, ರಾಜ್ಯದಲ್ಲಿ ಬಿದಿರು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ 6600 ಜನೌಷಧಿ ಕೇಂದ್ರಗಳಿದ್ದು, 2024ರ ವೇಳೆಗೆ 10,000ಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಜನೌಷಧಿ ಕೇಂದ್ರಗಳಲ್ಲಿ ಶೇ.10ರಿಂದ 90ರ ವರೆಗೆ ರಿಯಾಯಿತಿ ದರದಲ್ಲಿ ಔಷಧಗಳ ಮಾರಾಟ ಮಾಡಲಾಗುತ್ತಿದೆ ಎಂದರು.
ರಾಸಾಯನಿಕ ಯುಕ್ತ ಪಟಾಕಿಗಳ ಬದಲು, ಹಸಿರು ಪಟಾಕಿಗಳನ್ನು ಬಳವುದು ಉತ್ತಮ ಎಂದರು. ಯೋಗೀಶ್ ಗೌಡ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲಾ ಎಂದರು.
ಮಾಜಿ ಶಾಸಕ ಎಸ್. ಮುನಿರಾಜು, ಪೀಣ್ಯ ದಾಸರಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಲೋಕೇಶ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಶಿವಕುಮಾರ್, ಪಿ.ಎಚ್.ರಾಜು, ವಿನೋದ್ ಗೌಡ, ಬಿಜೆಪಿ ಮುಂಖಂಡರಾದ ನರಸಿಂಹ ಮೂರ್ತಿ, ತಿಮ್ಮನಂಜಯ್ಯ, ಸುರೇಶ್, ಶೆಟ್ಟಿಹಳ್ಳಿ ಸುರೇಶ್, ಬಿ.ಎಲ್.ಎನ್.ಸಿಂಹ, ಆನಂದ್ ರೆಡ್ಡಿ, ಜೆ.ವಿ.ಶ್ರೀನಿವಾಸ್, ರವಿಗೌಡ, ಉಮಾದೇವಿ, ಸುಜಾತಾ, ಭಾಗ್ಯಮ್ಮ ಇದ್ದರು.