ಕಂಗೊಳಿಸಿದ ಶಾರದಾ ಮಾತೆ : ಪುಷ್ಕರಣಿಯಲ್ಲಿ ವಿಸರ್ಜಿಸಿ ಉತ್ಸವ ಸಂಪನ್ನ
ಉಡುಪಿಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮಂಗಳವಾರ ರಾತ್ರಿ ವೈಭವದಿಂದ ನಡೆಯಿತು.
ಉಡುಪಿಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ
![article_image2](https://static-ai.asianetnews.com/images/01enqdw2vdh6mvad5feddxr8ds/444b8956-83fe-4b40-826b-6fd46d4d20c8-jpg_300x199xt.jpg)
ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ ಅವರು ದೇವಿಗೆ ಮಹಾಪೂಜೆ ನೆರವೇರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ದೇವಳದ ಹೊರಪ್ರಾಂಗಣದಲ್ಲಿ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಸ್ವಯಂ ಸೇವಕರು ಭುಜದ ಮೇಲೆ ಹೊತ್ತು ಮೆರವಣಿಗೆ ನೆಡೆಸಿದರು.
ಮಂಗಳವಾದ್ಯ, ನಾಸಿಕ್ ಬ್ಯಾಂಡ್, ಭಜನೆಯೊಂದಿಗೆ ಭಕ್ತರು ಹೆಜ್ಜೆ ಹಾಕುತ್ತಾ ಕುಣಿದಾಡಿದರು.
ನಂತರ ದೇವಳದ ಪುಷ್ಕರಣಿಯಲ್ಲಿ ಶಾರದಾ ಮಾತೆಯ ತೆಪ್ಪೋತ್ಸವ ನಡೆಸಿ, ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಎಲ್ಲಾ ಕಾರ್ಯಕ್ರಮಗಳ್ಲಲಿ ದೇವಳದ ಧರ್ಮದರ್ಶಿ ಪಿ.ವಿ.ಶೆಣೈ, ವಿಶ್ವನಾಥ ಭಟ್, ಮಟ್ಟಾರ್ ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ್ ಮತ್ತು ಜಿ.ಎಸ್.ಬಿ. ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ ಸದಸ್ಯರು ಹಾಗು ಸಮಾಜ ಬಾಂಧವರೂ ಭಾಗವಹಿಸಿದ್ದರು.
ಅದ್ದೂರಿಯಾಗಿ ಮುಕ್ತಾಯಗೊಮಡ ಉತ್ಸವ