MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆಯಲ್ಲಿ ಅಕ್ರಮ ಆರೋಪ: ಮೌನ ಮುರಿದ ಶಿಲ್ಪಿ ಅರುಣ್ ಯೋಗಿರಾಜ್!

ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆಯಲ್ಲಿ ಅಕ್ರಮ ಆರೋಪ: ಮೌನ ಮುರಿದ ಶಿಲ್ಪಿ ಅರುಣ್ ಯೋಗಿರಾಜ್!

ಅಯೋಧ್ಯೆ ರಾಮ ಮಂದಿರದ ದೇಣಿಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸರಳತೆಯನ್ನು ಶ್ಲಾಘಿಸಿದ ಅವರು, ಈ ಗೊಂದಲದ ಬಗ್ಗೆ ತನಿಖೆ ಕುರಿತಾಗಿ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.

2 Min read
Author : Sathish Kumar KH
Published : Jun 26 2026, 06:55 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಮೈಸೂರು (ಜೂ.26): ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿರುವ ರಾಮಲಲ್ಲಾ ಮೂರ್ತಿ ಕೆತ್ತನೆಯ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಇತ್ತೀಚೆಗೆ ದೇವಸ್ಥಾನದ ದೇಣಿಗೆ ವಿಚಾರದಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ಕೋಟ್ಯಂತರ ಭಕ್ತರ ನಂಬಿಕೆಗೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಕಣ್ಣಾರೆ ಕಂಡಿದ್ದ ದೃಶ್ಯಗಳನ್ನು ನೆನಪಿಸಿಕೊಂಡ ಶಿಲ್ಪಿ:

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಅರುಣ್ ಯೋಗಿರಾಜ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಸಮಯದಲ್ಲಿ ತಾವು ಕಂಡ ದೃಶ್ಯಗಳನ್ನು ಹಂಚಿಕೊಂಡರು. 'ದೇವಸ್ಥಾನಕ್ಕೆ ದೇಣಿಗೆ ನೀಡುವವರ ಸಂಖ್ಯೆ ಅಪಾರವಾಗಿತ್ತು. ಕೇವಲ ಸಾಮಾನ್ಯ ಜನರಲ್ಲ, ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಮತ್ತು ವಿಐಪಿಗಳು ಚೆಕ್ ಹಿಡಿದು ಸಾಲಿನಲ್ಲಿ ನಿಂತು ದೇಣಿಗೆ ನೀಡುತ್ತಿದ್ದರು. ಅಂತಹ ಭಕ್ತಿ ಮತ್ತು ಸಮರ್ಪಣಾ ಮನೋಭಾವವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈಗ ಇಂತಹ ಆರೋಪಗಳು ಕೇಳಿಬರುತ್ತಿರುವುದು ನಿಜಕ್ಕೂ ದುರದೃಷ್ಟಕರ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related Articles

Related image1
Now Playing
ರಣ್‌ಬೀರ್ ಆಲಿಯಾ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣೇಶಮೂರ್ತಿ..!
Related image2
ಮೂರ್ತಿ ಕೆತ್ತನೆ ವೇಳೆ ರಾಮಲಲ್ಲಾನ ನೋಡಲು ದಿನವೂ ಬರುತ್ತಿದ್ದ ಹನುಮ: ಶಿಲ್ಪಿ ಅರುಣ್ ಯೋಗಿರಾಜ್
36
Image Credit : Asianet News

ಚಂಪತ್ ರಾಯ್ ಸರಳತೆ ಮತ್ತು ಪಾರದರ್ಶಕತೆ:

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಬಗ್ಗೆ ಮಾತನಾಡಿದ ಯೋಗಿರಾಜ್, 'ಅವರು ಅತ್ಯಂತ ಸರಳ ವ್ಯಕ್ತಿ. ಅಯೋಧ್ಯೆಯ ಒಂದು ಪುಟ್ಟ ಕೋಣೆಯಲ್ಲಿ, ಎಸಿ ಕೂಡ ಇಲ್ಲದೆ ಕೇವಲ ಫ್ಯಾನ್ ಹಾಕಿಕೊಂಡು ದಿವಾನ್ ಮಂಚದ ಮೇಲೆ ಮಲಗುತ್ತಿದ್ದರು. ಅವರ ನಡವಳಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇತ್ತು. ಯಾವುದೇ ವಿಐಪಿಗಳು ರಹಸ್ಯವಾಗಿ ಮಾತನಾಡಲು ಬಂದರೆ ಅವರು ಒಪ್ಪುತ್ತಿರಲಿಲ್ಲ. ಏನೇ ಇದ್ದರೂ ಎಲ್ಲರ ಮುಂದೆ ಓಪನ್ ಆಗಿ ಮಾತನಾಡಿ ಎನ್ನುತ್ತಿದ್ದರು. ಪ್ರತಿಯೊಂದು ನಿರ್ಧಾರವನ್ನೂ ಎಲ್ಲರನ್ನೂ ಒಟ್ಟಿಗೆ ಕೂರಿಸಿಯೇ ತೆಗೆದುಕೊಳ್ಳುತ್ತಿದ್ದರು' ಎಂದು ಅವರ ಪರವಾಗಿ ಮಾತನಾಡಿದರು.

46
Image Credit : social media

ತಂತ್ರಜ್ಞಾನದ ಬಳಕೆ ಮತ್ತು ಅಕ್ರಮದ ಸಂಶಯ:

ದೇಣಿಗೆ ಸಂಗ್ರಹದಲ್ಲಿ ಹೈದರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯು ಪ್ರತಿಯೊಂದು ರೂಪಾಯಿಯನ್ನೂ ಆನ್‌ಲೈನ್ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಹತ್ತು ರೂಪಾಯಿ ದೇಣಿಗೆ ನೀಡಿದರೂ ಕೂಡಲೇ ಡಿಜಿಟಲ್ ರಶೀದಿ ಮೊಬೈಲ್‌ಗೆ ಬರುತ್ತಿತ್ತು. ಆದರೆ, ಟ್ರಸ್ಟ್ ಬೆಳೆಯುತ್ತಿದ್ದಂತೆ ಕೆಲವು ಹಂತಗಳಲ್ಲಿ ನಿಯಂತ್ರಣ ತಪ್ಪಿರಬಹುದು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಹಣ ದುರುಪಯೋಗ ಮಾಡಿಕೊಂಡಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

56
Image Credit : Asianet News

ತನಿಖೆಗೆ ಆಗ್ರಹ ಮತ್ತು ಎಫ್‌ಐಆರ್:

ಹಣದ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ಸ್ವತಃ ಚಂಪತ್ ರಾಯ್ ಅವರೇ ಎಸ್‌ಐಟಿ (SIT) ತನಿಖೆಗೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. 'ಈ ಆರೋಪಗಳು ಗಿಡಕ್ಕೆ ಬಂದ ರೋಗದಂತೆ, ತನಿಖೆಯ ಮೂಲಕ ಈ ರೋಗ ವಾಸಿಯಾಗಬೇಕು. ಭಕ್ತರಿಗೆ ಸತ್ಯಾಂಶ ಏನೆಂದು ತಿಳಿಯಬೇಕು' ಎಂದು ಅರುಣ್ ಯೋಗಿರಾಜ್ ಒತ್ತಾಯಿಸಿದರು.

66
Image Credit : Asianet News

ಕೊನೆಯದಾಗಿ, 'ಹಣದ ವಿಷಯದಲ್ಲಿ ದೇವರನ್ನು ಅಳೆಯಬಾರದು. ನಾವು ನೀಡುವ ಹಣದಲ್ಲಿ ಭಕ್ತಿ ಇರುವುದಿಲ್ಲ, ಅದು ಕೇವಲ ವ್ಯವಸ್ಥೆಯ ಭಾಗ. ಒಬ್ಬ ಶಿಲ್ಪಿ ತನ್ನ ಜೀವನೋಪಾಯಕ್ಕಾಗಿ ಸಂಸಾರಸ್ಥನಾಗಿ ಹಣ ಪಡೆಯುತ್ತಾನೆಯೇ ಹೊರತು, ಯಾರೂ ಹಣ ಕೊಟ್ಟು ದೇವರನ್ನು ಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಂದ ರಾಮನ ಮೇಲಿರುವ ನನ್ನ ಭಕ್ತಿ ಎಂದಿಗೂ ಕಮ್ಮಿಯಾಗುವುದಿಲ್ಲ' ಎಂದು ಹೇಳಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಅರುಣ್ ಯೋಗಿರಾಜ್
ಅಯೋಧ್ಯೆ
ರಾಮ ಮಂದಿರ

Latest Videos
Recommended Stories
Recommended image1
ವಿವಾಹಿತ ಪುತ್ರಿಯೂ ಅನುಕಂಪದ ನೇಮಕಾತಿಗೆ ಅರ್ಹಳು: ಮಹತ್ವದ ತೀರ್ಪಲ್ಲಿ ಹೈಕೋರ್ಟ್​ ಹೇಳಿದ್ದೇನು
Recommended image2
ಅಮೆರಿಕವನ್ನೇ ನಡುಗಿಸಿದ ಬೆಂಗಳೂರು ಮೂಲದ ವಕೀಲ ವಿನೋದ್ ದೊಡ್ಡಮನಿ: ವಲಸೆ ವಂಚನೆ, 255000 ಡಾಲರ್ ದಂಡ!
Recommended image3
ಮಹಿಳೆಯ ಚೈನ್​ ತಂದ ಆಪತ್ತು: ಸ್ಟಾಪ್​ ಆಗೋಯ್ತು ನಮ್ಮ ಮೆಟ್ರೊ- ಲಕ್ಷಾಂತರ ಪ್ರಯಾಣಿಕರ ಪರದಾಟ
Related Stories
Recommended image1
Now Playing
ರಣ್‌ಬೀರ್ ಆಲಿಯಾ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣೇಶಮೂರ್ತಿ..!
Recommended image2
ಮೂರ್ತಿ ಕೆತ್ತನೆ ವೇಳೆ ರಾಮಲಲ್ಲಾನ ನೋಡಲು ದಿನವೂ ಬರುತ್ತಿದ್ದ ಹನುಮ: ಶಿಲ್ಪಿ ಅರುಣ್ ಯೋಗಿರಾಜ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved