ಸಾಮಾಜಿಕ ಅಂತರ ಗಾಳಿಗೆ ತೂರಿದ ಹಳ್ಳಿ ಮಂದಿ: ತರಕಾರಿ ಖರೀದಿಗಾಗಿ ಮುಗಿಬಿದ್ದ ಜನತೆ!
ಗದಗ(ಏ.10): ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ಗೆ ಒಬ್ಬರು ಬಲಿಯಾಗಿದ್ದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊರೋನಾ ಬಗ್ಗೆ ಭಯವೇ ಇಲ್ವೇನೋ ಎಂಬಂತೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ತರಕಾರಿ ಖರೀದಿಸುತ್ತಿದ್ದಾರೆ.
ಲಾಕ್ಡೌನ್ ಮಧ್ಯೆಯೂ ಸಂತೆಯಲ್ಲಿ ಜಾತ್ರೆಗೆ ಸೇರಿದಂತೆ ಸೇರಿದ ಜನರು
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದ ಸಂತೆ
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಸ್ವಗ್ರಾಮದಿಂದ ಕೂಗಳತೆಯಲ್ಲಿರುವ ಸಂತೆ
ಹರದಗಟ್ಟಿ ಗ್ರಾಮದಲ್ಲಿ ಗುಂಪು ಗುಂಪಾಗಿ ಸಂತೆಯಲ್ಲಿ ಜಮಾಯಿಸಿರುವ ಜನತೆ
ಸರ್ಕಾರದ ಆದೇಶಗಳನ್ನ ಪಾಲಿಸದ ಜನತೆ