ಮದ್ಯ ಸಿಕ್ಕ ಖುಷಿಗೆ ದೇವರ ಮುಂದೆ ಬಾಟಲ್ ಇಟ್ಟು ಧ್ಯಾನ ಮಾಡಿದ ಕುಡುಕ...!
ಬೆಂಗಳೂರು(ಮೇ.04): ಮದ್ಯಪ್ರಿಯನೊಬ್ಬ ಮದ್ಯ ಸಿಕ್ಕ ಖುಷಿಗೆ ದೇವರ ಗುಡಿ ಮುಂದೆಯೇ ಬಾಟಲ್ ಇಟ್ಟು ಧ್ಯಾನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ನಲ್ಲಿ ಇಂದು(ಸೋಮವಾರ) ನಡೆದಿದೆ. ತನಗೆ ಸಿಕ್ಕ ಮೊದಲ ಬಾಟಲ್ಅನ್ನ ಹನುಮ ದೇವರ ಮುಂದಿಟ್ಟು ಕೈಮುಗಿದು ನಮಸ್ಕರಿಸಿದ್ದಾನೆ. ಮದ್ಯ ಸಿಕ್ಕಿದ್ದಕ್ಕೆ ಸಂತಸಗೊಂಡು ತನ್ನ ದೇವರ ಬಳಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಲಾಕ್ಡೌನ್ ಆಗಿದ್ದರಿಂದ ಕಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು
ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಬಾರ್ ತೆರೆದ ಸಿಬ್ಬಂದಿ
ಲಾಕ್ಡೌನ್ ಸಡಿಲವಾಗಿದ್ದರಿಂದ ಇಂದಿನಿಂದ(ಸೋಮವಾರ) ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅನುಮತಿ
ಉಡುಪಿಯಲ್ಲಿ ಬಾರ್ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಿರುವ ದೃಶ್ಯ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನೂಕುನುಗ್ಗಲು ಉಂಟಾಗದಂತೆ ಕಂಬಿ ನಿರ್ಮಿಸಿದ ಬಾರ್ ಮಾಲೀಕರು
ಚಿತ್ರದುರ್ಗದಲ್ಲಿ ತೆರೆದ ಬಾರ್, ಪಾರ್ಸೆಲ್ ಮೂಲಕ ಮದ್ಯ ತೆಗೆದುಕೊಂಡು ಹೋಗಲು ಬಂದ ಮದ್ಯ ಪ್ರಿಯರು
ಮಡಿಕೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಪಡೆಯಲು ನಿಂತ ಜನತೆ
ಬಾರ್ಗೆ ಬಂದ ಜನರಿಗೆ ಸ್ಯಾನಿಟೈಸರ್ ಸಿಂಪಡಿಸುತ್ತಿರುವ ಭದ್ರತಾ ಸಿಬ್ಬಂದಿ
ಮದ್ಯ ಪಡೆಯಲು ಸಾಲುಗಟ್ಟಿ ನಿಂತ ಎಣ್ಣೆ ಪ್ರಿಯರು
ತಮ್ಮ ನೆಚ್ಚಿನ ಮದ್ಯದ ಬ್ರಾಂಡ್ ಪಡೆದು ತೆರಳುತ್ತಿರುವ ಯುವಕ