ಕೊರೋನಾ ಆತಂಕ: ವೈರಸ್ ತಗುಲದಿರಲು ಹೊಲದಲ್ಲೇ 21 ದಿನ ಕಳೆದ ಕುಟುಂಬ
ಕೊಪ್ಪಳ(ಏ.16): ಕೊರೋನಾ ವೈರಸ್ ಭಯದಿಂದ ಕುಟುಂಬವೊಂದು ಊರು ತೊರೆದು, ಹೊಲದಲ್ಲಿಯೇ 21 ದಿನಗಳ ವಾಸವನ್ನು ಪೂರ್ಣಗೊಳಿಸಿ ಈಗ ಊರಿಗೆ ಮರಳಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹೇಮಂತ್ ದಳವಾಯಿ ಕುಟುಂಬದ 22 ಜನರು ಊರಿಂದ ಸುಮಾರು 4 ಕಿ.ಮೀ. ದೂರದಲ್ಲಿ ಇರುವ ಹೊಲದಲ್ಲಿಯೇ ಟೆಂಟ್ ಹಾಕಿಕೊಂಡು ಇದ್ದರು.
ಲಾಕ್ಡೌನ್ ಘೋಷಣೆ ಆಯಾಗುತ್ತಿದ್ದಂತೆಯೇ ಗ್ರಾಮಕ್ಕೆ ವಾಪಾಸ್ ಬಂದ ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ದುಡಿಯಲು ಹೋಗಿದ್ದ ನೂರಾರು ಜನರು
ಕೊರೋನಾ ವೈರಸ್ ಭಯದಿಂದ ದಳವಾಯಿ ಕುಟುಂಬ ಹೊಲದಲ್ಲಿ ಇರಲು ನಿರ್ಧರಿಸಿತು
ಪ್ರಧಾನಿ ಆದೇಶ ಪಾಲಿಸಿ ತಾವೇ ಸ್ವಯಂ ನಿರ್ಬಂಧ ಹೇರಿಕೊಂಡು ಹೊಲದಲ್ಲಿ ವಾಸ್ತವ್ಯ
ಹೊಲದಲ್ಲಿ ಟೆಂಟ್ ಹಾಕಿ ಅಲ್ಲಿಯೇ ಅಡುಗೆ ಮಾಡಿಕೊಂಡು ಇದ್ದ ದಳವಾಯಿ ಕುಟುಂಬದ ಸದಸ್ಯರು