ಮಂಗಳೂರಲ್ಲಿ ಗ್ರಹಣ ಗೋಚರಿಸಿದ್ದು ಹೀಗೆ, ಇಲ್ಲಿವೆ ಫೋಟೋಸ್
ದ.ಕ. ಜಿಲ್ಲೆಯಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಮೋಡ ಮತ್ತು ಮಳೆಯ ನಡುವೆ ಸಾಧಾರಣ ಗೋಚರಿಸಿದೆ. ಗ್ರಹಣ ಸ್ಪರ್ಶಿಸಿದ ಕೆಲವು ಹೊತ್ತಿನ ಬಳಿಕ ಮೋಡ ಮುಸುಕಿದ ಆಗಸದಲ್ಲಿ ಗ್ರಹಣ ಆಗಾಗ ಗೋಚರಿಸಿ ಮರೆಯಾಗುತ್ತಿತ್ತು. ಇಲ್ಲಿವೆ ಅಪುಲ್ ಆಳ್ವ ಇರ ಕ್ಲಿಕ್ಕಿಸಿದ ಫೋಟೋಸ್
ಮಧ್ಯಾಹ್ನ ವೇಳೆಗೆ ಮೋಡ ಮರೆಯಾಗುತ್ತಿದ್ದಂತೆ ಗ್ರಹಣ ಪೂರ್ತಿ ಗೋಚರ ಸಾಧ್ಯವಾಯಿತು. ಖಗೋಳ ವೀಕ್ಷಕರು ಗ್ರಹಣ ವೀಕ್ಷಣೆ ನಡೆಸಿದರೆ, ಆಸ್ತಿಕರು ಉಪವಾಸವಿದ್ದು, ಗ್ರಹಣ ಜಪ ನೆರವೇರಿಸಿದರು.
ಹಗಲು ಹೊತ್ತು ಸೂರ್ಯಗ್ರಹಣ ಸಂಭವಿಸಿದರೂ ಮೋಡ ಮತ್ತು ಮಳೆಯಿಂದಾಗಿ ಜಿಲ್ಲೆಯಲ್ಲಿ ಅಷ್ಟಾಗಿ ಗ್ರಹಣದ ಪ್ರತಿಫಲನ ಕಾಣಲು ಸಾಧ್ಯವಾಗಲಿಲ್ಲ.
ಮಂಗಳೂರಿನಲ್ಲಿ ವಿಚಾರವಾದಿಗಳ ಸಂಘಟನೆ ನೇತೃತ್ವದಲ್ಲಿ ನಗರದ ಮಹಾನಗರ ಪಾಲಿಕೆ ಈಜುಕೊಳದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆ ನಡೆಸಲಾಯಿತು.
ಉಡುಪಿಯಲ್ಲಿ ಗ್ರಹಣ ಗೋಚರಿಸಿದ್ದು ಹೀಗೆ
ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದಿಂದಲೂ ಗ್ರಹಣ ಕನ್ನಡಕ ಮೂಲಕ ಸೂರ್ಯಗ್ರಹಣ ವೀಕ್ಷಿಸಲಾಯಿತು. ಗ್ರಹಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವೀಕ್ಷಿಸುವ ಮೂಲಕ ಗ್ರಹಣ ಕಾಲದ ಮೌಢ್ಯಗಳಿಂದ ದೂರ ಇರುವಂತೆ ಸಂದೇಶ ನೀಡಿದರು.