ರೆಡ್ಝೋನ್ ಆಗಿದ್ದ ಮೈಸೂರು ಕೊರೋನಾ ಮುಕ್ತ: ಇವ್ರೇ ನೋಡಿ ಹೀರೋ..!
ಆರಂಭದಲ್ಲಿ ರೆಡ್ ಝೋನ್ ಆಗಿದ್ದ ಮೈಸೂರು ಈಗ ಕೊರೋನಾ ಮುಕ್ತವಾಗಿದೆ. ಇದರ ಹಿಂದೆ ಅಲ್ಲಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಇತರ ಅಧಿಕಾರಿಗಳ, ಜನಪ್ರತಿನಿಧಿಗಳ ಶ್ರಮವಿದೆ. ಇವರೇ ಮೈಸೂರಲ್ಲಿ ಕೊರೋನಾ ವಿರುದ್ಧ ಟೊಂಕ ಕಟ್ಟಿ ನಿಂತ ಹೀರೋ.. ಇಲ್ಲಿವೆ ಫೋಟೋಸ್
ಈಗೋ ಬಿಟ್ಟು ಕೊರೊನಾದ ವಿರುದ್ಧ ಒಗ್ಗಟ್ಟಿನಿಂದ ಸೆಣೆಸಿದ್ದು ನಮಗೆ ಗೆಲುವು ತಂದುಕೊಟ್ಟಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್.
ಕೊರೋನಾ ನಿರ್ನಾಮಕ್ಕೆ ಮೈಸೂರಿನ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳು ಸರ್ವರ ಹಿತಕ್ಕಾಗಿ ದುಡಿದಿವೆ ಎಂದು ವರು ತಿಳಿಸಿದ್ದಾರೆ.
ಮೈಸೂರಿನ ಮಹಾಜನತೆ ಸಹಕಾರದಿಂದ ಕೊರೋನಾ ಗೆಲ್ಲಲು ಸಾಧ್ಯವಾಯಿತು ಎಂದು ಕೊರೋನಾ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಸ್ವ ಪ್ರತಿಷ್ಟೆ ಇಲ್ಲದೆ, ಕೆಲ ಭಿನ್ನಾಭಿಪ್ರಾಯದ ನಡುವೆಯೂ ಸತತ ಶ್ರಮ ಹಾಕಿರುವುದನ್ನು ಜಿಲ್ಲಾಧಿಕಾರಿ ಶ್ಲಾಘಿಸಿದ್ದಾರೆ.
ಭಾರತದಲ್ಲಿ ಲಾಕ್ಡೌನ್ ಆರಂಭವಾಗುವ ಮುನ್ನವೇ ಮೈಸೂರಿನಲ್ಲಿ ಕೊರೋನಾ ಪತ್ತೆಕಾರ್ಯ ಶುರುವಾಗಿತ್ತು ಎಂದು ಅವರ ತಿಳಿಸಿದ್ದಾರೆ.
ಅರಮನೆಯಲ್ಲಿ, ಮೃಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತಿತ್ತು. ಕಟ್ಟು ನಿಟ್ಡಿನ ಕ್ರಮ ಕೈಗೊಳ್ಳಲು ನೆರವಾಗಿದ್ದು, ಪೊಲೀಸ್ ಪೇದೆಗಳು, ಆಶಾ ಕಾರ್ಯಕರ್ತರು ಮತ್ತು ಫಿಲ್ಡ್fನಲ್ಲಿ ಕಾರ್ಯನಿರ್ವಹಿಸಿದರು ಎಂದು ತಿಳಿಸಿದ್ದಾರೆ.
ಡಿಸಿ ಅವರು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೂ ಭೇಟಿ ಕೊಟ್ಟಿದ್ದಾರೆ.
ಜನಪ್ರತಿನಿಧಿಗಳ ಜೊತೆ ಅಗತ್ಯ ಸಭೆಗಳನ್ನು ನಡೆಸಿ, ತುರ್ತಾಗಿ ಜಿಲ್ಲೆಯ ಅಗತ್ಯಗಳಿಗೆ ತಕ್ಕಂತೆ ಅವರು ಕಾರ್ಯ ನಿರ್ವಹಿಸಿದ್ದರು
ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿದರು ಎಂದು ಅವರು ತಿಳಿಸಿದ್ದಾರೆ.
ಎಲ್ಲರ ಪರಿಶ್ರಮ ಮತ್ತು ದೇಶಾಭಿಮಾನವೇ ಕೊರೊನಾ ಗೆಲ್ಲಲು ಕಾರಣ ಎಂದು ಅಭಿರಾಂ ಜಿ. ಶಂಕರ್ ಮನದಾಳದ ಮಾತು ಹಂಚಿಕೊಂಡಿದ್ದಾರೆ.