ಜನತಾ ಕರ್ಫ್ಯೂ ದಿನ ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆಕಾಲಿಟ್ಟ ಜೋಡಿಗಳಿವು..!
ದೇಶಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಈ ನಡುವೆಯೇ ಕೆಲವು ವಿವಾಹಗಳೂ ನೆರವೇರಿದೆ. ಹಲವು ತಿಂಗಳಿನಿಂದ ಪ್ಲಾನ್ ಮಾಡಿದ್ದ, ಮಂಟಪ ಬುಕ್ ಮಾಡಿ ಹಸೆಮಣೆ ಏರಲು ರೆಡಿಯಾಗಿದ್ದ ಜೋಡಿ ಇಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿವೆ ಫೋಟೋಸ್
ಜನತಾ ಕರ್ಫ್ಯೂ ದಿನ ತುಮಕೂರಿನಲ್ಲಿ ನಡೆದ ವಿವಾಹ
ಜನತಾ ಕರ್ಫ್ಯೂ ಮಧ್ಯೆ ತುಮಕೂರಿನಲ್ಲಿ ನಡೆದ ಮಂತ್ರ ಮಾಂಗಲ್ಯ
ಮಧುರೈನಲ್ಲಿ ಕೆಲವೇ ಸಂಬಂಧಿಗಳ ಸಮ್ಮಖದಲ್ಲಿ ನಡೆದ ವಿವಾಹ
ಜನತಾ ಕರ್ಫ್ಯೂ ಪರಿಣಾಮ ಬೆಳಗ್ಗೆ 7 ಗಂಟೆ ಒಳಗೇ ವಿವಾಹ ನೆರವೇರಿಸಲಾಗಿದೆ. ಮೈಸೂರಿನಲ್ಲಿ ಆರುಮುಗಂ ಹಾಗೂ ಇಂದು ಅವರ ವಿವಾಹ ಬೆಳಗಿನ ಜಾವ ನಡೆದಿದೆ.
ಬೆಂಗಳೂರಲ್ಲಿ ಸರಳವಾಗಿ ನಡೆದ ನಮೃತಾ ಹಾಗೂ ಭರತ್ ಪ್ರಸಾದ್ ವಿವಾಹ
ಮದುವೆ ಮಂಟಪವನ್ನು ಅಲಂಕರಿಸಿರುವುದು
ಸಾವಿರಾರು ಜನರ ಸಮ್ಮುಖದಲ್ಲಿ ವಿವಾಹವಾಗಲೆಂದು ಮಂಟಪ ಬುಕ್ ಮಾಡಿ ಎಲ್ಲ ತಯಾರಿ ಮಾಡಿಕೊಂಡಿದ್ದರೂ ಕೆಲವೇ ಕೆಲವು ಜನ ಸಂಬಂಧಿಕರ ನಡುವೆ ಸರಳ ವಿವಾಹ ನಡೆದಿದೆ
ಮದುವೆ ಮಂಟಪ ಮುಂಭಾಗ ಬಿಕೋ ಎನ್ನುತ್ತಿರುವ ರಸ್ತೆ