ಜನತಾ ಕರ್ಫ್ಯೂ: ಬಿಕೋ ಎನ್ನುತ್ತಿದೆ ಕಾಸರಗೋಡು..!
ದೇಶದಾದ್ಯಂತ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಗಡಿನಾಡು ಕಾಸರಗೋಡು ಬಿಕೋ ಎನ್ನುತ್ತಿದೆ. ಕೊರೋನಾ ಭೀತಿಯಿಂದ ಕರ್ನಾಟಕದಿಂದ ಕಾಸರಗೋಡು ಸಂಪರ್ಕಿಸುವ ಸುಮಾರು 16 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇಲ್ಲಿವೆ ಫೋಟೋಸ್
ಗಡಿನಾಡು ಸಂಪೂರ್ಣ ಸ್ಥಬ್ಧವಾಗಿರುವುದು
ಕೊರೋನಾ ಭೀತಿಯಿಂದ ಕರ್ನಾಟಕದಿಂದ ಕಾಸರಗೋಡು ಸಂಪರ್ಕಿಸುವ ಸುಮಾರು 16 ರಸ್ತೆಗಳನ್ನು ಬಂದ್ ಮಾಡಲಾಗಿದೆ.
ನಿತ್ಯ ಗಿಜಿಗಿಡುತ್ತಿದ್ದ ನಗರ ಮೌನವಾಗಿರುವುದು
ಪೆರ್ಲ, ಬದಿಯಡ್ಕ ಸೇರಿ ಕಾಸರಗೋಡಿನ ಎಲ್ಲೆಡೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದೆ.
ಕೇರಳದಲ್ಲಿ ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಕಾಸರಗೋಡಿನಲ್ಲಿ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ
ಖಾಲಿ ಹೊಡೆಯುತ್ತಿರುವ ರಸ್ತೆಗಳು
ಕರ್ನಾಟಕದಿಂದ ಕೇರಳಕ್ಕೆ ಸಂಪೂರ್ಣ ವಾಹನ ಸಂಚಾರ ಸ್ಥಗಿತವಾಗಿದೆ.
ವಿಟ್ಲ ಮೂಲಕ ಕಾಸರಗೋಡು ಸಂಪರ್ಕಿಸುವ ಸಾರಡ್ಕ ಚೆಕ್ಪೋಸ್ಟ್ಗೆ ಶನಿವಾರವೇ ಗೇಟ್ ಹಾಕಿ ಬೀಗ ಜಡಿಯಲಾಗಿತ್ತು.
ಪುತ್ತೂರಿನಿಂದ ಪಾಣಾಜೆ ಮೂಲಕವಾಗಿ ಕೇರಳ ಸಂಪರ್ಕಿಸುವ ಸ್ವರ್ಗ ಚೆಕ್ಪೋಸ್ಟ್ನ್ನು ಮುಚ್ಚಿರುವುದು