ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯ ಸಂಭ್ರಮ ಹೀಗಿತ್ತು..!
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಐದು ದಿನಗಳ ಕಾಲ ಜರುಗುವ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನ ಚಂದ್ರಮಂಡಲೋತ್ಸವವನ್ನು ಶುಕ್ರವಾರ ರಾತ್ರಿ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನದ ಚನ್ನರಾಜೇ ಅರಸು ಅವರು ಕರ್ಪೂರದ ಆರತಿ ಬೆಳಗಿ ಚಂದ್ರಮಂಡಲೋತ್ಸವಕ್ಕೆ ಧಾರ್ಮಿಕವಾಗಿ ಪೂಜಾ ಕಾರ್ಯಗಳು ನೆರೆವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಐದು ದಿನಗಳ ಕಾಲ ಜರುಗುವ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನ ಚಂದ್ರಮಂಡಲೋತ್ಸವವನ್ನು ಶುಕ್ರವಾರ ರಾತ್ರಿ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನದ ಚನ್ನರಾಜೇ ಅರಸು ಅವರು ಕರ್ಪೂರದ ಆರತಿ ಬೆಳಗಿ ಚಂದ್ರಮಂಡಲೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಚಿಕ್ಕಲ್ಲೂರಿನಲ್ಲಿರುವ ಹಳೆ ಮಠದಿಂದ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪರಂಪರೆಯಂತೆ ಮಠದ ಬಸವ, ಬಾರಿ ಕಂಡಾಯ ಸೇರಿದಂತೆ ನೀಲಗಾರರು ಕಂಡಾಯಗಳನ್ನು ಹೊತ್ತು ಸಾಗುತ್ತಾರೆ.
ಹನೂರು ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಜಾತ್ರೆ ಅತಿದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಯ ಮೊದಲ ದಿನದ ಚಂದ್ರಮಂಡಲೋತ್ಸವನ್ನು ನೋಡಲು ಕ್ರೇತ್ರ ವ್ಯಾಪ್ತಿಯ ಸುತ್ತೇಳು ಗ್ರಾಮಸ್ಥರು ಸೇರಿದಂತೆ ರಾಜ್ಯದ ಹಲವೆಡೆಯಿಂದ ಜನರು ಆಗಮಿಸುತ್ತಾರೆ.
ಭಕ್ತ ಸಮೂಹ ಚಂದ್ರಮಂಡಲಕ್ಕೆ ಹಣ್ಣು ಜವನ, ಹೂವು, ಕಾಸು ಸೇರಿದಂತೆ ಧವಸ ಧಾನ್ಯಗಳಾದ ಎಳ್ಳು, ರಾಗಿ, ಭತ್ತ, ಜೋಳ ಹಾಗೂ ಆಹಾರ ಪದಾರ್ಥ ಕಾಳುಗಳನ್ನು ಜ್ಯೋತಿಯಂತೆ ಬೆಳಗುವ ಚಂದ್ರಮಂಡಲಕ್ಕೆ ಎಸೆದು ತಮ್ಮ ಹರಕೆಯನ್ನು ತೀರಿಸಿದರು.
ಚಂದ್ರಮಂಡಲ ಧಗಧಗನೆ ಉರಿಯುವಾಗ ಯಾವ ಕಡೆ ಹೆಚ್ಚು ವಾಲುತ್ತದೆಯೋ ಆ ಭಾಗಕ್ಕೆ ಈ ವರ್ಷ ಹೆಚ್ಚು ಮಳೆ ಬೀಳುತ್ತದೆ ಎಂಬುದು ಸಿದ್ದಪ್ಪಾಜಿಯ ಭಕ್ತರ ನಂಬಿಕೆಯಾಗಿದೆ.
ವಿವಿಧ ತರದ ಹೂಗಳಿಂದ ಪೂಜಾ ಸ್ಥಳ ಅಲಂಕರಿಸಿರುವುದು.
ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಐದು ದಿನಗಳ ಚಿಕ್ಕಲ್ಲೂರು ಜಾತ್ರೆಗೆ ಚಾಲನೆ ದೊರೆತಿದ್ದು, ಗ್ರಾಮಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಚಿಕ್ಕಲ್ಲೂರು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಪಹರೆ ಏರ್ಪಡಿಸಿದೆ.
ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಎಲ್ಲ ಸಾಮಗ್ರಿಗಳನ್ನು ಒಂದುಗೂಡಿಸಿ ಚಂದ್ರಮಂಡಲ ಸಿದ್ದಪಡಿಸುವ ಮುನ್ನ ತಂಡದ ಸದಸ್ಯರು ಮಂಟೇಸ್ವಾಮಿ, ಸಿದ್ದಪ್ಪಾಜಿಯನ್ನು ನೆನೆದು ಚಂದ್ರಮಂಡಲವನ್ನು ಸಿದ್ದಪಡಿಸಿದ್ದರು.
ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಹರಕೆ ತೀರಿಸಿಕೊಂಡರು.