MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Rice Bowl City of Karnataka: ಗಂಗಾವತಿಯಿಂದ ತಮಿಳುನಾಡಿಗೆ ಬತ್ತ ಕಟಾವು ಯಂತ್ರ ಸಾಗಣೆ

Rice Bowl City of Karnataka: ಗಂಗಾವತಿಯಿಂದ ತಮಿಳುನಾಡಿಗೆ ಬತ್ತ ಕಟಾವು ಯಂತ್ರ ಸಾಗಣೆ

ಹುಬ್ಬಳ್ಳಿ(ಜ.21):  ನೈರುತ್ಯ ರೈಲ್ವೆಯ(South Western Railway) ಹುಬ್ಬಳ್ಳಿ(Hubballi) ವಿಭಾಗವು ಮೊಟ್ಟ ಮೊದಲ ಬಾರಿಗೆ ಗಂಗಾವತಿಯಿಂದ(Gangavathi) ತಮಿಳುನಾಡಿನ(Tamil Nadu) ಮನ್ನಾರ್‌ಗುಡಿಗೆ 32 ಡಿಬಿಕೆಎಂ ವ್ಯಾಗನ್‌ಗಳಲ್ಲಿ 92 ಬತ್ತ ಕಟಾವು ಯಂತ್ರಗಳು ಮತ್ತು 3 ಮಿನಿ ಗೂಡ್ಸ್‌ ಕ್ಯಾರಿಯರ್‌ ವಾಹನಗಳನ್ನು ಸಾಗಣೆ ಮಾಡಿತು.

1 Min read
Kannadaprabha News | Asianet News
Published : Jan 21 2022, 11:52 AM IST| Updated : Jan 21 2022, 11:58 AM IST
Share this Photo Gallery
  • FB
  • TW
  • Linkdin
  • Whatsapp
14

ರೈತರ(Farmers) ಸಮೂಹವೊಂದು ಗಂಗಾವತಿಯಿಂದ 916 ಕಿ.ಮೀ. ದೂರದ ಮನ್ನಾರ್‌ಗುಡಿಗೆ(Manarkudi) ಯಂತ್ರಗಳನ್ನು ಕಳುಹಿಸುತ್ತಿದೆ. ಇದರಿಂದ ರೈಲ್ವೆಗೆ 10.5 ಲಕ್ಷ ಆದಾಯ ದೊರೆತಿದ್ದು ರೈತರಿಗೂ ಅನುಕೂಲಕರ, ವೇಗದ ಮತ್ತು ದಕ್ಷ ಸಾರಿಗೆ ಸೇವೆ ಲಭಿಸಿದೆ.

24

ಈ ಭಾಗದ ರೈತರು, ಕೈಗಾರಿಕೆಗಳಿಗೆ ತಮ್ಮ ಸರಕುಗಳನ್ನು ದೇಶಾದ್ಯಂತ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ ವಿಭಾಗವು ಗಂಗಾವತಿಯಲ್ಲಿ ಹೊಸ ಸರಕು ಲೋಡಿಂಗ್‌ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ. ಕಳೆದ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು 10 ರೇಕ್‌ ಅಕ್ಕಿಯನ್ನು (ಒಟ್ಟು 13,169 ಟನ್‌) ಗಂಗಾವತಿಯಿಂದ ಗುವಾಹಟಿ ಸಮೀಪದ ಆಜರಾ, ತ್ರಿಪುರಾದ ಜಿರನೀಯಾ, ಪಶ್ಚಿಮ ಬಂಗಾಳದ ತಾರಕೇಶ್ವರ್‌ ಮತ್ತು ಸಾಂಕರಾಯಿಲ್‌ ಮೊದಲಾದ ಸ್ಥಳಗಳಿಗೆ ಸಾಗಣೆ ಮಾಡಲಾಗಿದೆ.

34

ರೈತರು, ಕೈಗಾರಿಕೆಗಳು ಮತ್ತು ವರ್ತಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಗಂಗಾವತಿಯಿಂದ ಈ ಸರಕು ಸಾಗಣೆಯಾಗುವಲ್ಲಿ ವ್ಯವಹಾರ ಅಭಿವೃದ್ಧಿ ಘಟಕವು ಪ್ರಮುಖ ಪಾತ್ರವನ್ನು ವಹಿಸಿದೆ.

44

ಗಂಗಾವತಿ ಮತ್ತು ಖಜ್ಜಿಡೋಣಿಯಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಸರಕು ಟರ್ಮಿನಲ್‌ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಕೈಗಾರಿಕೆಗಳಿಗೆ ಕರೆ ನೀಡಿದ್ದಾರೆ. ಕಾರಟಗಿಯಲ್ಲಿಯೂ ಒಂದು ಹೊಸ ಗೂಡ್ಸ್‌ ಟರ್ಮಿನಲ್‌(Goods Terminal) ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ತಮಿಳುನಾಡು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved