MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Nelamangala Accident: ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು, ನನಗೆ ತುಂಬಾ ನೋವು ಆಗ್ತಿದೆ: ಚಾಲಕ ಆರಿಫ್‌

Nelamangala Accident: ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು, ನನಗೆ ತುಂಬಾ ನೋವು ಆಗ್ತಿದೆ: ಚಾಲಕ ಆರಿಫ್‌

ಕಾರ್ ಮೇಲೆ‌ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ‌ ಬಚಾವ್ ಮಾಡಲು ಹೋದೆ.  ಮುಂದೆ  ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಸಾವು ಕಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಕಂಟೇನರ್‌ ಚಾಲಕ ಆರಿಫ್‌ ಹೇಳಿದ್ದಾನೆ. 

2 Min read
Govindaraj S
Published : Dec 21 2024, 05:41 PM IST
Share this Photo Gallery
  • FB
  • TW
  • Linkdin
  • Whatsapp
16

ಬೆಂಗಳೂರು (ಡಿ.21): ನೆಲಮಂಗಲದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡ ಚಂದ್ರಮ್ ಯಾಗಪ್ಪಗೋಳ್ ಒಬ್ಬ ಐಟಿ ಉದ್ಯಮಿ. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾಲೀಕರಾಗಿದ್ದ ಇವರು, 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತರಾಗಿದ್ದರು. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತವಾಯಿತು. ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾದರು. 

26

ಇದರ ನಡುವೆ ಆಸ್ಪತ್ರೆಗೆ ದಾಖಲಾಗಿರುವ ಕಂಟೇನರ್‌ ಚಾಲಕ್‌ ಆರಿಫ್‌ ನೆಲಮಂಗಲದಲ್ಲಿ ಅಪಘಾತ ಹೇಗಾಯ್ತು ಅನ್ನೋದರ ವಿವರವನ್ನು ನೀಡಿದ್ದಾರೆ. 'ದಾಬಸ್‌ಪೇಟೆಯಿಂದ ಬೆಂಗಳೂರಿನ ಬೈಪಾಸ್‌ ಕಡೆಗೆ ಬರ್ತಿದ್ದೆ ಬಲಬದಿಯಿಂದ ಗಾಡಿ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಕಂಟೇನರ್‌ ಚಾಲಕ ಆರಿಫ್‌ ಹೇಳಿದ್ದಾನೆ. 

36

ಈ ವೇಳೆ ನನ್ನ ಎದುರುಗಡೆ ನಾನು ಗಾಡಿಯನ್ನು ನೋಡಿದೆ. ನಾನು ನಿಧಾನ, ನಿಧಾನವಾಗಿ ಬ್ರೇಕ್‌ ಹಾಕುತ್ತಲೇ ಹೋದೆ. ನನ್ನ ಎದುರಿಗೆ ಇದ್ದ ಕಾರ್‌ನವನು ಅರ್ಜೆಂಟ್‌ ಆಗಿ ಬ್ರೇಕ್‌ ಹಾಕಿ ಬಿಟ್ಟ. ನನ್ನ ಮುಂದಿದ್ದ ಕಾರ್‌ಗೆ ಗುದ್ದಬಾರದು, ಅವನನ್ನು ಸೇಫ್‌ ಮಾಡಲು ಹೋಗಿ, ಸ್ಟೇರಿಂಗ್‌ ಅನ್ನು ಬಲಗಡೆಗೆ ಎಳೆದುಕೊಂಡೆ ಎಂದು ಹೇಳಿದ್ದಾರೆ. 
 

46

ಈ ವೇಳೆ ಇನ್ನೊಂದು ಕಡೆಯಿಂದಲೂ ದೊಡ್ಡ ಕ್ಯಾಂಟರ್‌ ಬರುತ್ತಿರೋದನ್ನು ನೋಡಿದೆ.  ಟ್ರಕ್‌ಗೆ ಗುದ್ದಬಾರದು ಎಂದು ಮತ್ತೊಮ್ಮೆ ಸ್ಟೇರಿಂಗ್‌ ಲೆಫ್ಟ್‌ಗೆ ಎಳೆದುಕೊಂಡೆ, ಈ ವೇಳೆ ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು.  ನನ್ನ ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು. ನನಗೆ ತುಂಬಾ ನೋವು ಆಗ್ತಿದೆ. ಅಲ್ಲಿ ಏನ್ ಆಯ್ತು ಅಮೇಲೆ ಅನ್ನೋದು ಗೊತ್ತಿಲ್ಲ. 

56

ಕಾರ್ ಮೇಲೆ‌ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ‌ ಬಚಾವ್ ಮಾಡಲು ಹೋದೆ. ಮುಂದೆ  ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಸಾವು ಕಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
 

66

ಚಂದ್ರಮ್‌ ಮೂಲತಃ ಮಹಾರಾಷ್ಟ್ರದವರಾಗಿದ್ದು, ಅವರ ಕುಟುಂಬ ವಿಜಯಪುರದಲ್ಲಿ ನೆಲೆಸಿದೆ. ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿಯವರಾಗಿದ್ದು, ಅವರ ತಂದೆ-ತಾಯಿ ಅಲ್ಲಿಯೇ ನೆಲೆಸಿದ್ದಾರೆ. ಇಲ್ಲಿಯವರೆಗೂ ತಮ್ಮ ಮಗ, ಸೊಸೆ, ಮೊಮ್ಮಕ್ಕಳು, ಮಗಳು ಹಾಗೂ ಆಕೆಯ ಮಗ ಸಾವು ಕಂಡಿರುವ ಸುದ್ದಿ ವೃದ್ಧ ತಂದೆ ತಾಯಿಗೆ ತಿಳಿದಿಲ್ಲ.
 

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಅಪಘಾತ
ಬೆಂಗಳೂರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved