ನಂಜನಗೂಡು: ರಸ್ತೆ ಅಪಘಾತದಲ್ಲಿ ರಾಜಕಾರಣಿ ಮಗ ಸಾವು
ಮೈಸೂರು(ಮೇ 18) ನಂಜನಗೂಡು ನಗರಸಭೆ ಸದಸ್ಯನ ಮಗ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಮೈಸೂರು ಊಟಿ ಹೈವೆ ರಸ್ತೆಯ ಮಲ್ಲನ ಮೂಲೆ ಬಳಿ ಘಟನೆ ನಡೆದಿದೆ. ಬುಲೆಟ್ನಲ್ಲಿ ತೆರಳುತ್ತಿದ್ದ ಯುವಕನಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಸಾವನ್ನಪ್ಪದ 30 ವರ್ಷದ ಪ್ರವೀಣ್ ಅಸುನೀಗಿದ್ದಾರೆ.
ರಸ್ತೆ ಅಪಘಾತ ಪ್ರಾಣ ಕಸಿದುಕೊಂಡು ಹೋಯ್ತು.
ಮೈಸೂರು ಊಟಿ ಹೈವೆ ರಸ್ತೆಯ ಮಲ್ಲನ ಮೂಲೆ ಬಳಿ ಅಪಘಾತ
ಪ್ರವೀಣ್ ನಗರಸಭಾ ಸದಸ್ಯ ಮಹೇಶ್ ಕುಮಾರ್ ಅವರ ಒಬ್ಬನೇ ಮಗ.
ನಂಜನಗೂಡು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ