MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಯಾದಗಿರಿಯಲ್ಲಿ ತಗ್ಗಿದ ಪ್ರವಾಹ: ಮಂತ್ರಿಗಳೂ ಬರ್‍ಲಿಲ್ಲ, ಪರಿಹಾರವೂ ಸಿಕ್ಕಿಲ್ಲ..!

ಯಾದಗಿರಿಯಲ್ಲಿ ತಗ್ಗಿದ ಪ್ರವಾಹ: ಮಂತ್ರಿಗಳೂ ಬರ್‍ಲಿಲ್ಲ, ಪರಿಹಾರವೂ ಸಿಕ್ಕಿಲ್ಲ..!

ಆನಂದ್ ಎಂ. ಸೌದಿಯಾದಗಿರಿ(ಅ.22): ಸಕಾಲಕ್ಕೆ ಬ್ರಿಡ್ಜ್ ಕಂ ಬ್ಯಾರೇಜಿನ ಗೇಟುಗಳ ತೆರೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ತಪ್ಪಿನಿಂದಾಗಿ, ಪ್ರವಾಹದ ಹಿನ್ನೀರು ನುಗ್ಗಿ ಹಾನಿ ಮಾಡಿದ್ದ ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಪೀಡಿತ ಪ್ರದೇಶದಲ್ಲೀಗ ನೀರವ ಮೌನ ಮಡುಗಟ್ಟಿದೆ. 

2 Min read
Author : Kannadaprabha News | Asianet News
| Updated : Oct 22 2020, 11:15 AM IST
Share this Photo Gallery
  • FB
  • TW
  • Linkdin
  • Whatsapp
16
<p>ಸನ್ನತಿಯ ಬ್ಯಾರೇಜಿನಿಂದ ಭೀಮಾ ನದಿಗೆ ಅ.15 ರಂದು ಬೆಳಿಗ್ಗೆ ಬಿಡುಗಡೆ ಮಾಡಿದ ಸುಮಾರು 3.20 ಲಕ್ಷ ಸಾವಿರ ಕ್ಯೂಸೆಕ್ ನೀರು ಹೊರಹರಿವು ಹೆಚ್ಚಿಸುತ್ತ ಹೋದಂತೆ, ನಾಯ್ಕಲ್ ಗ್ರಾಮದ ಬೈಪಾಸ್ ರಸ್ತೆಯಲ್ಲಿನ ನೂರಾರು ಮನೆಗಳಲ್ಲಿ ನೀರು ಜಮೆಯಾಗತೊಡಗಿತ್ತು. ನೋಡನೋಡುತ್ತಲೇ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸಂಗ್ರಹವಾಗಿ, ಸಂಜೆಯ ವೇಳೆಗ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಜೀವ ಬದುಕಿದರೆ ಸಾಕು ಎಂದು ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಕೆಲವರನ್ನು ಕಾಳಜಿ ಕೇಂದ್ರದಲ್ಲಿರಿಸಲಾಗಿತ್ತು.</p>

<p>ಸನ್ನತಿಯ ಬ್ಯಾರೇಜಿನಿಂದ ಭೀಮಾ ನದಿಗೆ ಅ.15 ರಂದು ಬೆಳಿಗ್ಗೆ ಬಿಡುಗಡೆ ಮಾಡಿದ ಸುಮಾರು 3.20 ಲಕ್ಷ ಸಾವಿರ ಕ್ಯೂಸೆಕ್ ನೀರು ಹೊರಹರಿವು ಹೆಚ್ಚಿಸುತ್ತ ಹೋದಂತೆ, ನಾಯ್ಕಲ್ ಗ್ರಾಮದ ಬೈಪಾಸ್ ರಸ್ತೆಯಲ್ಲಿನ ನೂರಾರು ಮನೆಗಳಲ್ಲಿ ನೀರು ಜಮೆಯಾಗತೊಡಗಿತ್ತು. ನೋಡನೋಡುತ್ತಲೇ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸಂಗ್ರಹವಾಗಿ, ಸಂಜೆಯ ವೇಳೆಗ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಜೀವ ಬದುಕಿದರೆ ಸಾಕು ಎಂದು ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಕೆಲವರನ್ನು ಕಾಳಜಿ ಕೇಂದ್ರದಲ್ಲಿರಿಸಲಾಗಿತ್ತು.</p>

ಸನ್ನತಿಯ ಬ್ಯಾರೇಜಿನಿಂದ ಭೀಮಾ ನದಿಗೆ ಅ.15 ರಂದು ಬೆಳಿಗ್ಗೆ ಬಿಡುಗಡೆ ಮಾಡಿದ ಸುಮಾರು 3.20 ಲಕ್ಷ ಸಾವಿರ ಕ್ಯೂಸೆಕ್ ನೀರು ಹೊರಹರಿವು ಹೆಚ್ಚಿಸುತ್ತ ಹೋದಂತೆ, ನಾಯ್ಕಲ್ ಗ್ರಾಮದ ಬೈಪಾಸ್ ರಸ್ತೆಯಲ್ಲಿನ ನೂರಾರು ಮನೆಗಳಲ್ಲಿ ನೀರು ಜಮೆಯಾಗತೊಡಗಿತ್ತು. ನೋಡನೋಡುತ್ತಲೇ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸಂಗ್ರಹವಾಗಿ, ಸಂಜೆಯ ವೇಳೆಗ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, ಜೀವ ಬದುಕಿದರೆ ಸಾಕು ಎಂದು ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಕೆಲವರನ್ನು ಕಾಳಜಿ ಕೇಂದ್ರದಲ್ಲಿರಿಸಲಾಗಿತ್ತು.

26
<p>ಬುಧವಾರ ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ, ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಆತಂಕದಲ್ಲೇ ಒಬ್ಬೊಬ್ಬರಾಗಿ ಮನೆ ಸೇರುತ್ತಿರುವುದು ಕಂಡುಬಂತು. ನೀರು ನುಗ್ಗಿ, ಕೆಸರುಮಯವಾಗಿದ್ದ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಲ್ಲಿನ ನಿವಾಸಿಗಳು ಹರಸಾಹಸ ಪಡುತ್ತಿದ್ದರು. ಪ್ರವಾಹದ ವೇಳೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಜನ-ಜಾನುವಾರುಗಳು ಮನೆಗಳಿಗೆ ಎಡತಾಕುತ್ತಿರುವುದು ಕಂಡು ಬಂತು.</p>

<p>ಬುಧವಾರ ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ, ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಆತಂಕದಲ್ಲೇ ಒಬ್ಬೊಬ್ಬರಾಗಿ ಮನೆ ಸೇರುತ್ತಿರುವುದು ಕಂಡುಬಂತು. ನೀರು ನುಗ್ಗಿ, ಕೆಸರುಮಯವಾಗಿದ್ದ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಲ್ಲಿನ ನಿವಾಸಿಗಳು ಹರಸಾಹಸ ಪಡುತ್ತಿದ್ದರು. ಪ್ರವಾಹದ ವೇಳೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಜನ-ಜಾನುವಾರುಗಳು ಮನೆಗಳಿಗೆ ಎಡತಾಕುತ್ತಿರುವುದು ಕಂಡು ಬಂತು.</p>

ಬುಧವಾರ ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ, ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳು ಆತಂಕದಲ್ಲೇ ಒಬ್ಬೊಬ್ಬರಾಗಿ ಮನೆ ಸೇರುತ್ತಿರುವುದು ಕಂಡುಬಂತು. ನೀರು ನುಗ್ಗಿ, ಕೆಸರುಮಯವಾಗಿದ್ದ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಲ್ಲಿನ ನಿವಾಸಿಗಳು ಹರಸಾಹಸ ಪಡುತ್ತಿದ್ದರು. ಪ್ರವಾಹದ ವೇಳೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಜನ-ಜಾನುವಾರುಗಳು ಮನೆಗಳಿಗೆ ಎಡತಾಕುತ್ತಿರುವುದು ಕಂಡು ಬಂತು.

36
<p>ಅನೇಕರ ಮನೆಗಳು ಬಿರುಕು ಬಿಟ್ಟಿವೆ. ನೀರಿನಿಂದಾಗಿ ಮನೆಗಳಲ್ಲಿ ಕೆಸರುಗಟ್ಟಿದೆ. ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಆಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇಲ್ಲಿ ಕಾಲಿಡಲೇ ಇಲ್ಲ. ರಸ್ತೆ ಮೇಲೆ ಕೆಲ ಕ್ಷಣಗಳ ಕಾಲ ನಿಂತು ಹೋಗಿದ್ದಾರೆ. ಇಂತಹವರಿಂದ ನಮಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಕನ್ನಡಪ್ರಭದೆದುರು ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ಮೆಹಬೂಬ್ ಸಾಬ್, ನಮ್ಮ ಪಾಡು ಹೇಳತೀರದು ಎಂದರು.</p>

<p>ಅನೇಕರ ಮನೆಗಳು ಬಿರುಕು ಬಿಟ್ಟಿವೆ. ನೀರಿನಿಂದಾಗಿ ಮನೆಗಳಲ್ಲಿ ಕೆಸರುಗಟ್ಟಿದೆ. ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಆಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇಲ್ಲಿ ಕಾಲಿಡಲೇ ಇಲ್ಲ. ರಸ್ತೆ ಮೇಲೆ ಕೆಲ ಕ್ಷಣಗಳ ಕಾಲ ನಿಂತು ಹೋಗಿದ್ದಾರೆ. ಇಂತಹವರಿಂದ ನಮಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಕನ್ನಡಪ್ರಭದೆದುರು ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ಮೆಹಬೂಬ್ ಸಾಬ್, ನಮ್ಮ ಪಾಡು ಹೇಳತೀರದು ಎಂದರು.</p>

ಅನೇಕರ ಮನೆಗಳು ಬಿರುಕು ಬಿಟ್ಟಿವೆ. ನೀರಿನಿಂದಾಗಿ ಮನೆಗಳಲ್ಲಿ ಕೆಸರುಗಟ್ಟಿದೆ. ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಆಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇಲ್ಲಿ ಕಾಲಿಡಲೇ ಇಲ್ಲ. ರಸ್ತೆ ಮೇಲೆ ಕೆಲ ಕ್ಷಣಗಳ ಕಾಲ ನಿಂತು ಹೋಗಿದ್ದಾರೆ. ಇಂತಹವರಿಂದ ನಮಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಕನ್ನಡಪ್ರಭದೆದುರು ಬೇಸರ ವ್ಯಕ್ತಪಡಿಸಿದ ಸಂತ್ರಸ್ತ ಮೆಹಬೂಬ್ ಸಾಬ್, ನಮ್ಮ ಪಾಡು ಹೇಳತೀರದು ಎಂದರು.

46
<p>ನವೆಂಬರ್ 11 ರಂದು ನಡೆಯಲಿರುವ ಮಗಳ ಮದುವೆಗೆಂದು ಗ್ರಾಮದ ರಷೀದ್-ಸಾಬೇರ್ ದಂಪತಿ ಸಾಮಾನುಗಳನ್ನು ತಂದಿದ್ದರು. ಮನೆ ಮುಳುಗುತ್ತಿದ್ದಂತೆಯೇ, ಆ ಎಲ್ಲವನ್ನೂ ಮಾಳಿಗೆಯ ಮೇಲಿಟ್ಟು ಸಂರಕ್ಷಿಸುವ ಯತ್ನ ಮಾಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆಯೇ ಹೊರಗೋಡಿ ಹೋದಾಗ, ಮನೆಯಲ್ಲಿಟ್ಟಿದ್ದ ಎರಡು ತೊಲೆ ಬಂಗಾರ ನೀರುಪಾಲಾಗಿದೆ ಎಂದು ಸಂತ್ರಸ್ತ ಅಬ್ಬಾಸ್ ಬೀ ಕಣ್ಣೀರಾದ.&nbsp;</p>

<p>ನವೆಂಬರ್ 11 ರಂದು ನಡೆಯಲಿರುವ ಮಗಳ ಮದುವೆಗೆಂದು ಗ್ರಾಮದ ರಷೀದ್-ಸಾಬೇರ್ ದಂಪತಿ ಸಾಮಾನುಗಳನ್ನು ತಂದಿದ್ದರು. ಮನೆ ಮುಳುಗುತ್ತಿದ್ದಂತೆಯೇ, ಆ ಎಲ್ಲವನ್ನೂ ಮಾಳಿಗೆಯ ಮೇಲಿಟ್ಟು ಸಂರಕ್ಷಿಸುವ ಯತ್ನ ಮಾಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆಯೇ ಹೊರಗೋಡಿ ಹೋದಾಗ, ಮನೆಯಲ್ಲಿಟ್ಟಿದ್ದ ಎರಡು ತೊಲೆ ಬಂಗಾರ ನೀರುಪಾಲಾಗಿದೆ ಎಂದು ಸಂತ್ರಸ್ತ ಅಬ್ಬಾಸ್ ಬೀ ಕಣ್ಣೀರಾದ.&nbsp;</p>

ನವೆಂಬರ್ 11 ರಂದು ನಡೆಯಲಿರುವ ಮಗಳ ಮದುವೆಗೆಂದು ಗ್ರಾಮದ ರಷೀದ್-ಸಾಬೇರ್ ದಂಪತಿ ಸಾಮಾನುಗಳನ್ನು ತಂದಿದ್ದರು. ಮನೆ ಮುಳುಗುತ್ತಿದ್ದಂತೆಯೇ, ಆ ಎಲ್ಲವನ್ನೂ ಮಾಳಿಗೆಯ ಮೇಲಿಟ್ಟು ಸಂರಕ್ಷಿಸುವ ಯತ್ನ ಮಾಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆಯೇ ಹೊರಗೋಡಿ ಹೋದಾಗ, ಮನೆಯಲ್ಲಿಟ್ಟಿದ್ದ ಎರಡು ತೊಲೆ ಬಂಗಾರ ನೀರುಪಾಲಾಗಿದೆ ಎಂದು ಸಂತ್ರಸ್ತ ಅಬ್ಬಾಸ್ ಬೀ ಕಣ್ಣೀರಾದ. 

56
<p>ಸಂತ್ರಸ್ತರ ನೆರವಿಗಾಗಿ ತುರ್ತು ಪರಿಹಾರ ಎಂದು ಸರ್ಕಾರ 10 ಸಾವಿರ ರು.ಗಳ ನೆರವು ಘೋಷಿಸಿದೆ. ಆದರೆ, ಇಲ್ಲಿವರೆಗೂ (ಬುಧವಾರ, ಅ.21) ಯಾವ ಪರಿಹಾರನೂ ಇಲ್ಲ. ಹಣ ಅಕೌಂಟಿಗೆ ಜಮೆ ಮಾಡಲಾಗುತ್ತದೆ ಎಂದಿದ್ದರು. ಆಡಳಿತ ಪರಿಹಾರ ಕೊಟ್ಟಿದೆ ಎನ್ನುತ್ತಿದೆ. ಆದರೆ, ವಾರವಾಯ್ತು ಕಾಣ್ತಿಲ್ಲ ಎನ್ನುವ ಮೈನೋದ್ದೀನ್, ನಾಯ್ಕಲ್ ಗ್ರಾಮದ ಸಂತ್ರಸ್ತರಿಗೆ ಈವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ದೂರಿದ್ದಾರೆ.</p>

<p>ಸಂತ್ರಸ್ತರ ನೆರವಿಗಾಗಿ ತುರ್ತು ಪರಿಹಾರ ಎಂದು ಸರ್ಕಾರ 10 ಸಾವಿರ ರು.ಗಳ ನೆರವು ಘೋಷಿಸಿದೆ. ಆದರೆ, ಇಲ್ಲಿವರೆಗೂ (ಬುಧವಾರ, ಅ.21) ಯಾವ ಪರಿಹಾರನೂ ಇಲ್ಲ. ಹಣ ಅಕೌಂಟಿಗೆ ಜಮೆ ಮಾಡಲಾಗುತ್ತದೆ ಎಂದಿದ್ದರು. ಆಡಳಿತ ಪರಿಹಾರ ಕೊಟ್ಟಿದೆ ಎನ್ನುತ್ತಿದೆ. ಆದರೆ, ವಾರವಾಯ್ತು ಕಾಣ್ತಿಲ್ಲ ಎನ್ನುವ ಮೈನೋದ್ದೀನ್, ನಾಯ್ಕಲ್ ಗ್ರಾಮದ ಸಂತ್ರಸ್ತರಿಗೆ ಈವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ದೂರಿದ್ದಾರೆ.</p>

ಸಂತ್ರಸ್ತರ ನೆರವಿಗಾಗಿ ತುರ್ತು ಪರಿಹಾರ ಎಂದು ಸರ್ಕಾರ 10 ಸಾವಿರ ರು.ಗಳ ನೆರವು ಘೋಷಿಸಿದೆ. ಆದರೆ, ಇಲ್ಲಿವರೆಗೂ (ಬುಧವಾರ, ಅ.21) ಯಾವ ಪರಿಹಾರನೂ ಇಲ್ಲ. ಹಣ ಅಕೌಂಟಿಗೆ ಜಮೆ ಮಾಡಲಾಗುತ್ತದೆ ಎಂದಿದ್ದರು. ಆಡಳಿತ ಪರಿಹಾರ ಕೊಟ್ಟಿದೆ ಎನ್ನುತ್ತಿದೆ. ಆದರೆ, ವಾರವಾಯ್ತು ಕಾಣ್ತಿಲ್ಲ ಎನ್ನುವ ಮೈನೋದ್ದೀನ್, ನಾಯ್ಕಲ್ ಗ್ರಾಮದ ಸಂತ್ರಸ್ತರಿಗೆ ಈವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ದೂರಿದ್ದಾರೆ.

66
<p>ಮಳೆ-ಚಳಿಯೆನ್ನದೆ ಮನೆಯಿಂದ ಹೊರಬಂದಿರುವ ಗೂಡೂಮಾಬೀ ಸಾಕಿದ ದನ ಹಾಗೂ ಕುರಿಗಳ ಜೀವ ರಕ್ಷಿಸಲು ಹೆಣಗಾಡುತ್ತಿದ್ದಾಳೆ. ಬಾಷುಮಿಯಾ ಮನೆ ಕುಸಿದು ಬಿದ್ದಿದೆ, ಶೇಖಪ್ಪನ ಎಂಟು ಎಕರೆ ಹೊಲದಲ್ಲಿನ ಭತ್ತ ನೆಲಕಚ್ಚಿದೆ. ಇಲ್ಲಿನ 630 ಹೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಪ್ರವಾಹ ಪಾಲಾಗಿದೆ. ಎಲ್ಲರೂ ಹೊಸ ಜೀವನ ಕಟ್ಟಿಕೊಳ್ಳುವಂತಿದೆ.</p>

<p>ಮಳೆ-ಚಳಿಯೆನ್ನದೆ ಮನೆಯಿಂದ ಹೊರಬಂದಿರುವ ಗೂಡೂಮಾಬೀ ಸಾಕಿದ ದನ ಹಾಗೂ ಕುರಿಗಳ ಜೀವ ರಕ್ಷಿಸಲು ಹೆಣಗಾಡುತ್ತಿದ್ದಾಳೆ. ಬಾಷುಮಿಯಾ ಮನೆ ಕುಸಿದು ಬಿದ್ದಿದೆ, ಶೇಖಪ್ಪನ ಎಂಟು ಎಕರೆ ಹೊಲದಲ್ಲಿನ ಭತ್ತ ನೆಲಕಚ್ಚಿದೆ. ಇಲ್ಲಿನ 630 ಹೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಪ್ರವಾಹ ಪಾಲಾಗಿದೆ. ಎಲ್ಲರೂ ಹೊಸ ಜೀವನ ಕಟ್ಟಿಕೊಳ್ಳುವಂತಿದೆ.</p>

ಮಳೆ-ಚಳಿಯೆನ್ನದೆ ಮನೆಯಿಂದ ಹೊರಬಂದಿರುವ ಗೂಡೂಮಾಬೀ ಸಾಕಿದ ದನ ಹಾಗೂ ಕುರಿಗಳ ಜೀವ ರಕ್ಷಿಸಲು ಹೆಣಗಾಡುತ್ತಿದ್ದಾಳೆ. ಬಾಷುಮಿಯಾ ಮನೆ ಕುಸಿದು ಬಿದ್ದಿದೆ, ಶೇಖಪ್ಪನ ಎಂಟು ಎಕರೆ ಹೊಲದಲ್ಲಿನ ಭತ್ತ ನೆಲಕಚ್ಚಿದೆ. ಇಲ್ಲಿನ 630 ಹೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಪ್ರವಾಹ ಪಾಲಾಗಿದೆ. ಎಲ್ಲರೂ ಹೊಸ ಜೀವನ ಕಟ್ಟಿಕೊಳ್ಳುವಂತಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಸಂಕೇತ್ ಹತ್ಯೆ ಬೆನ್ನಲ್ಲೇ ಎಚ್ಚೆತ್ತ ಸೂಳೆಬೈಲು, ಗಾಂಜಾ-ಅಕ್ರಮ ಮದ್ಯದ ವಿರುದ್ಧ ಬೀದಿಗಿಳಿದ ಹಿಂದೂ-ಮುಸ್ಲಿಂ
Recommended image2
2 KM ಪ್ರಯಾಣಕ್ಕೆ 6 ರೂಪಾಯಿ, 2.5KM ಪ್ರಯಾಣಕ್ಕೆ 12 ರೂಪಾಯಿ: BMTC ಟಿಕೆಟ್ ದರ ವ್ಯವಸ್ಥೆ ವಿರುದ್ಧ ಪ್ರಯಾಣಿಕರ ಆಕ್ರೋಶ!
Recommended image3
ಬೆಂಗಳೂರಲ್ಲಿ ಕಲರ್ಸ್ ಮೊಬೈಲ್ ಅಂಗಡಿ ಮಾಲೀಕನಿಗೆ ಕಲರ್ ಕಲರ್ ಕಾಗೆ ಹಾರಿಸಿದ ಖತರ್ನಾಕ್ ಖದೀಮ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved