ಯಲ್ಲಾಪುರ: ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಹೆಬ್ಬಾರ ಭೇಟಿ
ಯಲ್ಲಾಪುರ(ಜು.25): ತಾಲೂಕಿನ ತಳಕೇಬೈಲ್ನಲ್ಲಿ ಕುಸಿದಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ, ಅರಬೈಲ್ ರಾಷ್ಟೀಯ ಹೆದ್ದಾರಿ ಹಾಗೂ ಕೊಚ್ಚಿ ಹೋಗಿರುವ ಗುಳ್ಳಾಪುರ ಹೆಗ್ಗಾರ ಸೇತುವೆ ಸ್ಥಳಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
14

ತಳಕೇಬೈಲ್ ಹಾಗೂ ಕಳಚೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಕುರಿತು ಮಾರ್ಗೋಪಾಯ ಸೂಚಿಸಿ, ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ಸಚಿವರು
Add Asianetnews Kannada as a Preferred Source

24
ಕಳಚೆಯಲ್ಲಿ ಗುಡ್ಡ ಕುಸಿದು ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿ ಮನೆ ಕುಸಿದು ಸಾವನ್ನಪ್ಪಿದ ದೇವಕಿ ಗಾಂವ್ಕರ್ ಕುಟುಂಬದವರಿಗೆ 5 ಲಕ್ಷ ಪರಿಹಾರಧನದ ಚೆಕ್ ವಿತರಿಸಿದ ಸಚಿವ ಶಿವರಾಮ ಹೆಬ್ಬಾರ
34
ಅರಬೈಲ್ ಘಟ್ಟಕ್ಕೆ ತೆರಳಿದ ಸಚಿವರು ಘಟ್ಟದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮೂರು ದಿನಗಳಲ್ಲಿ ಹೆದ್ದಾರಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು.
44
ಗುಳ್ಳಾಪುರದಲ್ಲಿ ನೆರೆಯಿಂದ ಸಂತ್ರಸ್ತರಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವಾನ ಹೇಳಿದರು. ಸಚಿವರೊಂದಿಗೆ ಉಪ ಆಯುಕ್ತೆ ಆಕೃತಿ ಬನ್ಸಾಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ವಿವಿಧ ಇಲಾಖಾಧಿಕಾರಿಗಳು ಇದ್ದರು.
Latest Videos