ಕೊರೋನಾಗೆ ಸಚಿವ ಜಾರಕಿಹೊಳಿ ಪರಮಾಪ್ತ ಬಲಿ: ಕುಚುಕು ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಸಾಹುಕಾರ್
ಬೆಳಗಾವಿ(09): ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಪರಮಾಪ್ತರೊಬ್ಬರನ್ನ ಮಹಾಮಾರಿ ಕೊರೋನಾ ವೈರಸ್ ಬಲಿ ಪಡೆದಿದೆ. ಹೌದು, ಜಿಲ್ಲೆಯ ಗೋಕಾಕ್ ನಗರಸಭೆ ಸದಸ್ಯ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್ ಅವರು ಡೆಡ್ಲಿ ಕೊರೋನಾ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ದಿನಗಳಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೋತ್ವಾಲ್ ಅವರು ಸಾವನ್ನಪ್ಪಿದ್ದಾರೆ.
ಗೋಕಾಕ್ ನಗರಸಭೆಗೆ ಸತತ ಆರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಕೋತ್ವಾಲ್
ಸಚಿವ ರಮೇಶ್ ಜಾರಕಿಹೊಳಿ ಅವರ ಬಾಲ್ಯ ಸ್ನೇಹಿತರಾಗಿದ್ದ ಕೋತ್ವಾಲ್, ಪರಮಾಪ್ತನ ನಿಧನಕ್ಕೆ ಕಂಬನಿ ಮಿಡಿದ ಜಾರಕಿಹೊಳಿ
ಪರಮಾಪ್ತನ ನಿಧನ ಹಿನ್ನೆಲೆ ರಮೇಶ್ ಜಾರಕಿಹೊಳಿ ಕಾರ್ಯಕ್ರಮ ರದ್ದು
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರೂರು ಬಳಿಯ ಮಾರ್ಕಂಡೇಯ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ರದ್ದು