ಕೊರೋನಾ ಹೋರಾಟಕ್ಕಾಗಿ ಮದುವೆ ಮುಂದೂಡಿದ ಧೀರೆ, ಮಂಡ್ಯದ ದಿಟ್ಟ ಡಿವೈಎಸ್ಪಿ ಪೃಥ್ವಿ ಇವರೇ ನೋಡಿ
ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ ಮಳವಳ್ಳಿಯ ಡಿವೈರಸ್ಪಿ ಪೃಥ್ವಿ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೀಗ ಪೃಥ್ವಿ ಸಪ್ತಪತಿ ತುಳಿದಾಗಿರುತ್ತಿತ್ತು. ಆದರೆ ವಿವಾಹಕ್ಕಿಂತ ಕರ್ತವ್ಯಕ್ಕೆ ಆದ್ಯತೆ ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಡಿವೈಎಸ್ಪಿ ಇವರೇ ನೋಡಿ
ಕೊರೋನಾ ವೈರಸ್ ಎಂಬ ಮಹಾಮಾರಿ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಮಾಡಿದ್ದರೂ, ಇದರ ನಡುವೆಯೇ ಮಾಜಿ ಪ್ರಧಾನಿ ಮೊಮ್ಮಗನ ಮದುವೆ ನಡೆದಾಯ್ತು. ಆದ್ರೆ ಇಲ್ಲೊಬ್ಬ ಮಹಿಳಾ ಡಿವೈಎಸ್ಪಿ ತಮ್ಮ ವಿವಾಹವನ್ನು ಮುಂದೂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿ ಜನ ಮೆಚ್ಚುಗೆ ಪಡೆದಿರುವ ಅಧಿಕಾರಿ ಇವರೇ. ಡಿವೈಎಸ್ಪಿ ಪೃಥ್ವಿ .
ಎಲ್ಲವೂ ಅಂದುಕೊಂಡಂತಾಗಿದ್ದರೆ ಏಪ್ರಿಲ್ 4ರಂದು ಪೃಥ್ವಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕೊರೋನಾ ಕರ್ತವ್ಯದಲ್ಲಿರುವ ಈಕೆ ವಿವಾಹ ಮುಂದೂಡಿದ್ದಾರೆ.
ಧಾರವಾಡದ ಡಿಬಿ ಪಾಟೀಲ್ ಕನ್ವೆನ್ಶನ್ ಹಾಲ್ನಲ್ಲಿ ವಿವಾಹ ನಡೆಯಬೇಕಿತ್ತು. ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಪೃಥ್ವಿ ಹಾಗೂ ಐಆರ್ಎಸ್ಡಿಸಿಯಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುವ ದ್ಯಾಮಪ್ಪ ಅವರ ವಿವಾಹ ಏ.04ರಂದೇ ನಡೆಯಬೇಕಿತ್ತು. ಆದರೆ ಕರ್ತವ್ಯಕ್ಕೆ ಆದ್ಯತೆ ನೀಡಿದ ಜೋಡಿ ಪರಸ್ಪರ ಒಪ್ಪಿಕೊಂಡು ಮದುವೆ ಮುಂದೂಡಲು ನಿಶ್ಚಿಯಿಸಿದ್ದಾರೆ.
ಮಳವಳ್ಳಿ ಭಾಗದಲ್ಲಿ ಕೊರೋನಾ ಹರಡುವಿಕೆ ಭೀತಿ ಹೆಚ್ಚಾಗುತ್ತಿದ್ದಂತೆ ಸಿಬ್ಬಂದಿಯೊಂದಿಗೆ ಡ್ರೋನ್ ಕಣ್ಗಾವಲು ಅಳವಡಿಸುವ ಸಿದ್ಧತೆಯಲ್ಲಿರುವ ಪೃಥ್ವಿ
ಎಲ್ಲ ವ್ಯವಸ್ಥೆ ಮಾಡಿಕೊಂಡು ಸರಳವಾಗಿ ವಿವಾಹವಾಗುವ ಸಾಧ್ಯತೆ ಇತ್ತು. ಆದರೆ ಅದನ್ನೂ ತಳ್ಳಿಹಾಕಿ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ.
ವಿವಾಹ ಮುಂದೂಡಲ್ಪಟ್ಟ ಬೇಸರವಿಲ್ಲದೆ ಕೊರೋನಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ ಪೃಥ್ವಿ
ಸಂಸದೆ ಸುಮಲತಾ ಸೇರಿದಂತೆ ಹಲವಾರು ಮಂದಿ ಪ್ರಮುಖರು ಮಹಿಳಾ ಡಿವೈಎಸ್ಪಿ ನಡೆಯನ್ನು ಶ್ಲಾಘಿಸಿದ್ದಾರೆ. ಜನರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.