ಸೈನಿಕ ತರಬೇತಿಗೆ ಬಳಸೋ ಲಾಂಚರ್ ಕಾವೇರಿ ನದಿಯಲ್ಲಿ ಪತ್ತೆ, ಇಲ್ಲಿವೆ ಫೋಟೋಸ್
ರಾಮನಗರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್ಗಳು ಪತ್ತೆಯಾಗಿವೆ. ಇಲ್ಲಿವೆ ಫೋಟೋಸ್

<p>ಕನಕಪುರ<strong> </strong>ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್ಗಳು ಪತ್ತೆಯಾಗಿವೆ. ಇವುಗಳಲ್ಲಿ ಆರು ಸ್ಫೋಟಗೊಂಡಿದ್ದು, ಒಂದು ಸಜೀವವಾಗಿದೆ.</p>
ಕನಕಪುರತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್ಗಳು ಪತ್ತೆಯಾಗಿವೆ. ಇವುಗಳಲ್ಲಿ ಆರು ಸ್ಫೋಟಗೊಂಡಿದ್ದು, ಒಂದು ಸಜೀವವಾಗಿದೆ.
<p>ಮಲ್ಟಿಪರ್ಪಸ್ ರಾಕೆಟ್ ಲಾಂಚರ್ ಇದಾಗಿದ್ದು, ಪ್ರತಿಯೊಂದು ಲಾಂಚರ್ ಮೂರು ಅಡಿ ಎತ್ತರ , ಎರಡು ಇಂಚು ಸುತ್ತಳತೆ ಉಳ್ಳ ಕಾಪರ್ ನಿಂದ ತಯಾರಿಸಿರುವ ಕೊಳವೆ ಆಕಾರದಲ್ಲಿವೆ. ಒಂದೊಂದು ಲಾಂಚರ್ ನ ಒಳಭಾಗದಲ್ಲಿ ಒಂದೂವರೆ ಅಡಿ ಎತ್ತರದ ಸಣ್ಣ ಸಣ್ಣ ಏಳು ರಾಕೆಟ್ ಗಳು ಇವೆ.</p>
ಮಲ್ಟಿಪರ್ಪಸ್ ರಾಕೆಟ್ ಲಾಂಚರ್ ಇದಾಗಿದ್ದು, ಪ್ರತಿಯೊಂದು ಲಾಂಚರ್ ಮೂರು ಅಡಿ ಎತ್ತರ , ಎರಡು ಇಂಚು ಸುತ್ತಳತೆ ಉಳ್ಳ ಕಾಪರ್ ನಿಂದ ತಯಾರಿಸಿರುವ ಕೊಳವೆ ಆಕಾರದಲ್ಲಿವೆ. ಒಂದೊಂದು ಲಾಂಚರ್ ನ ಒಳಭಾಗದಲ್ಲಿ ಒಂದೂವರೆ ಅಡಿ ಎತ್ತರದ ಸಣ್ಣ ಸಣ್ಣ ಏಳು ರಾಕೆಟ್ ಗಳು ಇವೆ.
<p>ಪೊಲೀಸ್ ಅಧಿಕಾರಿಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡಿರುವ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಆನಂತರ ಲಾಂಚರ್ ನ ಅವಶೇಷ ಹಾಗೂ ಸಜೀವ ಲಾಂಚರ್ ಅನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಿಕೊಟ್ಟಿದ್ದಾರೆ.</p>
ಪೊಲೀಸ್ ಅಧಿಕಾರಿಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡಿರುವ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಆನಂತರ ಲಾಂಚರ್ ನ ಅವಶೇಷ ಹಾಗೂ ಸಜೀವ ಲಾಂಚರ್ ಅನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಿಕೊಟ್ಟಿದ್ದಾರೆ.
<p>ಬೊಮ್ಮಸಂದ್ರದ ಇಬ್ಬರು ಯುವ ಬೇಟೆಗಾರರು ಆರು ಲಾಂಚರ್ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಖರೀದಿಸಲು ಮುಂದಾದ ವ್ಯಕ್ತಿ ಲಾಂಚರ್ನಲ್ಲಿ ಕಾಪರ್ , ಅಲ್ಯುಮಿನಿಯಂ ಅನ್ನು ಮಾತ್ರ ಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.</p>
ಬೊಮ್ಮಸಂದ್ರದ ಇಬ್ಬರು ಯುವ ಬೇಟೆಗಾರರು ಆರು ಲಾಂಚರ್ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಖರೀದಿಸಲು ಮುಂದಾದ ವ್ಯಕ್ತಿ ಲಾಂಚರ್ನಲ್ಲಿ ಕಾಪರ್ , ಅಲ್ಯುಮಿನಿಯಂ ಅನ್ನು ಮಾತ್ರ ಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
<p>ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿಅವರ ಗಮನಕ್ಕೆ ತಂದಿದ್ದಾರೆ. ಆನಂತರ ಪೊಲೀಸರು ಸ್ಫೋಟಕ ಪತ್ತೆ ತಜ್ಞರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಗೊಂಡಿದ್ದ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು.</p>
ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿಅವರ ಗಮನಕ್ಕೆ ತಂದಿದ್ದಾರೆ. ಆನಂತರ ಪೊಲೀಸರು ಸ್ಫೋಟಕ ಪತ್ತೆ ತಜ್ಞರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಗೊಂಡಿದ್ದ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು.