MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಗಂಗಾವತಿ: ಕೊಪ್ಪಳ ಡಿಸಿ ಕುದುರೆ ಸವಾರಿ..!

ಗಂಗಾವತಿ: ಕೊಪ್ಪಳ ಡಿಸಿ ಕುದುರೆ ಸವಾರಿ..!

ಗಂಗಾವತಿ(ಅ.18): ಕಳೆದ ವಾರದ ಹಿಂದೆ ಅಷ್ಟೇ ಕುದುರೆ ಸವಾರಿ ಮಾಡಿ ಕುಮ್ಮಟದುರ್ಗಾ ವೀಕ್ಷಿಸಿದ್ದ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ ಅವರು ಭಾನುವಾರ ಬೆಟ್ಟ, ಗುಡ್ಡಗಳು ಸೇರಿದಂತೆ ನದಿ ತೀರದ ಪ್ರದೇಶವನ್ನು ಕುದುರೆ ಏರಿಯೇ ವೀಕ್ಷಿಸಿದ್ದಾರೆ.

1 Min read
Kannadaprabha News | Asianet News
Published : Oct 18 2021, 10:44 AM IST
Share this Photo Gallery
  • FB
  • TW
  • Linkdin
  • Whatsapp
16

ಶನಿವಾರ ತಾಲೂಕಿನ ಗುಳದಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ರಸ್ತೆಯನ್ನು ಬೈಕ್‌ ಸವಾರಿ ಮಾಡಿ ವೀಕ್ಷಣೆ ಮಾಡಿದ್ದ ಜಿಲ್ಲಾಧಿಕಾರಿ ಸುರಳ್ಕರ್‌ ಮತ್ತು ಜಿಪಂ ಸಿಇಒ ಫೌಜೀಯಾ ತರನ್ನುಮ್‌, ಅಧಿಕಾರಿಗಳ ತಂಡ ತಾಲೂಕಿನ ಸಣ್ಣಾಪುರ ಸಮಾನಂತರ ಜಲಾಶಯದಿಂದ ಹಿಡಿದು ಪಾಪಯ್ಯ ಟನಲ್‌ವರೆಗೂ ಕುದುರೆ ಸವಾರಿ ಮಾಡಿ ವೀಕ್ಷಿಸಿದರು.

26

ಕೊಪ್ಪಳ ಜಿಲ್ಲೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತೊಂದು ಯೋಜನೆ ರೂಪಿಸಿದೆ. ಪ್ರವಾಸಿರನ್ನು ಸೆಳೆಯಲು ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಕುದುರೆ ಸವಾರಿಗೆ ಪ್ಲ್ಯಾನ್‌ ಮಾಡಿದೆ.

36

ತಾಲೂಕಿನ ಸಣಾಪುರ ಕೆರೆಯ ಬಳಿ ಅಧಿಕಾರಿಗಳು ಕುದುರೆ ಸವಾರಿ ಮಾಡಿದರು. ಜಿಲ್ಲಾಧಿಕಾರಿ ಒಂದು ಏರಿದ ಬಳಿಕ ಜಿಪಂ ಸಿಇಒ ಮತ್ತೊಂದು ಕುದುರೆ ಏರಿ ಸವಾರಿ ಮಾಡಿದರು. 

46

ವಿಜಯನಗರದ ಕುದುರೆ ರೈಡಿಂಗ್‌ ಸ್ಕೂಲ್‌ ಹಾಗೂ ಇತರ ಕಡೆಗಳಿಂದ ಒಟ್ಟು 7 ಕುದುರೆಗಳನ್ನು ತರಿಸಿ, ಪ್ರಾಯೋಗಿಕವಾಗಿ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.

56

ತಾಲೂಕಿನ ಸಣಾಪುರ, ವಿರೂಪಾಪುರ ಗಡ್ಡೆ, ಆನೆಗೊಂದಿ ಪ್ರವಾಸಿಗರ ನೆಚ್ಚಿನ ತಾಣಗಳಿವೆ. ವಿಜಯನಗರದ ರಾಜಧಾನಿಯಾಗಿದ್ದ ಆನೆಗೊಂದಿ ಪ್ರದೇಶದಲ್ಲಿ ಸಾಕಷ್ಟು ಕೋಟೆ, ದೇವಸ್ಥಾನಗಳು ಇವೆ. ಅಂಜನಾದ್ರಿ ಪರ್ವತಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. 

66

ಪಂಪಾಸರೋವರ, ನವ ವೃಂದಾವನ, ಋುಷಿಮುಖ ಪರ್ವತ, ವಾಲಿ ಕಿಲ್ಲಾ, ದುರ್ಗಾ ಬೆಟ್ಟಸೇರಿದಂತೆ ಐತಿಹಾಸಿಕ ಸ್ಥಳಗಳು ಇಲ್ಲಿವೆ. ಅಲ್ಲದೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ಜಿಲ್ಲಾಡಳಿತ ಕುದುರೆ ಸವಾರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved