ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ
ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ ಪಂದ್ಯಂಡ ಆಶಾ (53). ತಾನು ಉಸಿರು ಚೆಲ್ಲಿ 8 ಜನರ ಜೀವ ಉಳಿಸಿದ ಮಹಾತಾಯಿ. ಕಣ್ಣು, ಕಿಡ್ನಿ, ಹೃದಯ, ಲೀವರ್ ದಾನದ ಮೂಲಕ ಸಾರ್ಥಕತೆ. ಶನಿವಾರ ಅವರು ಬೆಂಗಳೂರಿನ ಪುತ್ರಿ ಮನೆಗೆ ಹೋಗಿದ್ದರು. ಈ ವೇಳೆ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು . ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ನಿನ್ನೆ ಶಿಕ್ಷಕಿ ಆಶಾ ಅವರ ಅಂಗಾಂಗ ದಾನ ಮಾಡಲಾಗಿದೆ. ಪತಿ, ಮಕ್ಕಳ ಒಪ್ಪಿಗೆ ಹಿನ್ನೆಲೆ ಅಂಗಾಂಗ ದಾನ.
13

ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಬಹು ಅಂಗಾಂಗ ದಾನ. ಕೊಡಗು ಜಿಲ್ಲೆ ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿ ಆಶಾ . 15 ವರ್ಷದಿಂದ ಬೇಬಿ ಸಿಟಿಂಗ್ ನಡೆಸುತ್ತಿದ್ದ ಆಶಾ. ಹೀಗಾಗಿ ಮಕ್ಕಳ ಹೆಸರಿನಲ್ಲೇ ಅಂಗಾಗ ದಾನ ಮಾಡಿ ಸಾರ್ಥಕತೆ
Add Asianetnews Kannada as a Preferred Source

23
ಅಂಗಾಂಗ ದಾನ ಹಲವರಿಗೆ ಜೀವದಾನ. ಯಾರೋ ಒಬ್ಬ ವ್ಯಕ್ತಿ ನೀಡಿದ ದೇಹದ ಭಾಗದಿಂದ ಬೇರೆಯೊಬ್ಬರು ಹೊಸ ಜೀವನವನ್ನು ಪಡೆಯಬಹುದು. ಮೂತ್ರಪಿಂಡಗಳು, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣುಗಳು, ಶ್ವಾಸಕೋಶಗಳು ಮುಂತಾದ ಅಂಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು.
33
ಇತ್ತೀಚೆಗೆ ಅಂಗಾಂಗ ದಾನದ ಮಹತ್ವ ಹೆಚ್ಚುತ್ತಿದ್ದು, ಅನೇಕ ತಾರೆಯರೂ ಕೂಡ ಇದರ ಬಗ್ಗೆ ಗಮನ ಹರಿಸಿದ್ದಾರೆ. ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಕಣ್ಣು ದಾನ ಮಾಡಿದ್ದರು , ನಟ ಸಂಚಾರಿ ವಿಜಯ್ ಅವರ ಅಂಗಾಗಳನ್ನು ಕೂಡ ದಾನ ಮಾಡಲಾಗಿತ್ತು.
Latest Videos