Bengaluru: ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ಗಣೇಶ ವಿಗ್ರಹವನ್ನ ಹೊಡೆದು ವಿಘ್ನಗೊಳಿಸಿದ ದುಷ್ಕರ್ಮಿಗಳು
ರಾತ್ರೋರಾತ್ರಿ ಗುಂಜೂರು ಹೊಸಹಳ್ಳಿ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿದ್ದ ವಿಗ್ರಹವನ್ನ ಹೊಡೆದು ದುಷ್ಕರ್ಮಿಗಳು ವಿಘ್ನಗೊಳಿಸಿದ್ದಾರೆ.
ಕಾಡುಗೋಡಿ (ಮೇ.29): ಕಿಡಿಗೇಡಿಗಳು ನಿನ್ನೆ ತಡರಾತ್ರಿ ಗಣೇಶ ವಿಗ್ರಹ ಹೊಡೆದು ವಿರೂಪಗೊಳಿಸಿದ ಘಟನೆ ಮಹದೇವಪುರ ವ್ಯಾಪ್ತಿಯ ಗುಂಜೂರು ಬಳಿ ನಡೆದಿದೆ.
ಗುಂಜೂರು ಹೊಸ ಹಳ್ಳಿ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿದ್ದ ವಿಗ್ರಹವನ್ನ ಹೊಡೆದು ದುಷ್ಕರ್ಮಿಗಳು ವಿಘ್ನಗೊಳಿಸಿದ್ದಾರೆ.
ಸುತ್ತಿಗೆಯಿಂದ ಗಣೇಶ ವಿಗ್ರಹ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಣೇಶ ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳಿಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.