ಬಡ ಯುವಕನ ಜೀವನಕ್ಕೆ ದಾರಿ ಮಾಡಿಕೊಟ್ಟ HDK: ಆಟೋ ಕೊಡಿಸಿ ಮಾನವೀಯತೆ ಮೆರೆದ ಕುಮಾರಣ್ಣ..!
ಬೆಂಗಳೂರು(ನ.04): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಸಹಾಯ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಹೌದು, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯುವಕನೊಬ್ಬನಿಗೆ ಕುಮಾರಸ್ವಾಮಿ ಅವರು ದುಡಿಮೆಯ ದಾರಿಯನ್ನ ಮಾಡಿಕೊಟ್ಟಿದ್ದಾರೆ. ಬಡ ಯುವಕನಿಗೆ ಆಟೋ ಕೊಡಿಸುವ ಮೂಲಕ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ಶ್ರೀನಿವಾಸ ಎಂಬ ಬಡ ಯುವಕನ ಕುಟುಂಬ ಕಳೆದ ಐದಾರು ತಿಂಗಳಿನಿಂದ ತುತ್ತು ಅನ್ನಕ್ಕೂ ಪರದಾಡುತ್ತಿತ್ತು.
ಶ್ರೀನಿವಾಸ ಸಹಾಯಕ್ಕಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮೊರೆ ಇಟ್ಟಿದ್ದ ಯುವಕ
ಶ್ರೀನಿವಾಸ ಕಟ್ಟಪಡುತ್ತಿದ್ದನ್ನ ನೋಡಲಾರದೆ ಸ್ವಂತವಾಗಿ ದುಡಿದು ಕುಟುಂಬ ಸಾಕಲು ಆಟೋ ಕೊಡಿಸಿದ ಕುಮಾರಸ್ವಾಮಿ
ಇಂದು(ಬುಧವಾರ) ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಆಟೊ ಕೀ ಯುವಕನಿಗೆ ಹಸ್ತಾಂತರ ಮಾಡಿದ ಎಚ್ಡಿಕೆ