ಚಿತ್ರಗಳಲ್ಲಿ: ವಾವ್ಹ್... ಕೊರೋನಾ ಲಾಕ್ಡೌನ್ ಮಧ್ಯೆ ಅನ್ನದಾತನ ಕಾಯಕ ನೋಡಿ
ಇನ್ನೇನು ಕೆಲವೆ ದಿನಗಳಲ್ಲಿ ಮುಂಗಾರು ಮಳೆ ಬರುವ ಸನಿಹಯಲ್ಲಿದ್ದು ಗ್ರಾಮೀಣ ಭಾಗದಲ್ಲಿ ಕೃಷಿಕರು ಮುಂಗಾರು ಬೇಸಾಯಕ್ಕೆ ರೆಡಿಯಾಗಿದ್ದಾರೆ. ಲಾಕ್ಡೌನ್ ಮಧ್ಯೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಉಳುಮೆಯಲ್ಲಿ ತೊಡಗಿರುವ ದೃಶ್ಯ.
ರಾಜ್ಯದ ಕೆಲವೆಡೆ ಮುಂಗಾರು ಮಳೆ ಆರಂಭಗೊಂಡ ಹಿನ್ನೆಲೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮುಂಗಾರು ಮಳೆ ಬರುವ ಸನಿಹಯಲ್ಲಿದ್ದು ಗ್ರಾಮೀಣ ಭಾಗದಲ್ಲಿ ಕೃಷಿಕರು ಮುಂಗಾರು ಬೇಸಾಯಕ್ಕೆ ರೆಡಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಉಳುಮೆಯಲ್ಲಿ ತೊಡಗಿರುವ ದೃಶ್ಯ.
ಕೊರೋನಾ ಲಾಕ್ಡೌನ್ ಮಧ್ಯೆ ಅನ್ನದಾತ ಮುಂಗಾರ ಬೆಳೆಗೆ ಹೊಲವನ್ನು ಸಿದ್ಧತೆ ಮಾಡಿಕೊಳ್ಳುತ್ತಿರುವುದು
ವರದಿ ಪ್ರಕಾರ ಈ ವರ್ಷ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಹೇಳಿದ್ದು, ಜೂನ್-ಸೆಪ್ಟೆಂಬರ್ ಮಧ್ಯೆ ಶೇ.100ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿ ಮುಂಗಾರು ಮಳೆ ಪ್ರಮಾಣ ಶೇ.96ನಿಂದ ಶೇ.104ರ ನಡುವೆ ಇದೆ. ಈ ವರ್ಷ ಇದರ ಪ್ರಮಾಣ ಶೇ.100ರಷ್ಟು ನಿರೀಕ್ಷಿಸಲಾಗಿದೆ. 4 ತಿಂಗಳ ಅವಧಿಯ ಮುಂಗಾರು ಜೂನ್ನಿಂದ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.