ಚಿತ್ರಗಳು: ಆನೆಗಳನ್ನು ಕಾಡಲ್ಲಿ ಸ್ವತಂತ್ರವಾಗಿ ಬಿಡುವಂತೆ ಮಕ್ಕಳ ಒತ್ತಾಯ
ಆಗಸ್ಟ್ 12 ವಿಶ್ವ ಆನೆಗಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ದಕ್ಷಿಣಕನ್ನಡ - ಉಡುಪಿ ಜಿಲ್ಲೆಗಳ 15 ವರ್ಷದೊಳಗಿನ ಮಕ್ಕಳಿಗೆ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆನ್ ಲೈನ್ ಮೂಲಕ ಚಿತ್ರಗಳನ್ನು ಕಳಹಿಸಬೇಕಾಗಿದ್ದು, ದಾಖಲೆಯ 1,496 ಚಿತ್ರಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದವು. ಈ ಚಿತ್ರಗಳಲ್ಲಿ ಮಕ್ಕಳು ಆನೆಗಳ ರಕ್ಷಣೆಯ ವಿಶೇಷ ಕಾಳಜಿ ತೋರಿಸಿದ್ದು, ಅದೇ ಕಾರಣಕ್ಕೆ ಈ ಚಿತ್ರಗಳು ಬಹುಮಾನ ಗೆದ್ದಿವೆ.
10 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಸಾತ್ವಿಕ್ ಕೆ.ಆಚಾರ್ಯ ಕಾರ್ಕಳ
ದ್ವಿತೀಯ - ಧೃತಿಎಸ್. ಉಡುಪಿ
ತೃತೀಯ - ನಿಲಿಷ್ಕಾ ಕೆ. ಪುತ್ತೂರು ಬಹುಮಾನ ಗೆದ್ದುಕೊಂಡಿದ್ದಾರೆ.
10 - 15 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಕೆ. ಪ್ರತಿಷ್ಠಾ ಶೇಟ್ ಉಡುಪಿ
ದ್ವಿತೀಯ - ಶರಣ್ಯ ಭಟ್ ಬ್ರಹ್ಮಾವರ
ತೃತೀಯ - ಮೋಕ್ಷಿತ್ ಸುರೇಶ್ ಮಂಗಳೂರು ಮತ್ತು ಹಾಮಿದ ವಫಾಯು ಪುತ್ತೂರು ಅವರು ಗಳಿಸಿದ್ದಾರೆ.