MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ

ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಇದರ ನಡುವೆ, ಭೈರವಿ ಅಮ್ಮನವರು ಡಿ.ಕೆ.ಶಿವಕುಮಾರ್ ಅವರ ಜಾತಕವನ್ನು ವಿಶ್ಲೇಷಿಸಿ, ಭವಿಷ್ಯವಾಣಿ ನುಡಿದಿದ್ದಾರೆ.  ಅವರು ಹೇಳಿದ್ದೇನು?

2 Min read
Suchethana D
Published : Dec 21 2025, 06:08 PM IST
Share this Photo Gallery
  • FB
  • TW
  • Linkdin
  • Whatsapp
15
ಸಿಎಂ ಖುರ್ಚಿಗೆ ಪೈಪೋಟಿ
Image Credit : Asianet News

ಸಿಎಂ ಖುರ್ಚಿಗೆ ಪೈಪೋಟಿ

ರಾಜ್ಯ ರಾಜಕೀಯದಲ್ಲಿ ಸದ್ಯ ಒಂದೇ ಪಕ್ಷದಲ್ಲಿ ಖುರ್ಚಿಗಾಗಿ ಕಾದಾಟ ನಡೆಯುತ್ತಿರುವ ಅಪರೂಪದ ಘಟನೆ ನಡೆಯುತ್ತಿದೆ. ವಿಭಿನ್ನ ಪಕ್ಷಗಳು ಸಿಎಂ ಗಾದಿಗಾಗಿ ಕೆಸರೆರೆಚಾಟ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಪರೂಪದಲ್ಲಿ ಅಪರೂಪ ಎನ್ನುವಂಥ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿಯ ಖುರ್ಚಿ ಬಿಟ್ಟುಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿದ್ದರೆ, ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್​ ಮಾತ್ರವಲ್ಲದೇ ಇನ್ನೂ ಕೆಲವರು ಪೈಪೋಟಿ ನಡೆಸುತ್ತಿದ್ದಾರೆ. ಹೈಕಮಾಂಡ್​ ಹೇಳಿದಂತೆ ಕೇಳುತ್ತೇವೆ ಎನ್ನುವ ಮೂಲಕ, ತೇಪೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆಯಾದರೂ ಒಳಗೊಳಗೇ ನಡೆಯುತ್ತಿರುವ ಸಮರಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ.

25
ರಾಜಕೀಯ ತಲ್ಲಣ
Image Credit : Asianet News

ರಾಜಕೀಯ ತಲ್ಲಣ

ಇದಾಗಲೇ ಡಿ.ಕೆ.ಶಿವಕುಮಾರ್​ ಅವರು ಪೂಜೆ, ಪುನಸ್ಕಾರ ಮಾಡದ ದೇವರುಗಳಿಲ್ಲ. ಮಾಡದ ಹೋಮ-ಹವನಗಳೂ ಇಲ್ಲ. ಅಷ್ಟಕ್ಕೂ ಚುನಾವಣೆ ಸಮೀಪಿಸಿದಾಗ ಈ ರೀತಿಯ ಪೂಜೆ, ಪುನಸ್ಕಾರ, ಹೋಮ, ಹವನ ಬಹುತೇಕ ಎಲ್ಲಾ ರಾಜಕೀಯ ನಾಯಕರಿಗೂ ಸರ್ವೇ ಸಾಮಾನ್ಯವಾಗಿದ್ದರೂ, ಇದೀಗ ತಮ್ಮದೇ ಪಕ್ಷದ ವಿರುದ್ಧ ರಾಜಕಾರಣಿಯೊಬ್ಬರು ಈ ರೀತಿ ನಡೆದುಕೊಳ್ಳುತ್ತಿರುವುದು ಇಡೀ ದೇಶಾದ್ಯಂತ ಭಾರಿ ಚರ್ಚೆಗೂ ಗ್ರಾಸವಾಗುತ್ತಿದೆ. ಬಿಜೆಪಿಗೆ ಇದೊಂದು ದೊಡ್ಡ ಅಸ್ತ್ರವೂ ಆಗುತ್ತಿದೆ. ಮುಖ್ಯಮಂತ್ರಿ ಸ್ಥಾನ ಅವರಿಗೆ ಕೊಟ್ಟರೂ ಕಷ್ಟ, ಇವರಿಗೆ ಕೊಟ್ಟರೂ ಕಷ್ಟ ಎನ್ನುವಂಥ ಸ್ಥಿತಿ ಸದ್ಯ ಆಗಿದ್ದು, ಹೈಕಮಾಂಡ್​ ಕೂಡ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳದ ಸ್ಥಿತಿಗೆ ಬಂದಿದೆ.

Related Articles

Related image1
ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್​ಲೆಸ್​ ಡ್ರೆಸ್​, ಹರಿದ ಜೀನ್ಸ್​ ನಿಷೇಧ: ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?
Related image2
4 ಲಕ್ಷ ಬೆಲೆ ಬಾಳುವ ಸೆ*ಕ್ಸ್​ ಡಾಲ್ಸ್​ ಮಾರಾಟ: Karnataka No.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
35
ಸ್ಫೋಟಕ ಭವಿಷ್ಯ
Image Credit : Youtube

ಸ್ಫೋಟಕ ಭವಿಷ್ಯ

ಇದರ ನಡುವೆಯೇ, ಇದಾಗಲೇ ರಾಜ್ಯ, ದೇಶದ ಬಗ್ಗೆ ಹಲವಾರು ಭವಿಷ್ಯ ನುಡಿದಿರುವ ಭೈರವಿ ಅಮ್ಮ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಅಶ್ವವೇಗ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ಬೌದ್ಧಿಕವಾಗಿ ನೋಡಿದರೆ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣ ಇಲ್ಲ ಎಂದು ಎನ್ನಿಸುತ್ತದೆ. ಆದರೆ, ಅದೊಂದು ದೈವ ನಿರ್ಣಯವಿದೆ. ಮಾತು ಕೊಟ್ಟಂತೆ ನಡೆಯಬೇಕು. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಸಿದ್ದರಾಮಯ್ಯ ಮಾತುಕೊಟ್ಟಂತೆ ನಡೆದುಕೊಳ್ಳಬೇಕು ಎನ್ನುತ್ತಲೇ ಡಿ.ಕೆ.ಶಿವಕುಮಾರ್​ ಅವರ ಜಾತಕ ನೋಡಿರುವ ಭೈರವಿ ಅಮ್ಮ ಕೆಲವೊಂದು ವಿಷಯಗಳನ್ನು ಹೇಳಿದ್ದಾರೆ.

45
ಡಿಕೆಶಿ ಜಾತಕ ನನ್ನ ಕೈಯಲ್ಲಿದೆ
Image Credit : Youtube

ಡಿಕೆಶಿ ಜಾತಕ ನನ್ನ ಕೈಯಲ್ಲಿದೆ

ಡಿ.ಕೆ.ಶಿವಕುಮಾರ್​ ಅವರ ಜಾತಕ ನನ್ನ ಕೈಯಲ್ಲಿ ಇದೆ. ಅವರದ್ದು ಮೇಷ ಲಗ್ನ. ಅವರ ಕುಂಡಲಿಯನ್ನು ನಾನು ನೋಡಿದ್ದೇನೆ. ಸದ್ಯ ರವಿ ಉಚ್ಛಸ್ಥಾನದಲ್ಲಿ ಇದ್ದಾನೆ. ಕುಂಭದಲ್ಲಿ ಗುರು ಇದ್ದಾನೆ. ಇಂಥ ಸಂದರ್ಭದಲ್ಲಿ ಗುರುವಿನ ಅನುಗ್ರಹ ಆಗುತ್ತದೆ. ಇಂಥ ಸಂದರ್ಭದಲ್ಲಿ ಶುಭ ಕಾರ್ಯಕ್ಕೆ ಅಡ್ಡ ಇದ್ದವರನ್ನು ಹೇಗೆ ಸರಿಸಬೇಕು ಎನ್ನುವ ಸನ್ನಿವೇಶವನ್ನು ಗುರುವೇ ಕ್ರಿಯೇಟ್​ ಮಾಡುತ್ತಾನೆ ಎಂದು ಭೈರವಿ ಅಮ್ಮ ಹೇಳಿದ್ದಾರೆ.

55
ಸ್ವಲ್ಪ ದಿನದಲ್ಲೇ ಶನಿ ನಿರ್ಗಮನ
Image Credit : Youtube

ಸ್ವಲ್ಪ ದಿನದಲ್ಲೇ ಶನಿ ನಿರ್ಗಮನ

2024ರಿಂದ ಡಿ.ಕೆ.ಶಿವಕುಮಾರ್​ ಅವರಿಗೆ ಪಂಚಮ ಶನಿ ನಡೆಯುತ್ತಿತ್ತು. ಇದು ತುಂಬಾ ತೊಂದರೆ ಕೊಟ್ಟಿದೆ. ಇದೀಗ ಶನಿ ಷಷ್ಠ ಸ್ಥಾನಕ್ಕೆ ಬಂದಿದ್ದಾನೆ, ಈಗ ಆತ ಮೀನ ರಾಶಿಯಲ್ಲಿ ಇದ್ದಾನೆ. ಸ್ವಲ್ಪ ದಿನ ಶನಿ ನಿರ್ಗಮನ ಆಗುತ್ತದೆ. ಅದು ನಿರ್ಗಮಿಸಿದಂತೆಯೇ ತಕ್ಷಣವೇ ಡಿ.ಕೆ.ಶಿವಕುಮಾರ್​ ಅವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಅವರು ಮುಖ್ಯಮಂತ್ರಿ ಆಗುವುದು ಸತ್ಯ ಸತ್ಯ ಸತ್ಯ ಎಂದಿದ್ದಾರೆ. ಆದರೆ ಅವರ ಜಾತಕದಲ್ಲಿ ಸ್ವಲ್ಪ ದೋಷಗಳು ಇರುವ ಹಿನ್ನೆಲೆಯಲ್ಲಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಹೀಗಾದರೆ ಯಾವುದೇ ಸಮಸ್ಯೆ ಇಲ್ಲದೇ ಮುಖ್ಯಮಂತ್ರಿ ಸೀಟು ಪ್ರಾಪ್ತಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ ಭೈರವಿ ಅಮ್ಮ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ನಾಟಕ ಸುದ್ದಿ
ರಾಜಕೀಯ ಪಕ್ಷ
ಜ್ಯೋತಿಷ್ಯ
ಸಂಖ್ಯಾಶಾಸ್ತ್ರ
ಸಿದ್ದರಾಮಯ್ಯ
ಡಿ.ಕೆ. ಶಿವಕುಮಾರ್

Latest Videos
Recommended Stories
Recommended image1
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ
Recommended image2
ರಸ್ತೆ ಸಾರಿಗೆ ನಿಗಮದಲ್ಲಿ 10 ಸಾವಿರ ಸಿಬ್ಬಂದಿ ನೇಮಕ: ಸಚಿವ ರಾಮಲಿಂಗಾರೆಡ್ಡಿ
Recommended image3
83 ಕೆರೆಗಳಿಗೆ ನೀರು ಹರಿಯಲು ಡಿಕೆ ಬ್ರದರ್ಸ್ ಇಚ್ಛಾಶಕ್ತಿ ಕಾರಣ: ಶಾಸಕ ಎಚ್.ಸಿ.ಬಾಲಕೃಷ್ಣ ಸಂತಸ
Related Stories
Recommended image1
ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್​ಲೆಸ್​ ಡ್ರೆಸ್​, ಹರಿದ ಜೀನ್ಸ್​ ನಿಷೇಧ: ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?
Recommended image2
4 ಲಕ್ಷ ಬೆಲೆ ಬಾಳುವ ಸೆ*ಕ್ಸ್​ ಡಾಲ್ಸ್​ ಮಾರಾಟ: Karnataka No.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved