ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ ಬೆಂಗಳೂರು : ಖಾಲಿ ಖಾಲಿ
ಬಸ್ ಮುಷ್ಕರದ ಪರಿಣಾಮ ಪ್ರಯಾಣಿಕರ ಮೇಲೆ ತೀವ್ರತೆರನಾಗಿದೆ. ಬಸ್ ಸಂಚಾರವಿಲ್ಲದೇ ರಾಜ್ಯದ ವಿವಿಧೆಡೆ ಜನರು ಪರದಾಡುತ್ತಿದ್ದರೆ ಇತ್ತ ಸದಾ ಗಿಜಿಗುಡತ್ತಿದ್ದ ಬೆಂಗಳೂರು ಸ್ತಬ್ದವಾಗಿದೆ. ಬಸ್ಗಳ ಸಂಚಾರವಿಲ್ಲದೆ ಜನರು ಪರದಾಡುತ್ತಿದ್ದಾರೆ. ಬಸ್ಗಳ ನಿಂತ ಪರಿಣಾಮ ಬೆಂಗಳೂರು ಖಾಲಿ ಖಾಲಿಯಾಗಿದೆ.
ಫೋಟೋಗಳು: ಎ.ವೀರಮಣಿ, ಕನ್ನಡಪ್ರಭ
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಸಾರ್ವಜನಿಕ ರಿಗೆ ತೊಂದರೆಯಾಗಬಾರದು ಸುಗಮವಾಗಿ ಸಂಚಾರ ನಡೆಯಬೇಕು. ಹಾಗಾಗಿ ಖಾಸಗಿ ಶಾಲಾ ಸಂಘದವರೊಂದಿಗೆ ಮಾತುಕತೆ ಮಾಡಿದ್ವಿ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಹೇಳಿಕೆ
ಮುಷ್ಕರದ ಹಿನ್ನಲೆ ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ರಸ್ತೆಗಿಳಿದಿವೆ
24 ಸಾವಿರ ಸರ್ಕಾರಿ ಬಸ್ ಗಳು ಸಂಚರಿಸುತ್ತವೆ. ಅಷ್ಟು ಸಂಖ್ಯೆಯಲ್ಲಿಯೇ ಖಾಸಗಿ ಬಸ್ ಓಡಿಸಲು ಸಾಧ್ಯವಿಲ್ಲ
ಟ್ಯಾಕ್ಸ್ ಕಟ್ಟದ ಬಸ್ ಗಳಿಗೂ ಪರ್ಮಿಷನ್ ವಿಚಾರ. 5 ಸಾವಿರ ಸೆರೆಂಡರ್ ಆದ ಬಸ್ ಇದೆ. ಟ್ಯಾಕ್ಸ್ ಕಟ್ಟದೇ ರಸ್ತೆಗೆ ಇಳಿಯಬಹುದು ಎಂಬ ಆದೇಶ ಸರ್ಕಾರ ಮಾಡಿದೆ
ಸದ್ಯ ಸಂಚರಿಸ್ತಾ ಇದ್ದ ಬಸ್ ಗಳಿಗೆ ಮಾತ್ರ ಅವಕಾಶ ಮಾಡಿದ್ದೇವೆ. ಫಿಟ್ನನೆಸ್ ಇರುವಂತ ಬಸ್ ಗಳು ಓಡಾಡ್ತಿವೆ
ಸರಿ ಇಲ್ಲದ ಬಸ್ ಗಳನ್ನು ಬಸ್ ಗಳನ್ನು ಓಡಿಸ್ತಾರೆ ಅಂತಾ ನಂಗೆ ಅನಿಸ್ತಿಲ್ಲಾ. ದುಪ್ಪಟ್ಟು ಹಣ, ದಂಡ ವಿಚಾರದ ಅಂಕಿ ಅಂಶ ಇಲ್ಲಾ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಹಿತಿ ಕೊಡಲಾಗುವುದು
ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳು ಕಾಲ ಖಾಸಗಿ ಅವರಿಗೆ ಟ್ಯಾಕ್ಸ್ ಇಂದ ವಿನಾಯತಿ ನೀಡಲಾಗಿದೆ
ಸಾರಿಗೆ ನೌಕರರ ಮುಷ್ಕರ ಹಿನ್ನಲೆ. ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಆಕ್ರೋಶ
ಬೆಳಿಗ್ಗೆ ಯಿಂದ ಮೆಜೆಸ್ಟಿಕ್ ಟೂ ಚನ್ನಮ್ಮನಕೆರೆ ಅಚ್ಚುಕಟ್ಟು ರೂಟ್ ಡ್ಯೂಟಿ ಮಾಡುತ್ತಿರೋ ಚಾಲಕ ತ್ಯಾಗರಾಜ್. ಇದೆ ಚಾಲಕನಿಗೆ ಬೆಳಿಗ್ಗೆ ಸಾರ್ವಜನಿಕರು ಸನ್ಮಾನ ಕೂಡ ಮಾಡಿದ್ರು. ಅದಕ್ಕೆ ವಿರುದ್ಧವಾಗಿ ಸಾರಿಗೆ ನೌಕರರು ತ್ಯಾಗರಾಜ್ ಫೋಟೋಗಳನ್ನ ಬಳಸಿ ಶ್ರದ್ದಾಂಜಲಿ ಅರ್ಪಣೆ
ತಮ್ಮ ಸ್ಥಳ ತಲುಪಲು ಅನ್ಯ ದಾರಿಯತ್ತ ಮುಖ ಮಾಡಿದ ಪ್ರಯಾಣಿಕರು
ಖಾಸಗಿ ಬಸ್, ಕ್ಯಾಬ್, ಆಟೋಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ
ಖಾಲಿ ಖಾಲಿಯಾಗಿರುವ ಬೆಂಗಳೂರು
ಬೆಂಗಳೂರು ಕೆಎಸ್ಆಟಿಸಿ ಬಸ್ ನಿಲ್ದಾಣ
ಆಟೋಗಳತ್ತ ಮುಖ ಮಾಡಿದ ಪ್ರಯಾಣಿಕರು
ಬಸ್ಗಳ ಸಂಚಾರವಿಲ್ಲದ ಬೆಂಗಳೂರು ರಸ್ತೆ
ಬಿಎಂಟಿಸಿ ಡ್ಯೂಟಿಗೆ ಹಾಜರಾದ ನಿರ್ವಾಹಕಿ