MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬೆಳಗಾವಿಯಲ್ಲಿ ಎಟಿಎಂ ಬೂತ್ ಉಂಟು, ಬಾಕ್ಸ್ ಇಲ್ಲ; ಕಳ್ಳರ ರಾಬರಿ ಐಡಿಯಾ ನೋಡಿ, ಪೊಲೀಸರೇ ಗಾಬರಿ!

ಬೆಳಗಾವಿಯಲ್ಲಿ ಎಟಿಎಂ ಬೂತ್ ಉಂಟು, ಬಾಕ್ಸ್ ಇಲ್ಲ; ಕಳ್ಳರ ರಾಬರಿ ಐಡಿಯಾ ನೋಡಿ, ಪೊಲೀಸರೇ ಗಾಬರಿ!

ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ ವಿಚಿತ್ರ ಎಟಿಎಂ ಕಳ್ಳತನ! ಖದೀಮರು ತಳ್ಳು ಗಾಡಿಯಲ್ಲಿ ಸಂಪೂರ್ಣ ಮಷಿನ್ ಹೊತ್ತೊಯ್ದರು. ಪೊಲೀಸರನ್ನೇ ದಂಗಾಗಿಸಿದ ಈ ಘಟನೆಯ ವಿವರ ತಿಳಿಯಲು ಕ್ಲಿಕ್ ಮಾಡಿ.

2 Min read
Sathish Kumar KH
Published : Dec 02 2025, 01:05 PM IST
Share this Photo Gallery
  • FB
  • TW
  • Linkdin
  • Whatsapp
16
ಕಳ್ಳರ ರಾಬರಿ ಐಡಿಯಾ ನೋಡಿ ಪೊಲೀಸರೇ ಗಾಬರಿ
Image Credit : Asianet News

ಕಳ್ಳರ ರಾಬರಿ ಐಡಿಯಾ ನೋಡಿ ಪೊಲೀಸರೇ ಗಾಬರಿ

ಬೆಳಗಾವಿ (ಡಿ.02): ರಾಜ್ಯದಲ್ಲಿ ಎಟಿಎಂ (ATM) ಕಳ್ಳತನ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕಳ್ಳತನ ಮಾಡಲು ಬಂದ ಖದೀಮರು ಬಳಸಿದ ನೂತನ ಮತ್ತು ವಿಚಿತ್ರ ಐಡಿಯಾ ಕಂಡು ಪೊಲೀಸರೇ ದಂಗಾಗಿದ್ದಾರೆ.

ಕಳ್ಳರು ಎಟಿಎಂ ಮಷಿನ್‌ನ ಸಂಪೂರ್ಣ ಘಟಕವನ್ನು ಕಟ್ ಮಾಡದೆ, ಸೀದಾ ತಳ್ಳು ಗಾಡಿಯಲ್ಲಿ ಹೊತ್ತುಕೊಂಡು ಹೋಗಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

26
ಘಟನೆ ವಿವರ:
Image Credit : Asianet News

ಘಟನೆ ವಿವರ:

ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಹೊಸ ವಂಟಮೂರಿ ಗ್ರಾಮದ ಬಳಿಯಿರುವ ಇಂಡಿಕ್ಯಾಶ್ (Indicash) ಎಟಿಎಂ ಕೇಂದ್ರಕ್ಕೆ ಮೂವರು ಖದೀಮರು ಮಂಗಳವಾರ ತಡರಾತ್ರಿ ಕನ್ನ ಹಾಕಿದ್ದಾರೆ.

ಬ್ಲಾಕ್ ಸ್ಪ್ರೇ ಪ್ರಯೋಗ: ಕಳ್ಳರು ಮೊದಲು ಎಟಿಎಂ ಕೊಠಡಿಯೊಳಗೆ ಪ್ರವೇಶಿಸಿ, ಕಳ್ಳತನದ ಶಬ್ದವಾದರೆ ಅಲಾರಾಂ ಸದ್ದು ಮಾಡದಂತೆ ಎಟಿಎಂ ಮಷಿನ್‌ನಲ್ಲಿರುವ ಸೆನ್ಸಾರ್‌ಗಳ ಮೇಲೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಬಳಸಿ ಮುಚ್ಚಿದ್ದಾರೆ. ಇದರಿಂದ ಕಳ್ಳತನದ ಪ್ರಕ್ರಿಯೆಯ ಶಬ್ದವು ಅಲಾರಾಂ ಟ್ರಿಗರ್ ಮಾಡಲಿಲ್ಲ ಮತ್ತು ಅವರ ಚಲನವಲನ ಸ್ಪಷ್ಟವಾಗಿ ದಾಖಲಾಗದಂತೆ ನೋಡಿಕೊಂಡರು.

Related Articles

Related image1
ಕಳ್ಳರಿಗೆ ಪೊಲೀಸರ ಭಯವಿಲ್ಲ, ಎಟಿಎಂ ದರೋಡೆ ಕೇಸ್‌ಗಳಲ್ಲಿ ಬಿಹಾರವನ್ನು ಮೀರಿಸಿದ ಕರ್ನಾಟಕ!
Related image2
Now Playing
ಕುಡಿತಕ್ಕೆ ಹಣ ಇಲ್ಲವೆಂದು ATM ದರೋಡೆ
36
ತಳ್ಳು ಗಾಡಿಯ ಐಡಿಯಾ:
Image Credit : Asianet News

ತಳ್ಳು ಗಾಡಿಯ ಐಡಿಯಾ:

ನಂತರ, ಎಟಿಎಂ ಮಷಿನ್‌ನ ಸಂಪೂರ್ಣ ಘಟಕವನ್ನು ಅದರ ಬುಡದಿಂದ ಕಿತ್ತು ತೆಗೆದ ಖದೀಮರು, ತಾವು ಮೊದಲೇ ಸಿದ್ಧಪಡಿಸಿ ತಂದಿದ್ದ ತಳ್ಳು ಗಾಡಿ ಅಥವಾ ಟ್ರಾಲಿಯಲ್ಲಿ ಅದನ್ನು ಇಟ್ಟಿದ್ದಾರೆ. ಯಾವುದೇ ಸಂಶಯ ಬಾರದಂತೆ, ಅವರು ಸುಮಾರು 200 ಮೀಟರ್ ದೂರದವರೆಗೆ ಎಟಿಎಂ ಮಷಿನ್ ಇದ್ದ ತಳ್ಳುಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾರೆ.

46
ವಾಹನದಲ್ಲಿ ಎಸ್ಕೇಪ್:
Image Credit : Asianet News

ವಾಹನದಲ್ಲಿ ಎಸ್ಕೇಪ್:

ಕಳ್ಳರು ಸಾಮಾನ್ಯ ಕಾರ್ಮಿಕರಂತೆ ಸ್ವಲ್ಪ ದೂರು ನಡೆದುಕೊಂಡು ಬಂದು ಆ ನಂತರ, ಪೂರ್ವಯೋಜಿತವಾಗಿ ನಿಲ್ಲಿಸಿದ್ದ ತಮ್ಮ ವಾಹನದಲ್ಲಿ ಭಾರೀ ಎಟಿಎಂ ಮಷಿನ್ ಅನ್ನು ಹೇರಿಕೊಂಡು, ತಳ್ಳುಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಇಡೀ ಕೈ ಚಳಕವು ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

56
ಪೊಲೀಸರ ಪರಿಶೀಲನೆ:
Image Credit : Asianet News

ಪೊಲೀಸರ ಪರಿಶೀಲನೆ:

ಕಳ್ಳತನವಾಗಿರುವ ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಇತ್ತು ಎನ್ನಲಾಗಿದೆ. ಮುಂಜಾನೆ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

66
 ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ
Image Credit : Asianet News

ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ

ಖದೀಮರು ಬಳಸಿರುವ ಕಳ್ಳತನದ ಹೊಸ ಐಡಿಯಾ ಕಂಡು ಪೊಲೀಸರೇ ಅಚ್ಚರಿಗೊಂಡಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. 

ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿರುವ ಎಟಿಎಂಗಳಿಗೆ ಭದ್ರತೆಯನ್ನು ಹೆಚ್ಚಿಸುವ ಅನಿವಾರ್ಯತೆಯನ್ನು ಈ ಘಟನೆ ಮತ್ತೊಮ್ಮೆ ಒತ್ತಿಹೇಳಿದೆ. ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ವಾಹನ ಮತ್ತು ಗುರುತನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಳಗಾವಿ
ಕ್ರೈಮ್ ನ್ಯೂಸ್
ದರೋಡೆ

Latest Videos
Recommended Stories
Recommended image1
ಬಸ್ ಹತ್ತೋ ನೆಪದಲ್ಲಿ ಮೊಬೈಲ್ ಎಗರಿಸುತ್ತಿದ್ದ ಕಳ್ಳ ಸಹೋದರರರು ಅರೆಸ್ಟ್, ಒಂದೇ ತಾಯಿ ಮಕ್ಕಳು, ಒಟ್ಟಿಗೆ ಕಳ್ಳತನ, ಜೊತೆಗೇ ಜೈಲು!
Recommended image2
Cartier ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ ಸಿಎಂ-ಡಿಸಿಎಂ? ಕಂಪನಿ ಪ್ರಕಾರ ಇದ್ರ ಬೆಲೆ 43 ಲಕ್ಷ ರೂ
Recommended image3
ಶ್ರೀರಂಗಪಟ್ಟಣ: ನಾಳೆ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ, ಟಿಪ್ಪು ಮಸೀದಿ ಸುತ್ತ ಬಿಗಿ ಭದ್ರತೆ, 100 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕಣ್ಗಾವಲು!
Related Stories
Recommended image1
ಕಳ್ಳರಿಗೆ ಪೊಲೀಸರ ಭಯವಿಲ್ಲ, ಎಟಿಎಂ ದರೋಡೆ ಕೇಸ್‌ಗಳಲ್ಲಿ ಬಿಹಾರವನ್ನು ಮೀರಿಸಿದ ಕರ್ನಾಟಕ!
Recommended image2
Now Playing
ಕುಡಿತಕ್ಕೆ ಹಣ ಇಲ್ಲವೆಂದು ATM ದರೋಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved