ಸಂಸ್ಕೃತಿ ಪಸರಿಸೋ ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವ
ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಕಳೆದ 49 ವರ್ಷಗಳಿಂದಲೂ ವಿವಿಧ ಸಾಂಸ್ಕೃತಿಕ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಸಂಸ್ಥೆ ಬನಶಂಕರಿ ಸಾಂಸ್ಕೃತಿಕ ಸಂಘ. ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಸಂಘದ ಹಿರಿಯ ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂಘದ 49ನೇ ವಾರ್ಷಿಕೋತ್ಸವದ ಝಲಕ್ ಇದು...
ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದ ಉದ್ಘಾಟಿಸಿದ ಹಿರಿಯ ಸದಸ್ಯರು ಹಾಗೂ ಮುಖ್ಯ ಅತಿಥಿ ಸುಮನ್ ನಗರ್ಕರ್.
ಸಂಘದ ಹಿರಿಯ ಸದಸ್ಯ ಜೆ.ಕೆ.ರಂಗಾಭಟ್ಗೆ ಸನ್ಮಾನ.
ಸಂಘದ ಗೌರವ ಖಜಾಂಚಿಯಾಗಿರುವ ಡಿ.ಎಸ್.ವೆಂಕಟಸುಬ್ಬರಾವ್ ಅವರಿಗೂ ಗೌರವ ಸಮರ್ಪಣೆ.
ನಟಿ, ನಿರ್ಮಾಪಕಿ ಸಾಂಡಲ್ವುಡ್ನ 'ಬೆಳದಿಂಗಳ ಬಾಲೆ' ಸುಮಾನ್ ನಗರ್ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಹಲವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಹೆಸರು ಮಾಡಿರುವ ಸಂಸ್ಥೆ.
ಕಾರ್ಯಕ್ರಮದಲ್ಲಿ ಸುಮನ್ ನಗರ್ಕರ್.
ಸಂಘದ ಹಿರಿಯ ಸದಸ್ಯ ಶ್ರೀಯುತ ರಾಮಕೃಷ್ಣ ಐತಾಳ್ ಅವರಿಂದ ಸುಮನ್ ಅವರಿಗೆ ಗೌರವ ಸಮರ್ಪಣೆ.
ಪ್ರತೀ ವರ್ಷವೂ ಸಂಘದ ಹಿರಿಯರಿಗೆ ಸನ್ಮಾನಿಸುವ ವಾಡಿಕೆ ಇಟ್ಟುಕೊಂಡಿರುವ ಸಂಘ.
ಸಂದಸ್ಯರು ಮನೋರಂಜನೆ ಕಾರ್ಯಕ್ರಮವನ್ನೂ ನಡೆಸಿ ಕೊಡುತ್ತಾರೆ.
ಸಂಘದ ಸದಸ್ಯರಿಂದ ನಾಟಕ ಪ್ರದರ್ಶನ.
ಕಾರ್ಯಕ್ರಮದ ಮುಖ್ಯ ಅತಿಥಿಗಳೊಂದಿಗೆ ಸಂಘದ ಸದಸ್ಯರು.
ಹಿರಿಯ ಸದಸ್ಯರ ಮನೋರಂಜನಾ ಕಾರ್ಯಕ್ರಮ.
ಮನಮೋಹಕ ನೃತ್ಯ ರೂಪಕ.