MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಪತ್ರಕರ್ತ ಮಗನಿಂದ ಶಶಿ ತರೂರ್ ಗೆ ಪ್ರಶ್ನೆಗಳ ಸುರಿಮಳೆ, ಪಾಕ್ ವಿರುದ್ಧ 3 ಪುರಾವೆ ಕೊಟ್ಟ ಮುಖಂಡ

ಪತ್ರಕರ್ತ ಮಗನಿಂದ ಶಶಿ ತರೂರ್ ಗೆ ಪ್ರಶ್ನೆಗಳ ಸುರಿಮಳೆ, ಪಾಕ್ ವಿರುದ್ಧ 3 ಪುರಾವೆ ಕೊಟ್ಟ ಮುಖಂಡ

ಶಶಿ ತರೂರ್ ಅವರ ಮಗ ಇಶಾನ್ ತರೂರ್, ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಪುರಾವೆಗಳನ್ನು ಕೇಳಿದರು. ತರೂರ್, ಪಾಕಿಸ್ತಾನದ ಭಾಗಿತ್ವ ಸ್ಪಷ್ಟವಾಗಿದೆ ಮತ್ತು ಪುರಾವೆಗಳಿಲ್ಲದೆ ಭಾರತ ಪ್ರತಿಕ್ರಿಯಿಸುತ್ತಿರಲಿಲ್ಲ ಎಂದು ಹೇಳಿದರು.

3 Min read
Gowthami K
Published : Jun 06 2025, 11:00 AM IST| Updated : Jun 06 2025, 01:16 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಅಮೆರಿಕದಲ್ಲಿ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಅವರ ಮಗ ಇಶಾನ್ ತರೂರ್‌ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಗುರುವಾರ ಪತ್ರಕರ್ತರಾಗಿ ಪ್ರಶ್ನೆ ಕೇಳಿದರು. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದಕ್ಕೆ ಪುರಾವೆ ಏನು? ಯಾವ ದೇಶಗಳಾದರೂ ಪಾಕಿಸ್ತಾನದ ಪಾತ್ರದ ಬಗ್ಗೆ ಪುರಾವೆ ಕೇಳಿದರೆ? ಎಂದು ಕೇಳಿದ ಇಶಾನ್ ತರೂರ್‌ ದಾಳಿಯಲ್ಲಿ ತನ್ನ ಕೈವಾಡವನ್ನು ಪಾಕಿಸ್ತಾನ ನಿರಂತರವಾಗಿ ನಿರಾಕರಿಸುತ್ತಿರುವ ಬಗ್ಗೆಯೂ ಪ್ರಶ್ನಿಸಿದರು. ಇದಕ್ಕೆ, ಪಾಕಿಸ್ತಾನದ ವಿರುದ್ಧ ಮನವರಿಕೆಯಾಗುವ ಪುರಾವೆಗಳು ಇಲ್ಲದಿದ್ದರೆ ಭಾರತವು ಈ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತಿರಲಿಲ್ಲ ಎಂದು ತರೂರ್ ಹೇಳಿದರು. ತಿಳಿದಿಲ್ಲದವರಿಗೆ ಶಶಿ ತರೂರ್ ಮಗ ಅಮೆರಿಕದ ವಾಷಿಂಗ್ಟನ್, ಡಿಸಿಯಲ್ಲಿ ನೆಲೆಸಿರುವ ಪತ್ರಕರ್ತರಾಗಿದ್ದಾರೆ.

27
Image Credit : shashi tharoor X

ತಮ್ಮ ಮಗನ ಪ್ರಶ್ನೆಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, “ನೀವು ಈ ವಿಷಯ ಎತ್ತಿದಕ್ಕೆ ನನಗೆ ಸಂತೋಷವಾಯಿತು. ಇದು ನನ್ನ ಪ್ರಸ್ತಾವನೆಯಲ್ಲ, ಈ ಪ್ರಶ್ನೆ ನೀವೇ ಕೇಳಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಯಾವ ದೇಶವೂ ಪಾಕಿಸ್ತಾನದ ವಿರುದ್ಧ ಪುರಾವೆ ಕೇಳಿಲ್ಲ. ಏಕೆಂದರೆ ಈ ದಾಳಿಗೆ ಪಾಕಿಸ್ತಾನದ ಭಾಗಿತ್ವವಿದೆ ಎಂಬುದು ವಿಶ್ವದ ಎಷ್ಟೋ ಮಂದಿ ದೇಶಗಳಿಗೆ ಈಗಾಗಲೇ ಗೊತ್ತಿದೆ. ಭಾರತವು ಪುರಾವೆಗಳಿಲ್ಲದೆ ಈ ರೀತಿ ತೀವ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ” ಎಂದು ಹೇಳಿದರು.

"ಸರಳವಾಗಿ ಹೇಳಬೇಕೆಂದರೆ, ಯಾರಿಗೂ ಯಾವುದೇ ಸಂದೇಹವಿರಲಿಲ್ಲ, ಮತ್ತು ನಮ್ಮಲ್ಲಿ ಪುರಾವೆ ಕೇಳಲಾಗಿಲ್ಲ. ಏಕೆಂದರೆ ಈ ದಾಳಿಗೆ ಪಾಕಿಸ್ತಾನದ ಭಾಗಿತ್ವವಿದೆ ಎಂಬುದು ವಿಶ್ವದ ಎಷ್ಟೋ ಮಂದಿ ದೇಶಗಳಿಗೆ ಈಗಾಗಲೇ ಗೊತ್ತಿದೆ. ಭಾರತವು ಪುರಾವೆಗಳಿಲ್ಲದೆ ಈ ರೀತಿ ತೀವ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಮಾಧ್ಯಮಗಳು ಎರಡು ಅಥವಾ ಮೂರು ಸ್ಥಳಗಳಲ್ಲಿ ಕೇಳಿವೆ ಎಂದರು.

Related Articles

Related image1
ಆಪರೇಷನ್ ಸಿಂದೂರ ಎಂಬ ಹೆಸರಿನ ಆಯ್ಕೆ ಅದ್ಭುತ: ಅಮೆರಿಕ ಮಾಧ್ಯಮಕ್ಕೆ ಬಿಡಿಸಿ ಹೇಳಿದ ಶಶಿ ತರೂರ್
Related image2
ಶಶಿ ತರೂರ್ ಇಂಗ್ಲಿಷ್‌ಗೆ ಅರ್ಥ ಮಾಡಿಕೊಳ್ಳಲು ಅನುವಾದಕರನ್ನ ನೇಮಿಸಿಕೊಂಡ್ರಂತೆ ಟ್ರಂಪ್
37
Image Credit : ANI

ಪಾಕಿಸ್ತಾನ ಕಳೆದ 37 ವರ್ಷಗಳಿಂದ ಭಾರತದ ಮೇಲೆ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಪಾಕಿಸ್ತಾನ ಯಾವಾಗಲೂ ಇದನ್ನು ನಿರಾಕರಿಸುತ್ತಾ ಬಂದಿದೆ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ಶಿಬಿರದ ಹತ್ತಿರದ ಸುರಕ್ಷಿತವಾಗಿ ಮನೆಯಲ್ಲಿ ಪತ್ತೆಯಾದದ್ದು ವಿಶ್ವದ ಮುಂದೆಯೇ ಪಾಕಿಸ್ತಾನದ ಹೇಳಿದ ಸುಳ್ಳನ್ನು ತೋರಿಸುತ್ತದೆ. ಆದರೆ ಅಮೆರಿಕನ್ನರು ಮರೆತಿಲ್ಲ ಮತ್ತು ಮರೆಯಲಿಲ್ಲ. 2008ರ ಮುಂಬೈ ದಾಳಿಯಲ್ಲಿ ಲಷ್ಕರ್ ಭಯೋತ್ಪಾದಕನು ಜೀವಂತವಾಗಿ ಸೆರೆಹಿಡಿಯಲಾಯಿತು. ಅವನ ಹೆಸರು, ಗುರುತು ಮತ್ತು ವಿಳಾಸ ಪಾಕಿಸ್ತಾನದಲ್ಲಿದೆ. ವಿಚಾರಣೆಯ ಸಮಯದಲ್ಲಿ ಎಲ್ಲವೂ ಬಹಿರಂಗವಾಯಿತು. ಅವನಿಗೆ ಎಲ್ಲಿ ತರಬೇತಿ ನೀಡಲಾಯಿತು ಮತ್ತು ಏನು ಮಾಡಲಾಯಿತು ಎಂದು ಅವನು ನಮಗೆ ಹೇಳಿದನು. ಅವನು ಪಾಕಿಸ್ತಾನದಲ್ಲಿಯೇ ತರಬೇತಿ ಪಡೆದಿದ್ದನೆಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಯಿತು. ಭಾರತೀಯ ಮತ್ತು ಅಮೆರಿಕನ್ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರಿಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳು ನೀಡಿದ ನಿಖರ ಸೂಚನೆಗಳನ್ನು ರೆಕಾರ್ಡ್ ಮಾಡಿದ್ದವು ಎಂದರು.

47
Image Credit : Instagram

ಪಹಲ್ಗಾಮ್ ದಾಳಿಗೆ "ರೆಸಿಸ್ಟೆನ್ಸ್ ಫ್ರಂಟ್ (TRF)" ಎಂಬ ಸಂಘಟನೆ ಜವಾಬ್ದಾರಿ ಹೊತ್ತಿದೆ. TRF ಲಷ್ಕರ್ ಎ ತೊಯ್ಬಾದ ಪಾಕಿಸ್ತಾನ ಮೂಲದ ಪ್ರಾಕ್ಸಿ ಫ್ರಂಟ್ ಆಗಿದೆ. ಈ ಸಂಘಟನೆ ಪಾಕಿಸ್ತಾನದ ಮುರೀಡ್ಕೆ ಪ್ರದೇಶದಲ್ಲಿ ನೆಲೆ ಹೊಂದಿದೆ. TRF ಅನ್ನು ಯುಎನ್ ಹಾಗೂ ಅಮೆರಿಕ ನಿಷೇಧಿತ ಭಯೋತ್ಪಾದಕ ಸಂಘಟನೆಯೆಂದು ಪಟ್ಟಿ ಮಾಡಿದ್ದಾರೆ.

ಲಷ್ಕರ್-ಎ-ತೈಬಾದ ಪ್ರಸಿದ್ಧ ಪ್ರಾಕ್ಸಿ ಫ್ರಂಟ್" ಎಂದು ಕರೆದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ "ದುರಂತದ 45 ನಿಮಿಷಗಳ ಒಳಗೆ" ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಎಂದು ಶಶಿ ತರೂರ್ ಎತ್ತಿ ತೋರಿಸಿದರು. ಭಾರತವು ಡಿಸೆಂಬರ್ 2023 ಮತ್ತು 2024ರಲ್ಲಿ ಯುಎನ್ ಸಮಿತಿಗೆ TRF ಬಗ್ಗೆ ಪುರಾವೆಗಳನ್ನು ನೀಡಿದರೂ, ಪಾಕಿಸ್ತಾನ ಸಮಿತಿಯ ಸದಸ್ಯನಾಗಿದ್ದರಿಂದ TRF ಪಟ್ಟಿ ಆಗಲಿಲ್ಲ.

57
Image Credit : Asianet News

"ರೆಸಿಸ್ಟೆನ್ಸ್ ಫ್ರಂಟ್" "ವಿಶ್ವಸಂಸ್ಥೆ ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪಟ್ಟಿ ಮಾಡಿರುವ ನಿಷೇಧಿತ ಸಂಘಟನೆಯಾಗಿದ್ದು, ಪಾಕಿಸ್ತಾನದ ಮುರಿಡ್ಕೆ ಪಟ್ಟಣದಲ್ಲಿ ಸುರಕ್ಷಿತ ತಾಣವನ್ನು ಹೊಂದಿದೆ" ಎಂದು ತರೂರ್ ಹೇಳಿದರು ಮತ್ತು ಭಾರತವು ಡಿಸೆಂಬರ್ 2023 ರಲ್ಲಿ ಮತ್ತು 2024 ರಲ್ಲಿ ಯುಎನ್ ಸಮಿತಿಗೆ ರೆಸಿಸ್ಟೆನ್ಸ್ ಫ್ರಂಟ್ ಮತ್ತು ಅದರ ಕಾರ್ಯಗಳ ಬಗ್ಗೆ ಪುರಾವೆಗಳನ್ನು ಈಗಾಗಲೇ ಪ್ರಸ್ತುತಪಡಿಸಿದೆ ಎಂದು ಹೇಳಿದರು. ಆದಾಗ್ಯೂ, ಪಾಕಿಸ್ತಾನವು ಸಮಿತಿಯ ಸದಸ್ಯನಾಗಿದ್ದರಿಂದ, ಯುಎನ್ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಪಟ್ಟಿ ಮಾಡಲಿಲ್ಲ, ಆದರೆ ಅದರ ಗುರುತು "ತಿಳಿದಿದೆ ಮತ್ತು ಪ್ರಚಾರ ಮಾಡಲ್ಪಟ್ಟಿದೆ" ಎಂದು ತರೂರ್ ಹೇಳಿದರು.

67
Image Credit : ANI

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಯಲ್ಲಿ ‘ರೆಸಿಸ್ಟೆನ್ಸ್ ಫ್ರಂಟ್‌’ (TRF) ಎಂಬ ಭಯೋತ್ಪಾದಕ ಸಂಘಟನೆಯನ್ನು ಸೇರಿಸಲು ಭಾರತ ನಿರಂತರ ಪ್ರಯತ್ನಿಸುತ್ತಿದೆ. ಈ ಸಂಘಟನೆ ಏಪ್ರಿಲ್ 22ರಂದು ಪಹಲ್ಗಾಮ್ ದಾಳಿಗೆ ಜವಾಬ್ದಾರಿ ಹೊತ್ತುಕೊಂಡಿತು. ಮೇ 7ರಂದು, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ “ಆಪರೇಷನ್ ಸಿಂದೂರ” ಎಂಬ ಹೆಸರಿನಲ್ಲಿ ಭಾರಿ ಪ್ರತಿಕಾರದ ಕಾರ್ಯಾಚರಣೆ ನಡೆಸಿತು. ಈ ಆಪರೇಷನ್‌ನಿಂದ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಯಿತು.

77
Image Credit : ANI

ಈ ದಾಳಿಯಿಂದ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಗಳಿಗೆ ಸೇರಿದ್ದವರೂ ಇದ್ದರು. ಅವರ ಅಂತ್ಯಕ್ರಿಯೆ ಪಾಕಿಸ್ತಾನದಲ್ಲಿ ನಡೆಯಿತು. ಇದರಲ್ಲಿ ಪಾಕಿಸ್ತಾನದ ಸೇನಾ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಈ ದೃಶ್ಯಗಳು ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಎನಿಸುತ್ತವೆ ಎಂದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಶಶಿ ತರೂರ್
ಪಹಲ್ಗಾಮ್ ಭಯೋತ್ಪಾದಕ ದಾಳಿ
ಪಹಲ್ಗಾಮ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved