ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ ದಿಟ್ಟ ವಕೀಲೆ ಸೀಮಾ ಈಗ ಖುಷ್ ಹುಯಿ
ಇಡೀ ದೇಶವೇ ಕಾಯುತ್ತಿದ್ದ ದಿನ ಕಡೆಗೂ ಬಂದಿದೆ. ಅಮಾನವೀಯವಾಗಿ ಅತ್ಯಾಚಾರವೆಸಗಿ ನಿರ್ಭಯಾ ಎಂಬ ಯುವತಿಯನ್ನು ಕೊಂದ ಕೀಚಕರಿಗೆ ಗಲ್ಲಾಗಿದೆ. ಅಬ್ಬಾ, ಭಾರತೀಯ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸೂಕ್ಷ್ಮ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಪರ ಹೋರಾಡಿ, ದಿಟ್ಟತನ ತೋರಿದ ನಿರ್ಭಯಾ ವಕೀಲೆ ಸೀಮಾ ಸಮೃದ್ಧಿ ಖುಷ್ವಾ ಬಗ್ಗೆ ಒಂದಿಷ್ಟು...
ದಿಲ್ಲಿಯಲ್ಲಿ 23 ವರ್ಷದ ಯುವತಿಯನ್ನು ಚಲಿಸುವ ಬಸ್ಲಲ್ಲೇ ಗ್ಯಾಂಗ್ ರೇಪ್ ಮಾಡಿ, ಕೊಂದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಕೃತ್ಯವೆಸಗಿದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೆಂದು ಕುಣಿಕೆಯಿಂದ ತಪ್ಪಿಸಿಕೊಂಡ. ಇನ್ನೊಬ್ಬ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡ.
ಉಳಿದ ನಾಲ್ವರು ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಿದರೂ, ಬಿಡಲಿಲ್ಲ ವಕೀಲೆ ಸೀಮಾ.
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
ಐಎಎಸ್ ಓದುವ ಹಂಬಲವಿರುವ ಈ ವಕೀಲೆ, ಅದಕ್ಕೆ ತಕ್ಕ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಇಟಾವಾದವರು.
ನಿರ್ಭಯಾ ಹೆಸರಲ್ಲಿ ಟ್ರಸ್ಟ್ವೊಂದನ್ನು ಆರಂಭಿಸುತ್ತಿದ್ದಾರೆ.
ಹೆಣ್ಣು ಸಂಕುಲಕ್ಕೇ ಅವಮಾನವಾಗುವಂಥ ಹೇಳಕೆಗಳನ್ನು ನೀಡಿದ್ದರು ಸಿಂಗ್.
ಡೆತ್ ವಾರೆಂಟ್ ನಾಲ್ಕಾರು ಬಾರಿ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತು.
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
ನಿಂಗ್ಯಾಕೆ ಉಸಾಬರಿ, ಸುಮ್ಮನಾಗು ಎಂದರೂ ಕೇಳಿಸಿಕೊಳ್ಳಲಿಲ್ಲ.
ಪದೆ ಪದೇ ಡೆತ್ ವಾರೆಂಟ್ ಕ್ಯಾನ್ಸಲ್ ಆದಾಗ ಇನ್ನು ನ್ಯಾಯ ಸಿಗೋದು ಡೌಟ್ ಎಂದೆನಿಸಿತ್ತು.
ಆದರೆ, ಎದೆ ಗುಂದಲಿಲ್ಲ ಸೀಮಾ.
ಭಾರತೀಯ ಹೆಣ್ಣು ಮಕ್ಕಳ ಮನೋ ಬಲ ಹೆಚ್ಚಿಸಿದ ಸೀಮಾಗೆ ಅಭಿನಂದನೆಗಳು. ಇಂಥವರ ಸಂಖ್ಯೆ ವೃದ್ಧಿಸಲಿ.