MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • PM Modi Traditional Attire ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!

PM Modi Traditional Attire ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!

ಪ್ರಧಾನಿ ಮೋದಿ ಭಾರತದ ಯಾವುದೇ ಮೂಲೆಗೆ ತೆರಳಿದರೂ ಅಲ್ಲಿಯ ಸಂಪ್ರದಾಯ, ಆಚಾರ ವಿಚಾರ, ಭಾಷೆಗಳಿಗೆ ಒತ್ತು ನೀಡುತ್ತಾರೆ. ಈ ಮೂಲಕ ಸ್ಥಳೀಯ ಜನರು ತಮ್ಮ ತಮ್ಮ ಪರಂಪರೆಯನ್ನು ಹೆಮ್ಮೆಯಿಂದ ಕಾಣುವಂತೆ, ಆಚರಿಸುವಂತೆ ಮಾಡಿದ್ದಾರೆ. ಇದೀಗ ಕೇರಳಕ್ಕೆ ಆಗಮಿಸಿದ ಮೋದಿ ತಮ್ಮ ವಿಶೇಷ ವಸ್ತ್ರದಿಂದ ಗಮನಸೆಳೆದಿದ್ದಾರೆ. 

2 Min read
Suvarna News
Published : Sep 01 2022, 06:29 PM IST
Share this Photo Gallery
  • FB
  • TW
  • Linkdin
  • Whatsapp
17

ಭಾರತೀಯ ಸಂಸ್ಕೃತಿಯನ್ನು ವಿಶ್ವದ ಮುಂದೆ ಹೆಮ್ಮೆಯಿಂದ ಪ್ರಚುರ ಪಡಿಸಿ ಜನಪ್ರಿಯತೆಯನ್ನು ಹೆಚ್ಚಿಸಿರುವ ನಾಯಕ ಅಂದರೆ ಅದು ಪ್ರಧಾನಿ ನರೇಂದ್ರ ಮೋದಿ. ದೇಶದ ಯಾವುದೇ ಸ್ಥಳಕ್ಕೆ ತೆರಳಿದರೆ ಅಲ್ಲಿನ ವಸ್ತ್ರ, ಅಲ್ಲಿನ ಆಹಾರ, ಭಾಷೆ, ಪರಂಪರೆ, ಸಂಸ್ಕೃತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಇದೀಗ ದಕ್ಷಿಣ ಪ್ರವಾಸದಲ್ಲಿರುವ ಮೋದಿ ಕೇರಳದ ಕೊಚ್ಚಿಗೆ ಬಿಳಿ ಪಂಚೆ, ಶರ್ಟ್ ಹಾಗೂ ಶಲ್ಯ ಹಾಕಿ ಆಗಮಿಸಿದರು.

27

ಮೋದಿ ಬಟ್ಟೆ ಎಲ್ಲರ ಗಮನಸೆಳೆದಿದೆ. ಕೇರಳದ ವಿಶೇಷ ಉಡುಗೆಯಾಗಿರುವ ಬಿಳಿ ಪಂಚೆ, ಬಿಳಿ ಶರ್ಟ್ ಹಾಗೂ ಶಲ್ಯ ಮೂಲಕ ಮೋದಿ ಕೇರಳಿಗರಾಗಿ ಮಿಂಚಿದರು. ಕೇರಳದಲ್ಲಿ ಬಿಳಿ ಪಂಚೆ ಸರ್ಕಾರಿ ಅಧಿಕೃತ ಉಡುಗೆಯಾಗಿದೆ. ಸರ್ಕಾರಿ ಕಚೇರಿಗಳಿಗೆ ಬಿಳಿ ಪಂಚೆ ಧರಿಸಿ ಕೆಲಸಕ್ಕೆ ಹಾಜರಾಗಬಹುದು. ಇದೀಗ ಮೋದಿ ವಿಶೇಷ ಉಡುಗೆಯಲ್ಲಿ ಮಿಂಚಿದ್ದಾರೆ.

37

ಕೊಚ್ಚಿಗೆ ಆಗಮಿಸಿದ ಮೋದಿ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ ಮೋದಿ ವಸ್ತ್ರಕ್ಕೆ ಜನ ಮಾರುಹೋಗಿದ್ದಾರೆ. ಮೋದಿಯನ್ನು ಸ್ವಾಗತಿಸಲು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ , ಸಿಎಂ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆರೀಫ್ ಮೊಹಮ್ಮದ್ ಹಾಗೂ ಪಿಣರಾಯಿ ವಿಜಯನ್ ಕೂಡ ಬಿಳಿ ಪಂಚೆ ತೊಟ್ಟಿದ್ದರು. 

47

ಕೇರಳದ ಕೊಚ್ಚಿಗೆ ಆಗಮಿಸಿದ ಮೋದಿ ಕೇರಳಿಗರಂತೆ ಮಿಂಚಿದರು. ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮೋದಿ ಭಾಷಣ ಮಾಡಿದರು. ಈ ವೇಳೆ ಕೇಂದ್ರ ಸರ್ಕಾರದ ಸಾಧನೆ, ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. 

57

ಕೇರಳಕ್ಕೂ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ ಇದೆ. ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿ ಪಥದಲ್ಲಿ ರಾಜ್ಯ ಸಾಗಲು ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಉತ್ತಮ ಎಂದು ಮೋದಿ ಹೇಳಿದ್ದಾರೆ. ಕೇರಳ ಜನ ಬಿಜೆಪಿಯನ್ನು ಆಶಾವಾದಿಂದ ನೋಡುತ್ತಿದ್ದಾರೆ ಎಂದಿದ್ದಾರೆ.
 

67

ಮೋದಿ ಭಾಷಣಕ್ಕೆ ಕಿಕ್ಕಿರಿದು ಜನ ಸೇರಿದ್ದರು.  ವಿಮಾನ ನಿಲ್ದಾಣದ ಪಕ್ಕದಲ್ಲೇ ಆಯೋಜಿಸಿದ್ದ ಸಾರ್ವಜನಿಕೆ ಸಭೆಗೆ ಆಗಮಿಸಿದ ಜನರಿಗೆ ಮೋದಿ ಧನ್ಯವಾದ ಹೇಳಿದರು.  ಇದೇ ವೇಳೆ ಕೇರಳ ಜನತೆಗೆ ಓಣಂ ಹಬ್ಬದ ಶುಭಕೋರಿದ್ದಾರೆ.
 

77
modi kerala

modi kerala

ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಮೋದಿ ಬಳಿಕ ಆದಿ ಶಂಕರಾಚಾರ್ಯದ ಜನ್ಮಸ್ಥಳ ಕಾಲಡಿಗೆ ತೆರಳಿದರು. ಇದು ನನ್ನ ಸೌಭಾಗ್ಯ ಎಂದು ಶಂಕರಾಚಾರ್ಯಯ ಜನ್ಮಸ್ಥಳ ಬೇಟಿ ಕುರಿತು ಮೋದಿ ಬಣ್ಣಸಿದ್ದಾರೆ.
 

About the Author

SN
Suvarna News
ಕೇರಳ
ನರೇಂದ್ರ ಮೋದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved