ಹುತಾತ್ಮ ಯೋಧ ಮನೀಶ್ ಅವರ ಅಂತಿಮ ದರ್ಶನಕ್ಕೆ ಜನಸಾಗರ, ಜೈ ಹಿಂದ್
ಭೋಪಾಲ್(ಆ. 27) ವೀರ ಮರಣ ಅಪ್ಪಿದ ಯೋಧ ಮನೀಶ್ ಕಾರ್ಪೆಂಟರ್ ಅವರಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಂತಿಮ ನಮನ ಸಲ್ಲಿಕೆ ಮಾಡಿದ್ದಾರೆ. ವೀರ ಯೋಧನ ಅಂತಿಮ ದರ್ಶನ ಪಡೆಯಲು ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಸೈನಿಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಷಣೆ ಮಾಡಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿಯೂ ಮಧ್ಯಪ್ರದೇಶ ಸಿಎಂ ಘೋಷಿಸಿದರು.
![article_image2](https://static-ai.asianetnews.com/images/01egq70aqw5abbbkw1bk4rexss/gf--5--jpg_300x169xt.jpg)
ಮನೀಶ್ ಅವರ ಪುತ್ಥಳಿ ನಿರ್ಮಾಣ ಮಾಡುವುದಾಗಿಯೂ ಶಿವರಾಜ್ ಸಿಂಗ್ ತಿಳಿಸಿದರು.
ಮನೀಶ್ ಅವರ ತವರು ಖುಜ್ನೇರ್ ಗೆ ಪಾರ್ಥಿವ ಶರೀರ ಆಗಮಿಸುವ ವೇಳೆ ಸಾವಿರಾರು ಜನರು ಮನೆ ಮಗನ ನೋಡಲು ಸೇರಿದ್ದರು.
ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮನೀಶ್ ಪ್ರಾಣ ತ್ಯಾಗ ಮಾಡಿದ್ದರು.
ಸುದರ್ಶನ್ ಚಕ್ರ ವಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮನೀಶ್ ಬಾರಾಮುಲ್ಲಾದಲ್ಲಿ ವೈರಿಗಳ ವಿರುದ್ಧ ಸೆಣೆಸಾಡಬೇಕಾದ ಪರಿಸ್ಥಿತಿ ಬಂದಿತ್ತು.
ಸಾಲೋಸಾದಲ್ಲಿ ಗುಂಡಿನ ಚಕಮಕಿ ನಡೆದ ವೇಳೆ ಮನೀಶ್ ಬಲಿದಾನ ಮಾಡಿದ್ದರು.
ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ನಮನ ಸಲ್ಲಿಸಲು ಸೇರಿದ್ದ ಜನಸಾಗರ
ಗಂಭೀರ ಗಾಯಗೊಂಡಿದ್ದ ಮನೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಯತ್ನ ಮಾಡಿದರೂ ಸಫಲವಾಗಲಿಲ್ಲ.
ದೇಶಪ್ರೇಮ ಹೇಗೆ ಜನರನ್ನು ಒಂದಾಗಿಸುತ್ತದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರನ್ನು ಕಂಡರೆ ಅವರಿಗೆ ಬರವುದು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮನೀಶ್ ಅವರಿಗೆ ನಮ್ಮಿಂದಲೂ ನಮನ
ನಮನ ಸಲ್ಲಿಸಿದ ಶಿವರಾಜ್ ಸಿಂಗ್ ಚೌಹಾಣ್