'ನಮ್ಮ ರೈತರು ಆಹಾರ ಯೋಧರು' ಪ್ರತಿಭಟನೆ ಬೆಂಬಲಕ್ಕೆ ನಿಂತ ಪ್ರಿಯಾಂಕಾ
ನವದೆಹಲಿ ( ಡಿ. 06 ) ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೂ ಕರೆ ನೀಡಿವೆ. ಸಲೆಬ್ರಿಟಿಗಳು ಸಹ ರೈತರ ಪ್ರತಿಭಟನೆ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಮಾತನಾಡಿದ್ದಾರೆ
ಗಾಯಕ, ನಟ, ನಿರೂಪಕ ದಿಲ್ಜಿತ್ ದೊಸಾಂಜ್ ಅವರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಇಂದಿನ ಸ್ಥಿತಿಯನ್ನು ವಿವರಿಸಿದ್ದಾರೆ.
ರೈತರು ನಮ್ಮ ದೇಶದ ಆಹಾರ ಯೋಧರು, ಅವರ ಭಯವನ್ನು ಹೋಗಲಾಡಿಸಬೇಕಾಗಿದೆ. ಅವರ ಆಶಯಗಳನ್ನುಪೂರೈಸಬೇಕಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲವಾಗಿ ಪ್ರಿಯಾಂಕಾ ಟ್ವೀಟ್ ಮಾಡಿದ್ದು ಪ್ರತಿಕ್ರಿಯೆಗಳು ಹರಿದು ಬಂದಿವೆ.
ಕಳೆದ ವಾರ ಗಾಯಕ, ನಟ, ನಿರೂಪಕ ದಿಲ್ಜಿತ್ ದೊಸಾಂಜ್ ಮತ್ತು ನಟಿ ಕಂಗನಾ ನಡುವೆ ಟ್ವೀಟರ್ ವಾರ್ ನಡೆದಿತ್ತು.
ಟ್ವಿಟರ್ ನಲ್ಲಿ ಸದ್ದು ಮಾಡುವ ಬದಲು ಬಡ ಜನರಿಗೆ ಆಹಾರ ನೀಡಿ ಎಂದು ಕಂಗನಾಗೆ ದೊಸಾಂಜ್ ಸಲಹೆ ನೀಡಿದ್ದರು.