ಒಬ್ಬನೇ ಮಗ ಸಂತೋಷ, ತಮಿಳುನಾಡಿನ ಆದಿತ್ಯ, ಪ್ರಾಣಾರ್ಪಣೆ ಮಾಡಿದ ನಿಮಗೊಂದು ಸೆಲ್ಯೂಟ್
ಲಡಾಖ್(ಜೂ.16): ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರಿಸಿದೆ. ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೂವರು ಯೋಧರು ಪ್ರಾಣ ಅರ್ಪಿಸಿದ್ದಾರೆ. ತೆಲಂಗಾಣದ ವೀರ ಯೋಧ ಸಂತೋಷ್ ಬಾಬು ಸಹ ಪ್ರಾಣತ್ಯಾಗ ಮಾಡಿದ್ದಾರೆ.

<p>ಚೀನಾದೊಂದಿಗಿನ ಹೋರಾಟದಲ್ಲಿ ಕರ್ನಲ್ ಸಂತೋಷ್ ಬಾಬು ಪ್ರಾಣ ತ್ಯಾಗ ಮಾಡಿದ್ದಾರೆ.</p>
ಚೀನಾದೊಂದಿಗಿನ ಹೋರಾಟದಲ್ಲಿ ಕರ್ನಲ್ ಸಂತೋಷ್ ಬಾಬು ಪ್ರಾಣ ತ್ಯಾಗ ಮಾಡಿದ್ದಾರೆ.
<p>16 ಬಿಹಾರ್ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು ಸಂತೋಷ್</p>
16 ಬಿಹಾರ್ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು ಸಂತೋಷ್
<p>ಮಗನ ಪ್ರಾಣತ್ಯಾಗದ ಬಗ್ಗೆ ತಾಯಿ ಮಾತನಾಡಿದ್ದಾರೆ.</p>
ಮಗನ ಪ್ರಾಣತ್ಯಾಗದ ಬಗ್ಗೆ ತಾಯಿ ಮಾತನಾಡಿದ್ದಾರೆ.
<p>ಮಗನ ತ್ಯಾಗದ ಬಗ್ಗೆ ಹೆಮ್ಮೆಇದೆ. ಆದರೆ ಒಬ್ಬನೇ ಮಗನ ಕಳೆದುಕೊಂಡ ನೋವು ಇದೆ ಎನ್ನುವಾಗ ಅವರ ಕಣ್ಣಲ್ಲಿ ದೇಶಭಕ್ತಿಯ ಪ್ರತಿರೂಪ.</p>
ಮಗನ ತ್ಯಾಗದ ಬಗ್ಗೆ ಹೆಮ್ಮೆಇದೆ. ಆದರೆ ಒಬ್ಬನೇ ಮಗನ ಕಳೆದುಕೊಂಡ ನೋವು ಇದೆ ಎನ್ನುವಾಗ ಅವರ ಕಣ್ಣಲ್ಲಿ ದೇಶಭಕ್ತಿಯ ಪ್ರತಿರೂಪ.
<p>ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನವರು.</p>
ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನವರು.
<p>ಸಂತೊಷ್ ಅವರ ತಂದೆ ಉಪೇಂದರ್ ಮತ್ತು ತಾಯಿ ಮಂಜುಳಾ ದೇಶಸೇವೆಯಲ್ಲಿ ನಿರತರಾಗಿದ್ದವರು. ಸಂತೋಷ್ ಪತ್ನಿ ಸಂತೋಷಿನಿ ದೆಹಲಿ ಮೂಲದವರು.</p>
ಸಂತೊಷ್ ಅವರ ತಂದೆ ಉಪೇಂದರ್ ಮತ್ತು ತಾಯಿ ಮಂಜುಳಾ ದೇಶಸೇವೆಯಲ್ಲಿ ನಿರತರಾಗಿದ್ದವರು. ಸಂತೋಷ್ ಪತ್ನಿ ಸಂತೋಷಿನಿ ದೆಹಲಿ ಮೂಲದವರು.
<p>ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್ ನಲ್ಲಿ ಮುಗಿಸಿ ನಂತರ ಪುಣೆಯಲ್ಲಿ ಡಿಗ್ರಿ ಮಾಡಿದ್ದರು.</p>
ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್ ನಲ್ಲಿ ಮುಗಿಸಿ ನಂತರ ಪುಣೆಯಲ್ಲಿ ಡಿಗ್ರಿ ಮಾಡಿದ್ದರು.
<p>ಮೊದಲು ಸಂತೋಷ್ ತಮ್ಮ ದೇಶಸೇವೆ ಆರಂಭಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ. ಹೈದರಾಬಾದ್ಗೆ ವರ್ಗಾವಣೆ ಕೇಳಿದ್ದು ಅದರ ನಿರೀಕ್ಷೆಯಲ್ಲಿದ್ದಾಗಲೇ ಚೀನಾದ ಕುತಂತ್ರಕ್ಕೆ ಬಲಿಯಾಗಿದ್ದಾರೆ.</p>
ಮೊದಲು ಸಂತೋಷ್ ತಮ್ಮ ದೇಶಸೇವೆ ಆರಂಭಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ. ಹೈದರಾಬಾದ್ಗೆ ವರ್ಗಾವಣೆ ಕೇಳಿದ್ದು ಅದರ ನಿರೀಕ್ಷೆಯಲ್ಲಿದ್ದಾಗಲೇ ಚೀನಾದ ಕುತಂತ್ರಕ್ಕೆ ಬಲಿಯಾಗಿದ್ದಾರೆ.
<p>ತಮಿಳುನಾಡಿನ ಯೋಧ ಆದಿತ್ಯ ಪಳನಿ ಪ್ರಾಣತ್ಯಾಗ ಮಾಡಿದ್ದಾರೆ.</p>
ತಮಿಳುನಾಡಿನ ಯೋಧ ಆದಿತ್ಯ ಪಳನಿ ಪ್ರಾಣತ್ಯಾಗ ಮಾಡಿದ್ದಾರೆ.
<p>ತಮಿಳುನಾಡು ಸರ್ಕಾರ ಪಳನಿ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದೆ.</p>
ತಮಿಳುನಾಡು ಸರ್ಕಾರ ಪಳನಿ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದೆ.
<p>ಪಳನಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತಮಿಳು ನಾಡು ಸರ್ಕಾರ ನೀಡಿದೆ.</p>
ಪಳನಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತಮಿಳು ನಾಡು ಸರ್ಕಾರ ನೀಡಿದೆ.
<p>ಕಾರಣವಿಲ್ಲದೇ ಚೀನಾ ಸೈನಿಕರು ದಾಳಿ ಮಾಡಿದ್ದಾರೆ. </p>
ಕಾರಣವಿಲ್ಲದೇ ಚೀನಾ ಸೈನಿಕರು ದಾಳಿ ಮಾಡಿದ್ದಾರೆ.
<p>ವೀರ ಯೋಧರ ಬಲಿದಾನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.</p>
ವೀರ ಯೋಧರ ಬಲಿದಾನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.