MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • 1980 ರಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರಾಧ್ಯಕ್ಷರ ಪಯಣ: ವಾಜಪೇಯಿಯಿಂದ ಜೆಪಿ ನಡ್ಡಾವರೆಗೆ

1980 ರಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರಾಧ್ಯಕ್ಷರ ಪಯಣ: ವಾಜಪೇಯಿಯಿಂದ ಜೆಪಿ ನಡ್ಡಾವರೆಗೆ

ತುರ್ತು ಪರಿಸ್ಥಿತಿಯ ನಂತರ ಜನಸಂಘ ನಾಯಕರು ಜನತಾ ಪಕ್ಷದಿಂದ ಬೇರ್ಪಟ್ಟು 1980 ರಲ್ಲಿ ಬಿಜೆಪಿಯನ್ನು ರಚಿಸಿದರು. ಅಟಲ್ ಬಿಹಾರಿ ವಾಜಪೇಯಿ ಅದರ ಮೊದಲ ಅಧ್ಯಕ್ಷರಾದರು. ನಾಲ್ಕು ದಶಕಗಳ ಈ ಪಯಣದಲ್ಲಿ ಭಾರತೀಯ ಜನತಾ ಪಕ್ಷದ ಹಲವಾರು ಅಧ್ಯಕ್ಷರು ಅದರ ಸಾರಥ್ಯವನ್ನು ವಹಿಸಿದ್ದಾರೆ. ಈ ಪ್ರಯಾಣದಲ್ಲಿ ಯಾರು ಯಾವಾಗ ಅಧ್ಯಕ್ಷರಾಗಿದ್ದರು ಎಂದು ತಿಳಿಯೋಣ. 

3 Min read
Gowthami K
Published : Sep 03 2024, 01:40 PM IST
Share this Photo Gallery
  • FB
  • TW
  • Linkdin
  • Whatsapp
113
ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅಟಲ್ ಬಿಹಾರಿ ವಾಜಪೇಯಿ

ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅಟಲ್ ಬಿಹಾರಿ ವಾಜಪೇಯಿ

ಭಾರತೀಯ ಜನತಾ ಪಕ್ಷದ ಮೊದಲ ಅಧ್ಯಕ್ಷರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 1980 ರಲ್ಲಿ ಸ್ಥಾಪನೆಯಾದ ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಆರು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದರು. ಮತ್ತು ಬಿಜೆಪಿ ಪಕ್ಷವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಾಜಪೇಯಿ ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ಜನಿಸಿದರು.

213
ಲಾಲ್ ಕೃಷ್ಣ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ ಭಾರತೀಯ ಜನತಾ ಪಕ್ಷದ ಎರಡನೇ ಅಧ್ಯಕ್ಷರಾಗಿದ್ದರು. ದೇಶದ ಉಪ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮೊದಲ ಬಾರಿಗೆ 1986 ರಲ್ಲಿ ಬಿಜೆಪಿ ಅಧ್ಯಕ್ಷರಾದರು. 1990 ರವರೆಗೆ ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. ಅವರು 1993 ರಿಂದ 1998 ರವರೆಗೆ ಮತ್ತು ಮೂರನೇ ಬಾರಿಗೆ 2004 ರಿಂದ 2005 ರವರೆಗೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಹೀಗಾಗಿ ದೀರ್ಘಕಾಲದವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು. ಅಡ್ವಾಣಿ ಆಗ ಬ್ರಿಟೀಷ್ ಇಂಡಿಯಾ ಆಡಳಿತದಲ್ಲಿದ್ದ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು.

313
ಡಾ.ಮುರಳಿ ಮನೋಹರ್ ಜೋಶಿ

ಡಾ.ಮುರಳಿ ಮನೋಹರ್ ಜೋಶಿ

ಅಟಲ್-ಅಡ್ವಾಣಿ ನಂತರ ಬಿಜೆಪಿ ಅಧ್ಯಕ್ಷರಾಗಿ ಡಾ.ಮುರಳಿ ಮನೋಹರ್ ಜೋಶಿ ಅಧಿಕಾರ ವಹಿಸಿಕೊಂಡರು. ಬಿಜೆಪಿಯ ಮೂರನೇ ಅಧ್ಯಕ್ಷರಾದ ಇವರು 1991 ರಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು ಮತ್ತು 1993 ರವರೆಗೆ ಅಧ್ಯಕ್ಷರಾಗಿದ್ದರು. ನಂತರ ಮತ್ತೆ ಲಾಲ್ ಕೃಷ್ಣ ಅಡ್ವಾಣಿ ಅಧ್ಯಕ್ಷರಾದರು. ಜೋಶಿ ಉತ್ತರಾಖಂಡ ಮೂಲದವರು.

413
ಕುಶಭಾವು ಠಾಕ್ರೆ 1998 ರಲ್ಲಿ ಬಿಜೆಪಿ ಅಧ್ಯಕ್ಷರಾದರು

ಕುಶಭಾವು ಠಾಕ್ರೆ 1998 ರಲ್ಲಿ ಬಿಜೆಪಿ ಅಧ್ಯಕ್ಷರಾದರು

ಲಾಲ್ ಕೃಷ್ಣ ಅಡ್ವಾಣಿಯವರ ಎರಡನೇ ಅವಧಿ 1998 ರಲ್ಲಿ ಕೊನೆಗೊಂಡ ನಂತರ, ಕುಶಭಾವು ಠಾಕ್ರೆಯವರನ್ನು 1998 ರಲ್ಲಿ ಬಿಜೆಪಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಪಡೆದ ಬಿಜೆಪಿಯ ನಾಲ್ಕನೇ ವ್ಯಕ್ತಿ ಇವರು.  ಕುಶಾಭೌ ಠಾಕ್ರೆ ಅವರು ಮಧ್ಯಪ್ರದೇಶದ ಧಾರ್‌ ನವರು.

513
ಬಂಗಾರು ಲಕ್ಷ್ಮಣ್

ಬಂಗಾರು ಲಕ್ಷ್ಮಣ್

ಕುಶಭಾವು ಠಾಕ್ರೆ ನಂತರ 2000 ರಲ್ಲಿ ಬಂಗಾರು ಲಕ್ಷ್ಮಣ್ ಬಿಜೆಪಿ ಅಧ್ಯಕ್ಷರಾದರು. ಆದರೆ ಒಂದು ವರ್ಷದ ನಂತರ ಅವರು ಹುದ್ದೆ ತೊರೆಯಬೇಕಾಯಿತು. ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದ ನಂತರ ಅವರು 2001 ರಲ್ಲಿ ರಾಜೀನಾಮೆ ನೀಡಿದರು.  ಬಂಗಾರು ಲಕ್ಷ್ಮಣ್   ಹೈದರಾಬಾದ್ ನವರು. 

613
ಕೆ.ಜನಾ ಕೃಷ್ಣಮೂರ್ತಿ

ಕೆ.ಜನಾ ಕೃಷ್ಣಮೂರ್ತಿ

ಬಂಗಾರು ಲಕ್ಷ್ಮಣ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕೆ.ಜನಾ ಕೃಷ್ಣಮೂರ್ತಿ ಅವರನ್ನು 2001 ರಲ್ಲಿ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಒಂದು ವರ್ಷ ಅಧ್ಯಕ್ಷರಾಗಿದ್ದರು. ಇವರು ತಮಿಳುನಾಡಿನ ಮದುರೈನವರು. 

713
ಎಂ.ವೆಂಕಯ್ಯ ನಾಯ್ಡು

ಎಂ.ವೆಂಕಯ್ಯ ನಾಯ್ಡು

ಬಿಜೆಪಿ ಅಧ್ಯಕ್ಷರಾಗಿ 2002 ರಲ್ಲಿ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಧಿಕಾರ ವಹಿಸಿಕೊಂಡರು. ಅವರು ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಇವರು ಆಂಧ್ರಪ್ರದೇಶದ ಚವಟಪಲೆಂನವರು.

813
ಮತ್ತೆ ಲಾಲ್ ಕೃಷ್ಣ ಅಡ್ವಾಣಿ

ಮತ್ತೆ ಲಾಲ್ ಕೃಷ್ಣ ಅಡ್ವಾಣಿ

ಎಂ.ವೆಂಕಯ್ಯ ನಾಯ್ಡು ನಂತರ ಬಿಜೆಪಿ ತನ್ನ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರನ್ನು ಮತ್ತೊಮ್ಮೆ ಅಧ್ಯಕ್ಷರನ್ನಾಗಿ ನೇಮಿಸಿತು. ಅವರು 2004-2005 ರವರೆಗೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

913
ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಯುಪಿಯ ಮಾಜಿ ಸಿಎಂ ರಾಜನಾಥ್ ಸಿಂಗ್ ಅವರಿಗೆ 2005 ರಲ್ಲಿ ಬಿಜೆಪಿ ಹೊಸ ಮುಖವಾಗಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನೀಡಿತು. ರಾಜನಾಥ್ ಸಿಂಗ್ 2009 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ರಾಜನಾಥ್ ಸಿಂಗ್ ಎರಡು ಬಾರಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರ ಎರಡನೇ ಅವಧಿ 2013 ರಿಂದ 2014 ರವರೆಗೆ ಇತ್ತು. ಇವರು ಉತ್ತರಪ್ರದೇಶದ ಚಾಕಿಯಾ ಎಂಬ ಊರಿನವರು.

1013
ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

ಕೇಂದ್ರ ಸರ್ಕಾರದಲ್ಲಿ ಸಚಿನ್ ಆಗಿರುವ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರ ಮೊದಲ ಅವಧಿ ಮುಗಿದ ನಂತರ 2010 ರಲ್ಲಿ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿ ಬಿಜೆಪಿ ಅಧ್ಯಕ್ಷರಾದರು. 2013 ರವರೆಗೆ ಅವರು ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದರು. ಇವರು ಮಹಾರಾಷ್ಟ್ರದ ನಾಗಪುರ ಊರಿನವರು.

1113
ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

2013 ರಲ್ಲಿ ರಾಜನಾಥ್ ಸಿಂಗ್ ಅವರಿಗೆ ಮತ್ತೊಮ್ಮೆ ಬಿಜೆಪಿ ನೇತೃತ್ವವನ್ನು ವಹಿಸಲಾಯಿತು. ಅವರ ಅವಧಿಯಲ್ಲಿ ಮೋದಿ-ಶಾ ಜೋಡಿ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿತು. 2014 ರ ಚುನಾವಣೆಗೆ ನರೇಂದ್ರ ಮೋದಿಯವರನ್ನು ಪ್ರಮುಖ ಮುಖವನ್ನಾಗಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆಯ್ಕೆ ಮಾಡಲಾಯಿತು.

1213
ಅಮಿತ್ ಶಾ

ಅಮಿತ್ ಶಾ

2014 ರಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾದರು. ಅವರ ಮೊದಲ ಅವಧಿ 2017 ರವರೆಗೆ ಇತ್ತು. ಇದರ ನಂತರ ಅವರು ಮತ್ತೆ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಎರಡನೇ ಅವಧಿ 2020 ರವರೆಗೆ ಇತ್ತು. ಇವರು ಗುಜರಾತಿ ಮೂಲದವರು ಹುಟ್ಟಿದ್ದು ಮುಂಬೈನಲ್ಲಿ.

1313
ಜೆಪಿ ನಡ್ಡಾ

ಜೆಪಿ ನಡ್ಡಾ

ಅಮಿತ್ ಶಾ ಅವರ ಎರಡು ಅವಧಿಗಳು ಪೂರ್ಣಗೊಂಡ ನಂತರ, ಜೆಪಿ ನಡ್ಡಾ ಅವರನ್ನು 2020 ರಲ್ಲಿ ಭಾರತೀಯ ಜನತಾ ಪಕ್ಷದ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2024 ರಲ್ಲಿ ಬಿಜೆಪಿ ತನ್ನ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ನಂತರ ದೇಶದ ಅತಿದೊಡ್ಡ ರಾಜಕೀಯ ಪಕ್ಷಕ್ಕೆ ಹೊಸ ಅಧ್ಯಕ್ಷರು ಸಿಗಲಿದ್ದಾರೆ. ಜಗತ್ ಪ್ರಕಾಶ್ ನಡ್ಡಾ ಅವರು ಮೂಲ ಹಿಮಾಚಲ ಪ್ರದೇಶವಾದ್ರೂ  ಅವರು ಜನಿಸಿದ್ದು, ಬಿಹಾರದ ಪಾಟ್ನಾದಲ್ಲಿ

 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಮಿತ್ ಶಾ

Latest Videos
Recommended Stories
Recommended image1
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ
Recommended image2
ಮಾತೃಭಾಷೆ ಮಾತನಾಡುತ್ತಿಲ್ಲ ಎಂದು 6 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ
Recommended image3
ಹೋಮ್ ವರ್ಕ್ ಹೇಗೆ ಮಾಡಲಿ? ಪೊಲೀಸರ ಪ್ರಶ್ನಿಸಿದ 3ನೇ ತರಗತಿ ಬಾಲಕಿಯ ಕ್ಯೂಟ್ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved