MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!

ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!

ಮನುಕುಲದ ಮೊದಲ ರಾಜಧಾನಿ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಬಾಳಿ ಬದುಕಿದ ನಗರವಾದ ಅಯೋಧ್ಯೆಗೆ ಮತ್ತೆ ಜೀವಕಳೆ ಬಂದಿದೆ. 500 ವರ್ಷಗಳ ಕಾಲ ತನ್ನ ಮಂದಿರದಿಂದಲೇ ಹೊರಗಿದ್ದ ಬಾಲರಾಮ ಇನ್ನು ಕೆಲವೇ ದಿನಗಳಲ್ಲಿ ವೈಭವೋಪೇತ ಮಂದಿರದಲ್ಲಿ ವಿರಾಜಮಾನನಾಗಲಿದ್ದಾನೆ

2 Min read
Author : Santosh Naik
Published : Jan 05 2024, 06:27 PM IST
Share this Photo Gallery
  • FB
  • TW
  • Linkdin
  • Whatsapp
118

ಅಯೋಧ್ಯೆ ಅಂತಿಂಥ ಭೂಮಿಯಲ್ಲ. ಮನುಕುಲದ ಮೊದಲ ರಾಜಧಾನಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಡಳಿತ ಕಂಡಂಥ ನಗರಿ.

218

ಕಳೆದ 500 ವರ್ಷಗಳಿಂದ ತಾನು ಕಟ್ಟಿ ಬೆಳೆಸಿದಿ ಅಯೋಧ್ಯೆ ನಗರದ ಶ್ರೀರಾಮ ಮಂದಿರದಿಂದಲೇ ಹೊರಗುಳಿದಿದ್ದ ಬಾಲರಾಮ ಈಗ ಮತ್ತೆ ಮಂದಿರ ಸೇರುತ್ತಿದ್ದಾನೆ.

318

ಜನವರಿ 22 ರಂದು ಅಯೋಧ್ಯೆಯ ವೈಭವೋಪೇತ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಅದರೊಂದಿಗೆ ದೇಶದ ಸಕಲ ಹಿಂದುಗಳ ಆರಾಧ್ಯಭೂಮಿಯಾಗಿ ಅಯೋಧ್ಯೆ ಬದಲಾಗಲಿದೆ.

418

ದಕ್ಷಿಣ ಭಾರತದಲ್ಲಿ ವೆಂಕಟೇಶ್ವರನಿಗೆ ತಿರುಪತಿ ದೇವಸ್ಥಾನವಿದ್ದ ಹಾಗೆ, ಉತ್ತರದಲ್ಲಿ ಶ್ರೀರಾಮನಿಗಾಗಿ ನಿರ್ಮಾಣವಾಗುತ್ತಿರುವ ಮಂದಿರ ದೇಶದ ಸಕಲ ಹಿಂದುಗಳ ಹೆಮ್ಮೆಯ ಕ್ಷೇತ್ರವಾಗಲಿದೆ.

518

ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಯೋಧ್ಯೆ ಭಾರತೀಯರಿಗೆ ದೇಶದ ಅತೀದೊಡ್ಡ ತೀರ್ಥಕ್ಷೇತ್ರ ಹಾಗೂ ಪ್ರವಾಸಿ ತಾಣವಾಗುವ ಎಲ್ಲಾ ಸೂಚನೆಗಳು ಈಗಾಗಲೇ ಸಿಕ್ಕಿವೆ.

618

ಓಯೋ ರೂಮ್ಸ್‌ಗಳ ಸಂಸ್ಥಾಪಕ ರಿತೇಶ್‌ ಅಗರ್ವಾಲ್‌ ಈ ಕುರಿತಾಗಿ ಮಾಡಿರುವ ಟ್ವೀಟ್‌, ಮುಂಬರುವ ದಿನಗಳಲ್ಲಿ ಅಯೋಧ್ಯೆ ಎಂಥಾ ಮಹತ್ವದ ಸ್ಥಾನವನ್ನು ಹಿಂದುಗಳ ಹೃದಯದಲ್ಲಿ ಪಡೆಯಲಿದೆ ಎನ್ನುವ ಸೂಚನೆ ಸಿಕ್ಕಿದೆ.

718

ಈ ಕುರಿತಾಗಿ ಹೊಸ ವರ್ಷದ ಸಂಭ್ರಮದಲ್ಲಿ ಟ್ವೀಟ್‌ ಮಾಡಿರುವ ರಿತೇಶ್‌ ಅಗರ್ವಾಲ್‌, ಈ ಬಾರಿ ಜನರು ಯಾವುದೇ ಹಿಲ್‌ ಸ್ಟೇಷನ್‌ಗಳಿಗಾಗಲಿ, ಬೀಚ್‌ಗಳಿಗಾಗಲಿ ಹೋಗುವ ಆಸಕ್ತಿ ತೋರಿಲ್ಲ ಎಂದು ಹೇಳಿದ್ದಾರೆ.

818

ಓಯೋ ರೂಮ್ಸ್‌ ವೆಬ್‌ಸೈಟ್‌ನಲ್ಲಿ ದೇಶದ ಶೆ. 80ಕ್ಕಿಂತ ಅಧಿಕ ಜನರು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡುವ ನಿಟ್ಟಿನಲ್ಲಿ ತಮ್ಮ ಸರ್ಚ್‌ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಂದೇ ಪ್ರದೇಶದ ಕುರಿತಾಗಿ ಜನರು ಇಷ್ಟು ಬಾರಿ ಸರ್ಚ್‌ ಮಾಡಿರುವುದು ಇದೇ ಮೊದಲು ಎಂದು ರಿತೇಶ್‌ ಅಗರ್ವಾಲ್‌ ಬರೆದಿದ್ದಾರೆ.

918

ರಿತೇಶ್‌ ಅಗರ್ವಾಲ್‌ ಈ ಟ್ವೀಟ್‌ ಮಾಡಿದ ಬೆನ್ನಲ್ಲಿಯೇ, ಅಯೋಧ್ಯೆ ಪ್ರವಾಸಿಗರಿಗೆ ಹಾಗೂ ತೀರ್ಥಯಾತ್ರಿಗಳಿಗೆ ದೊಡ್ಡ ಕ್ಷೇತ್ರವಾಗಲಿದೆ ಎನ್ನುವುದು ನಿಚ್ಚಳವಾಗಿದೆ.

1018

ಇನ್ನು ಶ್ರೀರಾಮ ಮಂದಿರ ನಿರ್ಮಾಣದ ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗುತ್ತಿದೆ.ಅಯೋಧ್ಯೆ ದೇವಸ್ಥಾನ ನಿರ್ಮಾಣ ಕಾಮಗಾರಿಯ ವಿವರಗಳನ್ನು ಟ್ರಸ್ಟ್‌ ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

1118

ಇತ್ತೀಚಿನ ಚಿತ್ರಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಮುಂದೆ ನಿರ್ಮಾಣವಾಗಲಿರುವ ಭಗವಾನ್‌ ಹನುಮಾನ್‌, ಗರುಡ, ಸಿಂಹ ಹಾಗೂ ಆನೆಯ ಕಲ್ಲಿನ ಪ್ರತಿಮೆಗಳನ್ನು ಪೋಸ್ಟ್‌ ಮಾಡಿತ್ತು.

1218

ಅಯೋಧ್ಯೆಯ ತಟದಲ್ಲಿರುವ ಸರಯೂ ನದಿಯ ದಂಡೆಯ ಮೇಲೆ ವಿಶ್ವದ ಅತಿದೊಡ್ಡ ಶ್ರೀರಾಮನ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.

1318

ಅದರೊಂದಿಗೆ ಅಯೋಧ್ಯೆ ಎನ್ನುವ ಪ್ರದೇಶವನ್ನು ಸಂಪೂರ್ಣವಾಗಿ ಬದಲಾಯಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೊಂದಿದ್ದು ಕಂಡಿದೆ.

1418

ಈಗಾಗಲೇ ಅಯೋಧ್ಯೆಯ ವಿಮಾನನಿಲ್ದಾಣದ ಉದ್ಘಾಟನೆ ನಡೆದಿದ್ದು, ದೇಶದ ಪ್ರಮುಖ ನಗರಗಳಿಂದ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ.

1518

ಅಯೋಧ್ಯಾಧಾಮ ಜಂಕ್ಷನ್‌ ಎಂದು ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡಲಾಗಿದೆ. ರಾಮಮಂದಿರಕ್ಕೆ ಹೋಗುವ ಮಾರ್ಗಗಳ ನವೀಕರಣ ಕಾರ್ಯಗಳು ಸಾಗಿವೆ.

1618

ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದರೂ, ಮಂದಿರದ ಹೊರ ಆವರಣದಲ್ಲಿ ಕೆಲವೊಂದು ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.

1718

ಇಡೀ ಅಯೋಧ್ಯೆಯಲ್ಲಿ ಹಸಿರಿನಿಂದ ಮುಚ್ಚಿರುವಂತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.

1818

ಅಯೋಧ್ಯೆಯ ಶ್ರೀರಾಮ ಮಂದಿರದ ಸಂಕೀರ್ಣದಲ್ಲಿ ಶ್ರೀರಾಮ ಮಂದಿರ ಮಾತ್ರವಲ್ಲದೆ, ಇನ್ನೂ ಕೆಲವು ದೇವಸ್ಥಾನಗಳು ಕೂಡ ಇರಲಿದೆ. ಅದರ ಕಾರ್ಯಗಳು ಕೂಡ ಈಗಾಗಲೇ ಆರಂಭವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಯೋಧ್ಯೆ
ರಾಮ ಮಂದಿರ

Latest Videos
Recommended Stories
Recommended image1
Viral Video: ರಾಮೇಶ್ವರಂ ಕೆಫೆ ಮುಂದೆ ಘರ್ಜಿಸಿದ ಜೆಸಿಬಿ; ಪಾಲಿಕೆಯಿಂದ ಅಕ್ರಮ ಒತ್ತುವರಿ ತೆರವು!
Recommended image2
92 ಲಕ್ಷ ವೇತನ ಝೀರೋ ಭದ್ರತೆ, ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!
Recommended image3
ಪ್ರಯೋಗಾಲಯದಲ್ಲಿ ತಯಾರಾಗ್ತಿವೆ ಮಿರಿಮಿರಿ ಮಿಂಚುವ ಚಿನ್ನ! ಬಂಗಾರ ಪ್ರಿಯರಿಗೆ ಸರ್​ಪ್ರೈಸ್​: ಡಿಟೇಲ್ಸ್​ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved