MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಅಕ್ಟೊಬರ್‌ನಿಂದ ವೇತನ ಹೆಚ್ಚಳ!

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಅಕ್ಟೊಬರ್‌ನಿಂದ ವೇತನ ಹೆಚ್ಚಳ!

ಸೆಪ್ಟೆಂಬರ್ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ.  ಸರ್ಕಾರಿ ನೌಕರರ (Government Employees) ತುಟ್ಟಿಭತ್ಯೆ (Dearness Allowance) ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ.  

2 Min read
Author : Chethan Kumar
Published : Sep 26 2024, 03:49 PM IST
Share this Photo Gallery
  • FB
  • TW
  • Linkdin
  • Whatsapp
18

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಲಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಮೋದಿ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ. 

28

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಅಕ್ಟೋಬರ್ ಆರಂಭದಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸುವ ಸಾಧ್ಯತೆ ಇದ. ಈ ಕುರಿತು ಹಲವ ವರದಿಗಳು ಪ್ರಕಟಗೊಂಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ದುಬಾರಿ ದುನಿಯಾದಲ್ಲಿನ ವೇತನ ಹೆಚ್ಚಳ ಸುದ್ದಿ ಕೇಂದ್ರ ಸರ್ಕಾರಿ ನೌಕರರ ನೆಮ್ಮದಿಗೆ ಕಾರಣವಾಗಿದೆ.

38

ಈ ಬಾರಿ ಕೇಂದ್ರ ಸರ್ಕಾರ ಶೇಕಡಾ 3 ರಿಂದ 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದು ಕೇಂದ್ರ ಸರ್ಕಾರಿ ನೌಕರರ ಒಟ್ಟು ವೇತನದಲ್ಲೂ ಹೆಚ್ಚಳ ಮಾಡಲಿದೆ. 2024ರ ಮಾರ್ಚ್ ತಿಂಗಳಲ್ಲಿ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿತ್ತು. 7ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮಾಡಲಾಗಿತ್ತು.

48

ಮಾರ್ಚ್ ತಿಂಗಳ ಬಳಿಕ ಇದೀಗ ಮತ್ತೆ ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತಿದೆ. ಈ ಮೂಲಕ ಒಂದು ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸುತ್ತದೆ. ಪಿಂಚಣಿದಾರರಿಗೂ ಇದರ ಲಾಭ ಸಿಗಲಿದೆ. 

58

ಜನವರಿ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು 46% ರಿಂದ 50% ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ 50% ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತಿದೆ. ಈ ಬಾರಿ ತುಟ್ಟಿಭತ್ಯೆ ಹೆಚ್ಚಳ 53-54% ತಲುಪುವ ನಿರೀಕ್ಷೆಯಿದೆ. ಈ ಸುದ್ದಿ ಹೋರಬೀಳುತ್ತಿದ್ದಂತೆ ಕೇಂದ್ರ ಸರ್ಕಾರಿ ನೌಕರರ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. 

68

ಕಳೆದ ಜುಲೈ 1 ರಿಂದ ಈ ತುಟ್ಟಿಭತ್ಯೆ ಹೆಚ್ಚಳ ಜಾರಿಗೆ ಬಂದಿತು. ಅಂದರೆ, ಹೆಚ್ಚಿದ ಸಂಬಳದೊಂದಿಗೆ ಬಾಕಿ ಮೊತ್ತವನ್ನು ನೌಕರರಿಗೆ ನೀಡಲಾಗುವುದು. 4% ತುಟ್ಟಿಭತ್ಯೆ ಹೆಚ್ಚಳ ಎಂದರೆ ಯಾರಿಗೆ ಎಷ್ಟು ಸಂಬಳ ಹೆಚ್ಚಳ? ಸ್ಪಷ್ಟ ಲೆಕ್ಕಾಚಾರವನ್ನು ನೋಡೋಣ. 4% ಹೆಚ್ಚಿಸಿದರೆ, 7 ನೇ ವೇತನ ಆಯೋಗದ ಅಡಿಯಲ್ಲಿ ಎಷ್ಟು ಪ್ರಯೋಜನ ಸಿಗುತ್ತದೆ? ಯಾವುದೇ ಸರ್ಕಾರಿ ನೌಕರರ ಮೂಲ ವೇತನ ರೂ.18,000 ಆಗಿದ್ದರೆ, 4% ತುಟ್ಟಿಭತ್ಯೆ ಹೆಚ್ಚಳ ಎಂದರೆ, ತಿಂಗಳಿಗೆ ರೂ.720 ಅಂದರೆ ವರ್ಷಕ್ಕೆ ರೂ.8,640 ಸಂಬಳ ಹೆಚ್ಚಳ ದೊರೆಯಲಿದೆ.

78

ಮೂಲ ವೇತನ ರೂ.20,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.400 ಮತ್ತು ವರ್ಷಕ್ಕೆ ಹೆಚ್ಚುವರಿಯಾಗಿ ರೂ.9,600 ಸಿಗುತ್ತದೆ ಎಂದು ನಿರೀಕ್ಷಿಸಬಹುದು. ಇದು ಶೇಕಡಾ 3 ರಿಂದ 4 ರಷ್ಟು ಹೆಚ್ಚಳದನ್ವಯದ ಲೆಕ್ಕಾಚಾರವಾಗಿದೆ.ಯಾವುದೇ ಸರ್ಕಾರಿ ನೌಕರರ ಮೂಲ ವೇತನ ರೂ.25,000 ಆಗಿದ್ದರೆ, ತಿಂಗಳಿಗೆ ರೂ.1000 ಮತ್ತು ವರ್ಷಕ್ಕೆ ರೂ.12,000 ಸಂಬಳ ಹೆಚ್ಚಳವಾಗಲಿದೆ.

88

ಮೂಲ ವೇತನ ರೂ.30,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.1200 ಮತ್ತು ವರ್ಷಕ್ಕೆ ರೂ.14,400 ಮತ್ತು ಮೂಲ ವೇತನ ರೂ.50,000 ಪಡೆಯುವ ನೌಕರರಿಗೆ ತಿಂಗಳಿಗೆ ರೂ.2,000 ಮತ್ತು ವರ್ಷಕ್ಕೆ ರೂ.24,000 ಹೆಚ್ಚುವರಿಯಾಗಿ ಸಿಗಲಿದೆ.ತುಟ್ಟಿಭತ್ಯೆ ಮಾತ್ರವಲ್ಲದೆ, ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ಹೊಸ ವೇತನ ಆಯೋಗ ರಚನೆ ಮತ್ತು ಹಿರಿಯ ನಾಗರಿಕರಿಗೆ ರೈಲು ದರ ರಿಯಾಯಿತಿ ಕುರಿತು ಮೋದಿ ಸರ್ಕಾರ ಪರಿಶೀಲಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವೇತನ ಹೆಚ್ಚಳ
ಕೇಂದ್ರ ಸರ್ಕಾರ

Latest Videos
Recommended Stories
Recommended image1
48 ವರ್ಷಗಳ ಬಳಿಕ ಪುರಿ ಜಗನ್ನಾಥ ದೇವಸ್ಥಾನದ ಚಿನ್ನ, ವಜ್ರ ವೈಡೂರ್ಯ ಎಣಿಕೆಗೆ ದಿನಾಂಕ ಫಿಕ್ಸ್‌
Recommended image2
Free Bus Scheme: ಮಹಿಳೆಯರಿಗೆ ಮಾತ್ರವಲ್ಲ, ಇನ್ಮುಂದೆ ಈ ಪುರುಷರಿಗೂ ಬಸ್ ಪ್ರಯಾಣ ಫ್ರೀ! ಸರ್ಕಾರದ ಆದೇಶ ಜಾರಿ
Recommended image3
ಶಾಲೆಯಲ್ಲಿ ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved