ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಯುರ್ವೇದ ಕ್ರಮಗಳನ್ನು ಅಳವಡಿಸಿಕೊಳ್ಳಿ!
ದೇಶಾದ್ಯಂತ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಕೊರೊನಾದ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ಭಯಪಡಲಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕೊರೊನಾ ವೈರಸ್ ನಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸಬಹುದು. ಕೆಲವು ಆಯುರ್ವೇದ ಕ್ರಮಗಳ ಸಹಾಯದಿಂದ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಅವರು ಯಾವುದೇ ಒಳಬರುವ ಸೋಂಕು ಅಥವಾ ರೋಗದ ವಿರುದ್ಧ ಮುಂಚಿತವಾಗಿ ಹೋರಾಡಲು ಸಿದ್ಧರಾಗಿರುತ್ತಾರೆ. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಕ್ರಮಗಳ ಬಗ್ಗೆ ತಿಳಿಯಿರಿ..

<p><strong>1. ಅರಿಶಿನ : </strong>ಅರಿಶಿನವನ್ನು ಆಯುರ್ವೇದದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಮಕ್ಕಳ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.</p>
1. ಅರಿಶಿನ : ಅರಿಶಿನವನ್ನು ಆಯುರ್ವೇದದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಮಕ್ಕಳ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
<p>ಅರಿಶಿನವನ್ನು ಬಳಕೆ ಮಾಡುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧದ ಹೋರಾಟವನ್ನು ಬಲಪಡಿಸಬಹುದು. ಪ್ರತಿದಿನ ಅಡುಗೆಯಲ್ಲಿ ಅರಿಶಿನ ಬಳಸಿ ಅಥವಾ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಬೆರೆಸಿ ಸೇವಿಸಿ. </p>
ಅರಿಶಿನವನ್ನು ಬಳಕೆ ಮಾಡುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧದ ಹೋರಾಟವನ್ನು ಬಲಪಡಿಸಬಹುದು. ಪ್ರತಿದಿನ ಅಡುಗೆಯಲ್ಲಿ ಅರಿಶಿನ ಬಳಸಿ ಅಥವಾ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಬೆರೆಸಿ ಸೇವಿಸಿ.
<p style="text-align: justify;"><strong>2. ನೆಲ್ಲಿಕಾಯಿ : </strong>ನೆಲ್ಲಿಕಾಯಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಶೀತದಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. </p>
2. ನೆಲ್ಲಿಕಾಯಿ : ನೆಲ್ಲಿಕಾಯಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಶೀತದಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
<p>ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಅಥವಾ ಇತರ ಮೂಲಗಳ ಮೂಲಕ ಬಳಕೆ ಮಾಡುವುದರಿಂದ ಆರೋಗ್ಯದ ಜೊತೆಗೆ ಚರ್ಮ, ಕೂದಲು ಮತ್ತು ಮಧುಮೇಹ ಹೊಂದಿರುವ ರೋಗಿಗಳಿಗೆ ಆಮ್ಲಾ ತುಂಬಾ ಪ್ರಯೋಜನಕಾರಿಯಾಗಿದೆ.</p>
ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಅಥವಾ ಇತರ ಮೂಲಗಳ ಮೂಲಕ ಬಳಕೆ ಮಾಡುವುದರಿಂದ ಆರೋಗ್ಯದ ಜೊತೆಗೆ ಚರ್ಮ, ಕೂದಲು ಮತ್ತು ಮಧುಮೇಹ ಹೊಂದಿರುವ ರೋಗಿಗಳಿಗೆ ಆಮ್ಲಾ ತುಂಬಾ ಪ್ರಯೋಜನಕಾರಿಯಾಗಿದೆ.
<p><strong>3. ತುಳಸಿ: </strong>ತುಳಸಿಯಲ್ಲಿ ಔಷಧೀಯ ಗುಣಗಳ ಭಂಡಾರವಿದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಗಂಟಲು ಮತ್ತು ಉಸಿರಾಟದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.</p>
3. ತುಳಸಿ: ತುಳಸಿಯಲ್ಲಿ ಔಷಧೀಯ ಗುಣಗಳ ಭಂಡಾರವಿದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಗಂಟಲು ಮತ್ತು ಉಸಿರಾಟದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
<p style="text-align: justify;">ಪ್ರತಿದಿನ ಮಕ್ಕಳಿಗೆ ಒಂದು ಚಮಚ ತುಳಸಿ ರಸ ಅಥವಾ ತುಳಸಿ ಎಲೆಗಳನ್ನು ಬಳಸಿ ಮಾಡಿದ ಚಹಾ ಅಥವಾ ಕಷಾಯ ನೀಡುವುದರಿಂದ ಮಕ್ಕಳ ಅರೋಗ್ಯ ಉತ್ತಮವಾಗಿರುತ್ತದೆ. </p>
ಪ್ರತಿದಿನ ಮಕ್ಕಳಿಗೆ ಒಂದು ಚಮಚ ತುಳಸಿ ರಸ ಅಥವಾ ತುಳಸಿ ಎಲೆಗಳನ್ನು ಬಳಸಿ ಮಾಡಿದ ಚಹಾ ಅಥವಾ ಕಷಾಯ ನೀಡುವುದರಿಂದ ಮಕ್ಕಳ ಅರೋಗ್ಯ ಉತ್ತಮವಾಗಿರುತ್ತದೆ.
<p style="text-align: justify;"><strong>4. ಜೇನು: </strong>ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಕೆಮ್ಮು, ಯಾವುದೇ ಸೋಂಕಿನಿಂದ ಉಂಟಾಗುವ ಗಂಟಲು ನೋವಿನಲ್ಲಿ ಪರಿಹಾರವನ್ನು ಒದಗಿಸುತ್ತದೆ.</p>
4. ಜೇನು: ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಕೆಮ್ಮು, ಯಾವುದೇ ಸೋಂಕಿನಿಂದ ಉಂಟಾಗುವ ಗಂಟಲು ನೋವಿನಲ್ಲಿ ಪರಿಹಾರವನ್ನು ಒದಗಿಸುತ್ತದೆ.
<p>ಮಕ್ಕಳಿಗೆ ಪ್ರತಿದಿನ ಒಂದು ಚಮಚ ಜೇನು ತುಪ್ಪವನ್ನು ನೀಡಿದರೆ ಉತ್ತಮ. ಇದರಿಂದ ಮಕ್ಕಳ ಅರೋಗ್ಯ ಉತ್ತಮವಾಗಿರುತ್ತದೆ. ಶೀತ ಕೆಮ್ಮಿನಂತಹ ಸಮಸ್ಯೆಗಳಿಂದಲೂ ರಕ್ಷಣೆ ಪಡೆಯಲು ಸಹಾಯವಾಗುತ್ತದೆ. </p>
ಮಕ್ಕಳಿಗೆ ಪ್ರತಿದಿನ ಒಂದು ಚಮಚ ಜೇನು ತುಪ್ಪವನ್ನು ನೀಡಿದರೆ ಉತ್ತಮ. ಇದರಿಂದ ಮಕ್ಕಳ ಅರೋಗ್ಯ ಉತ್ತಮವಾಗಿರುತ್ತದೆ. ಶೀತ ಕೆಮ್ಮಿನಂತಹ ಸಮಸ್ಯೆಗಳಿಂದಲೂ ರಕ್ಷಣೆ ಪಡೆಯಲು ಸಹಾಯವಾಗುತ್ತದೆ.
<p style="text-align: justify;"><strong>ಶುಂಠಿ : </strong>ಶುಂಠಿ ಉತ್ತಮ ಆಯುರ್ವೇದದ ಔಷಧಿಯಾಗಿದೆ. ಮಕ್ಕಳಿಗೆ ಗಂಟಲು ಕೆರೆತ, ಶೀತ, ಕಫ ಉಂಟಾದರೆ ಶುಂಠಿ ರಸವನ್ನು ನೀಡಬಹುದು. ಇದರಿಂದ ಮಕ್ಕಳ ಅರೋಗ್ಯ ಉತ್ತಮವಾಗುತ್ತದೆ. </p>
ಶುಂಠಿ : ಶುಂಠಿ ಉತ್ತಮ ಆಯುರ್ವೇದದ ಔಷಧಿಯಾಗಿದೆ. ಮಕ್ಕಳಿಗೆ ಗಂಟಲು ಕೆರೆತ, ಶೀತ, ಕಫ ಉಂಟಾದರೆ ಶುಂಠಿ ರಸವನ್ನು ನೀಡಬಹುದು. ಇದರಿಂದ ಮಕ್ಕಳ ಅರೋಗ್ಯ ಉತ್ತಮವಾಗುತ್ತದೆ.
<p>ಇನ್ನು ಪ್ರತಿದಿನ ಶುಂಠಿ ಕಷಾಯ ಅಥವಾ ಶುಂಠಿಯಿಂದ ಮಾಡಿದ ಚಹಾ , ಆಹಾರ ಪದಾರ್ಥಗಳಲ್ಲಿ ಶುಂಠಿ ಹಾಕಿ ಸೇವಿಸುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. </p>
ಇನ್ನು ಪ್ರತಿದಿನ ಶುಂಠಿ ಕಷಾಯ ಅಥವಾ ಶುಂಠಿಯಿಂದ ಮಾಡಿದ ಚಹಾ , ಆಹಾರ ಪದಾರ್ಥಗಳಲ್ಲಿ ಶುಂಠಿ ಹಾಕಿ ಸೇವಿಸುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.