MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಮನೋಕಾಮನ ಈಡೇರಲು ಶಿವಲಿಂಗಕ್ಕೆ ಈ ಒಂದು ವಸ್ತುವನ್ನು ಅರ್ಪಿಸಿ

ಮನೋಕಾಮನ ಈಡೇರಲು ಶಿವಲಿಂಗಕ್ಕೆ ಈ ಒಂದು ವಸ್ತುವನ್ನು ಅರ್ಪಿಸಿ

ಹಿಂದೂ ಧರ್ಮಗ್ರಂಥಗಳಲ್ಲಿ, ಶಿವನನ್ನು ಮೆಚ್ಚಿಸಲು ಅನೇಕ ಪರಿಹಾರ ಮತ್ತು ನಿಯಮಗಳನ್ನು ಹೇಳಲಾಗಿದೆ. ಈ ಪರಿಹಾರಗಳಲ್ಲಿ ನಾವು ಇಂದು ಹೇಳುತ್ತಿರುವ ಒಂದು ನಿಯಮವನ್ನು ಪಾಲಿಸಿದ್ರೆ ಶಿವ ಶೀಘ್ರದಲ್ಲೇ ಸಂತೋಷವಾಗಿರುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ. ಅದೇನೆಂದು ತಿಳಿಯಲು ಮುಂದೆ ಓದಿ.  

2 Min read
Suvarna News
Published : Mar 02 2023, 05:04 PM IST
Share this Photo Gallery
  • FB
  • TW
  • Linkdin
  • Whatsapp
17

ಶಿವನನ್ನು(Lord Shiva) ಜಗತ್ತಿನ ನಿರ್ಮಾತೃ ಮತ್ತು ಕೆಟ್ಟದರ ನಿವಾರಕ ಎಂದು ಪರಿಗಣಿಸಲಾಗುತ್ತೆ. ಸೃಷ್ಟಿಯನ್ನು ನಡೆಸುವುದರ ಜೊತೆಗೆ, ಶಿವನು ವಿನಾಶಕನ ರೂಪವನ್ನು ಸಹ ತಾಳುತ್ತಾನೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭೋಲೆನಾಥನನ್ನು ಸರಿಯಾಗಿ ಪೂಜಿಸೋದ್ರಿಂದ ವ್ಯಕ್ತಿ ಶೀಘ್ರದಲ್ಲೇ ತನ್ನ ಪ್ರತಿಯೊಂದು ಆಸೆಯನ್ನು ಪೂರೈಸಲು ಸಾಧ್ಯವಾಗುತ್ತೆ. ಇದರೊಂದಿಗೆ, ನಿಮ್ಮ ಎಲ್ಲಾ ದುಃಖ, ನೋವು ಮತ್ತು ಪಾಪವನ್ನು ಶಿವ ಹೋಗಲಾಡಿಸುತ್ತಾನೆ.

27

ಜಲಾಭಿಷೇಕ(Jalaabhisheka), ರುದ್ರಾಭಿಷೇಕದ ಜೊತೆಗೆ ಶಿವನಿಗೆ ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತೆ. ಇವುಗಳಲ್ಲಿ ಒಂದು ಅಕ್ಕಿ. ಶಿವನಿಗೆ ಅಕ್ಷತೆ ಅರ್ಪಿಸಿದರೆ, ಅವನು ಕೂಡಲೇ ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ. ಶಿವಲಿಂಗಕ್ಕೆ ಅಕ್ಷತೆ ಅರ್ಪಿಸುವ ಮೂಲಕ, ಶಿವನನ್ನು ಹೇಗೆ ಸಂತೋಷಗೊಳ್ಳುತ್ತಾನೆ ಎಂದು ತಿಳಿದುಕೊಳ್ಳೋಣ.

 

37

ಶಿವಲಿಂಗದ ಮೇಲೆ ಅಕ್ಷತೆ ಅರ್ಪಿಸೋದು ಹೇಗೆ?
ಮೊದಲಿಗೆ, ಶುದ್ಧವಾದ 108 ಅಕ್ಕಿ(Rice) ಧಾನ್ಯಗಳನ್ನು ಎಣಿಸಿ. ಅದು ಮುರಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದರ ನಂತರ, ಶಿವ ದೇವಾಲಯಕ್ಕೆ ಹೋಗಿ ಮತ್ತು ಮೊದಲು ನೀರನ್ನು ಅರ್ಪಿಸಿ. ಇದರ ನಂತರ, ಹೂವುಗಳು, ಬೆಲ್ವಪತ್ರ ಇತ್ಯಾದಿಗಳನ್ನು ಅರ್ಪಿಸುವುದರ ಜೊತೆಗೆ ಶ್ರೀಗಂಧವನ್ನು ಹಚ್ಚಿ. 

47

ಇದರ ನಂತರ, ಅಂಗೈಯಲ್ಲಿ 108 ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಅದರ ಮೇಲೆ ಶ್ರೀಗಂಧದ(Sandalwood) ಹಚ್ಚಿ ಮತ್ತು ಅವುಗಳನ್ನು ಒಟ್ಟಿಗೆ ಅರ್ಪಿಸಿ. ಇದರೊಂದಿಗೆ, ನಿಮ್ಮ ಇಚ್ಛೆಗಳನ್ನು ಹೇಳಿಕೊಳ್ಳಿ. ಇದನ್ನು ಮಾಡೋದರಿಂದ, ನಿಮ್ಮ ಬಯಕೆಗಳು ಶೀಘ್ರದಲ್ಲೇ ಈಡೇರುತ್ತೆ ಎಂದು ಹೇಳಲಾಗುತ್ತೆ.

57

ಶುಭವೆಂದು ಪರಿಗಣಿಸಲಾಗಿದೆ
ಧಾರ್ಮಿಕ ಗ್ರಂಥಗಳಲ್ಲಿ ಅಕ್ಷತೆಯನ್ನು ಅತ್ಯಂತ ಪವಿತ್ರ ವಿಷಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇವರಿಗೆ ಸಂಪೂರ್ಣ ಕಚ್ಚಾ ಅಕ್ಕಿಯನ್ನು ಅರ್ಪಿಸೋದರಿಂದ ಶುಭ ಫಲಿತಾಂಶಗಳನ್ನು ಪಡೆಯುವುದರ ಜೊತೆಗೆ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೇವೆ.  ಪೂಜೆಯಲ್ಲಿ ಅಕ್ಷತೆಯನ್ನು ಅರ್ಪಿಸುವುದು ಎಂದರೆ, ನಮ್ಮ ಪೂಜೆಯೂ (Pooja) ಅಕ್ಷತೆಯಂತೆ ಪೂರ್ಣವಾಗಿರಬೇಕು, ಅದರಲ್ಲಿ ಯಾವುದೇ ಅಡೆತಡೆ ಇರಬಾರದು ಎಂದು ಅರ್ಥ.

 

67

ಸಂತೋಷ (Happiness) ಮತ್ತು ಸಮೃದ್ಧಿ
ಅಕ್ಕಿಯನ್ನು ಆಹಾರದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದರೊಂದಿಗೆ, ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಅಕ್ಕಿಯನ್ನು ಅರ್ಪಿಸುವಾಗ, ನಮ್ಮ  ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ದೇವರನ್ನು ಪ್ರಾರ್ಥಿಸಲಾಗುತ್ತೆ.

 

77

ತುಂಡಾದ ಅಕ್ಕಿಯನ್ನು ಅರ್ಪಿಸಬೇಡಿ
ಅಕ್ಷತೆಯನ್ನು ಪರಿಪೂರ್ಣತೆಯ ಸಂಕೇತವೆಂದು ಪರಿಗಣಿಸಲಾಗುತ್ತೆ . ಆದ್ದರಿಂದ, ಮುರಿದ ಅಕ್ಕಿಯನ್ನು ಎಂದಿಗೂ ದೇವರಿಗೆ ಅರ್ಪಿಸಬಾರದು. ಪರಿಪೂರ್ಣ ಅಕ್ಕಿಯನ್ನು ಶಿವನಿಗೆ ಅರ್ಪಿಸೋದ್ರಿಂದ, ನೀವು ಹಣದ(Money) ಲಾಭದೊಂದಿಗೆ ಗೌರವವನ್ನು ಪಡೆಯುತ್ತೀರಿ.

About the Author

SN
Suvarna News
ಶಿವ
ಅಕ್ಕಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved