MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ರಾಹುಕಾಲದಲ್ಲಿ ಯಾವುದೇ ಶುಭಕಾರ್ಯ ಯಾಕೆ ಮಾಡೋದಿಲ್ಲ ಗೊತ್ತಾ?

ರಾಹುಕಾಲದಲ್ಲಿ ಯಾವುದೇ ಶುಭಕಾರ್ಯ ಯಾಕೆ ಮಾಡೋದಿಲ್ಲ ಗೊತ್ತಾ?

ನೀವು ಸಾಮಾನ್ಯವಾಗಿ ಹಿರಿಯರು ರಾಹು ಕಾಲದಲ್ಲಿ ಒಳ್ಳೆ ಕೆಲಸ ಮಾಡಬಾರದು ಎಂದು ಹೇಳಿರೋದನ್ನು ಕೇಳಿರಬಹುದು. ಆದರೆ ಎಂದಾದರು ಇದನ್ನು ಯಾಕೆ ಮಾಡಬಾರದು? ರಾಹುಕಾಲವನ್ನು ಕೆಟ್ಟ ಕಾಲ ಎಂದು ಹೇಳೋದು ಯಾಕೆ ಎಂದು ನೀವು ಎಂದಾದರು ಯೋಚನೆ ಮಾಡಿದ್ದೀರಾ? ಇಲ್ಲಾ ಅಂದ್ರೆ ಇದನ್ನ ಓದಿ…

2 Min read
Author : Suvarna News
Published : Nov 30 2022, 05:27 PM IST
Share this Photo Gallery
  • FB
  • TW
  • Linkdin
  • Whatsapp
17

ಯೋಗ, ಮುಹೂರ್ತ ಮತ್ತು ಗ್ರಹಗಳ ನಕ್ಷತ್ರಪುಂಜಗಳ ಜೊತೆಗೆ, ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ಸಮಯವನ್ನು ಸಹ ಉಲ್ಲೇಖಿಸಲಾಗಿದೆ. ಈ ಅವಧಿಗಳಲ್ಲಿ ಒಂದು ರಾಹುಕಾಲ(Raahu kaal), ಇದನ್ನು ಅತ್ಯಂತ ಕ್ರೂರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯ ಮಾಡಲಾಗೋದಿಲ್ಲ. ಈ ಅವಧಿಯಲ್ಲಿ ಮಾಡಿದ ಕೆಲಸದಲ್ಲಿ ಯಶಸ್ಸು ಸಾಧಿಸಲಾಗೋದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ರಾಹುಕಾಲದ ಬಗ್ಗೆ ವಿಶೇಷ ಮಾಹಿತಿಗಳನ್ನು ತಿಳಿಯೋಣ, ರಾಹುಕಾಲ ಎಂದರೇನು ಮತ್ತು ಅದರಲ್ಲಿ ಯಾವುದೇ ಶುಭ ಕೆಲಸವನ್ನು ಯಾಕೆ ಮಾಡಲಾಗೋದಿಲ್ಲ ಎಂದು ತಿಳಿಯೋಣ.

27

ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ರಾಹುದೋಷ ಕಂಡುಬರುತ್ತದೆಯೋ ಆ ವ್ಯಕ್ತಿಯು ಮಾನಸಿಕ ಒತ್ತಡದಿಂದ(Mental stress) ಸುತ್ತುವರಿಯಲ್ಪಟ್ಟಿರುತ್ತಾನೆ, ಮತ್ತು ಅವನು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತೆ.

37

ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಹು ಗ್ರಹ ಶಾಂತಿಗಾಗಿ ಅನೇಕ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಕ್ರಮಗಳನ್ನು ಅನುಸರಿಸೋದ್ರಿಂದ, ವ್ಯಕ್ತಿ ರಾಹು ದೋಷದಿಂದ  ಮುಕ್ತಿ ಪಡೆಯುತ್ತಾನೆ ಎಂದು ಹೇಳಲಾಗುತ್ತೆ. ಮಾತೆ ದುರ್ಗಾ(Durga) ಮತ್ತು ಭೈರವ ದೇವನನ್ನು ಪೂಜಿಸೋದರಿಂದ ರಾಹು ಗ್ರಹಕ್ಕೆ ಶಾಂತಿ ತರಬಹುದು. ಇದರೊಂದಿಗೆ, ಈ ಅವಧಿಯನ್ನು ತೊಡೆದುಹಾಕಲು ಯಾವ ರೀತಿಯ ದಾನ ಮಾಡೋದು ಒಳ್ಳೇದು ಎಂದು ಎಲ್ಲಿ ಹೇಳಲಾಗಿದೆ. .

47

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಬರುವ ಅಶುಭ(Unlucky) ಮತ್ತು ಅದರ ಮೇಲೆ ರಾಹು ಗ್ರಹದ ನೆರಳನ್ನು ಹೊಂದಿರುವ ಸಮಯವನ್ನು ರಾಹು ಕಾಲ ಎಂದು ಕರೆಯಲಾಗುತ್ತೆ. ಪ್ರತಿ ದಿನ, ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ 8 ನೇ ಭಾಗವು ಅಂದರೆ ಒಂದೂವರೆ ಗಂಟೆಯನ್ನು ರಾಹುಕಾಲ ಎಂದು ಕರೆಯಲಾಗುತ್ತೆ. ಈ ಸಮಯದಲ್ಲಿ ಯಾವುದೇ ಶುಭ ಕೆಲಸವನ್ನು ಮಾಡೋದನ್ನು ನಿಷೇಧಿಸಲಾಗಿದೆ.

57

ರಾಹುಕಾಲದಲ್ಲಿ ಪ್ರಾರಂಭವಾದ ಕೆಲಸವು ಪೂರ್ಣಗೊಳ್ಳೋದಿಲ್ಲ ಎಂದು ಹೇಳಲಾಗುತ್ತೆ. ಈ ಕಾರಣದಿಂದಾಗಿ, ಜನರು ಮಾಡುವ ಹೊಸ ಕೆಲಸಕ್ಕಾಗಿ ಮುಹೂರ್ತ ನೋಡುವಾಗ ಅಥವಾ ಮದುವೆ-ನಿಶ್ಚಿತಾರ್ಥ(Engagement), ಮನೆ ಪ್ರವೇಶ, ವ್ಯವಹಾರ ಇತ್ಯಾದಿಗಳನ್ನು ಮಾಡುವಾಗ ಈ ಸಮಯವನ್ನು ತಪ್ಪಿಸಲಾಗುತ್ತೆ.
 

67

ಕೆಟ್ಟದಾಗುತ್ತದೆ ಎನ್ನುವ ಕಾರಣದಿಂದಾಗಿಯೇ, ರಾಹುಕಾಲದಲ್ಲಿ ಯಾವುದೇ ಶುಭ ಅಥವಾ ಹೊಸ ಕೆಲಸವನ್ನು ಮಾಡದಿರೋದನ್ನು ಕಾಣಬಹುದು. ದಿನದ ಯಾವ ಸಮಯದಲ್ಲಿ ರಾಹುಕಾಲ ಅಥವಾ ಯಾವ ಸಮಯದಲ್ಲಿ ಅಲ್ಲ ಎಂಬುದನ್ನು ಪಂಚಾಂಗ ಮತ್ತು ಜ್ಯೋತಿಷ್ಯದ (Astrology) ಪ್ರಕಾರ ಲೆಕ್ಕಹಾಕಲಾಗುತ್ತೆ.

77

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹುಕಾಲದಲ್ಲಿ, ಮುಖ್ಯವಾಗಿ ಈ ಕೆಳಗಿನ ಕೆಲಸಗಳನ್ನು ಮಾಡಬಾರದು-
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಮನೆಯೊಳಗೆ ಪ್ರವೇಶಿಸಬೇಡಿ. ಯಾವುದೇ ಹೊಸ ವಸ್ತು ಖರೀದಿಸಬೇಡಿ. ವಾಣಿಜ್ಯ ಸಂಸ್ಥೆ, ಅಂಗಡಿ ಇತ್ಯಾದಿಗಳನ್ನು ಉದ್ಘಾಟಿಸಬೇಡಿ. ಯಾವುದೇ ರೀತಿಯ ಆಸ್ತಿಯನ್ನು ಖರೀದಿಸಬೇಡಿ. ದ್ವಿಚಕ್ರ ವಾಹನ(Two wheeler), ನಾಲ್ಕು ಚಕ್ರ, ತ್ರಿಚಕ್ರ ವಾಹನಗಳು - ಹೀಗೆ ಯಾವುದೇ ರೀತಿಯ ವಾಹನಗಳನ್ನು ಖರೀದಿಸಬೇಡಿ. ಯಾವುದೇ ರೀತಿಯ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಡಿ.
 

About the Author

SN
Suvarna News
ಜ್ಯೋತಿಷ್ಯ
ಮದುವೆ
ದುರದೃಷ್ಟ

Latest Videos
Recommended Stories
Recommended image1
ನಾಳೆ ಫೆಬ್ರವರಿ 26 ಈ 5 ರಾಶಿ ಜನರಿಗೆ ಸಂಪತ್ತೇ ಸಂಪತ್ತು, ಗಜಕೇಸರಿ ರಾಜಯೋಗದಿಂದ ಬಂಪರ್‌ ಅದೃಷ್ಟ
Recommended image2
ಈ 3 ರಾಶಿಗೆ 5 ದಿನದಲ್ಲಿ ಯು ಟರ್ನ್, 30 ವರ್ಷ ನಂತರ ಪವಾಡ- ದೊಡ್ಡ ಲಾಭ
Recommended image3
ಮಾರ್ಚ್ 3 ಬ್ಲಡ್ ಮೂನ್: ಬೆಂಗಳೂರಿನಲ್ಲಿ ಚಂದ್ರಗ್ರಹಣ ಎಷ್ಟು ಗಂಟೆಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved