ಜೀವನ ನೆಮ್ಮದಿಯಾಗಿರಲು ಗುರುಡ ಪುರಾಣದ ಸೂತ್ರಗಳಿವು
ಪ್ರತಿಯೊಬ್ಬರೂ ತಮ್ಮ ಜೀವನ ಸಂತೋಷ, ನೆಮ್ಮದಿಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವು ಪೂಜೆಗಳನ್ನು ಮಾಡುತ್ತಾರೆ. ಇನ್ನು ಈ ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಲವೊಂದು ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಸಫಲತೆ ಸಿಗುತ್ತದೆ. ಒಂದು ಶ್ಲೋಕದಲ್ಲಿ ತಿಳಿಸಿದಂತೆ ಜೀವನದಲ್ಲಿ ಉನ್ನತಿ ಪಡೆಯಬೇಕಾದರೆ ಕೆಲವೂ ಪೂಜೆಗಳನ್ನು ಮಾಡಬೇಕು. ಅವು ಯಾವುವು ಅದರ ವಿಶೇಷತೆ ಏನು ತಿಳಿಯೋಣ...
ವಿಷ್ಣು ಪುರಾಣದ ಅನುಸಾರ ವಿಷ್ಣು ತನ್ನ ಭಕ್ತರ ದುಃಖ ದೂರ ಮಾಡುತ್ತಾನೆ. ಜೊತೆಗೆ ಜೀವನದಲ್ಲಿ ಸುಖ ಶಾಂತಿ ಸಿಗುವಂತೆ ಮಾಡುತ್ತಾನೆ. ಯಾರು ತಮ್ಮ ದಿನದ ಆರಂಭವನ್ನು ವಿಷ್ಣುವಿನ ಪೂಜೆ ಅರ್ಚನೆಯಿಂದ ಆರಂಭಿಸುತ್ತಾನೋ ಅವರ ಎಲ್ಲ ಕಾರ್ಯದಲ್ಲೂ ಸಫಲತೆ ಸಿಗುತ್ತದೆ.
ಗೋವಿಗೆ ಹಿಂದೂ ಧರ್ಮದಲ್ಲಿ ಮಹತ್ತರವಾದ ಸ್ಥಾನವಿದೆ. ದನದ ಶರೀರದ ಬೇರೆ ಬೇರೆ ಭಾಗಗಳಲ್ಲಿ ದೇವಿ -ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಮನುಷ್ಯ ಹಸು, ಕಾಮದೇನು ಎಂದು ಪೂಜಿಸುತ್ತಾರೆ. ಇದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಗಂಗಾ ನದಿಯನ್ನು ಎಲ್ಲಾ ನದಿಗಳಿಗಿಂತ ಶ್ರೇಷ್ಟವೆಂದು ಪೂಜಿಸಲಾಗುತ್ತದೆ. ಗಂಗಾನದಿಯನ್ನು ದೇವತೆ ಎಂದೇ ಪೂಜಿಸುತ್ತಾರೆ. ಗಂಗಾ ನದಿಗೆ ಯಾವುದೇ ರೂಪದಲ್ಲೂ ಅಪಮಾನ ಮಾಡುವುದು ಸರಿಯಲ್ಲ. ಗಂಗಾ ನದಿಯನ್ನು ಪೂಜಿಸುತ್ತಿದ್ದರೆ, ಪ್ರತಿಯೊಂದು ಕೆಲಸದಲ್ಲಿ ಸಫಲತೆ ಸಿಗುತ್ತದೆ.
ತುಳಸಿ ಕೂಡ ಭಗವಂತನ ರೂಪ. ತುಳಸಿಯನ್ನು ಮನೆಯಲ್ಲಿ ನೆಡಬೇಕು. ಪ್ರತಿದಿನ ತುಳಸಿಗೆ ನೀರು ಹಾಕಿ ಪೂಜೆ ಮಾಡಿದರೆ ಶುಭ. ಆದುದರಿಂದ ಪ್ರತಿದಿನ ವಿಷ್ಣು ಪೂಜೆಯ ನಂತರ ತುಳಸಿ ಪೂಜೆ ಮಾಡಿ.
ಪಂಡಿತ ಅಥವಾ ಜ್ಞಾನಿಗೆ ಗೌರವ ಕೊಡುವುದು ಉತ್ತಮ. ಹಲವಾರು ಜನ ಇದನ್ನು ತಮಾಷೆ ಮಾಡುತ್ತಾರೆ. ಆದರೆ ಯಾವ ಮನುಷ್ಯ ಜ್ಞಾನಿಗೆ ಗೌರವ ನೀಡುತ್ತಾರೋ ಅವರ ಜೀವನದಲ್ಲಿ ಸಫಲತೆ ಸಿಗುತ್ತದೆ.
ಏಕಾದಶಿ ವ್ರತ : ಗ್ರಂಥ ಮತ್ತು ಪುರಾಣದಲ್ಲಿ ಏಕಾದಶಿ ವ್ರತ ಮಾಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಯಾರು ಪೂರ್ತಿ ಶ್ರದ್ಧೆ ಮತ್ತು ಭಕ್ತಿಯಿಂದ ಏಕಾದಶಿ ವೃತ ಮಾಡುತ್ತಾರೋ ಅವರಿಗೆ ಖಂಡಿತವಾಗಿಯೂ ಶುಭ ಫಲ ಸಿಗುತ್ತದೆ.