MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಗಣೇಶ ಚತುರ್ಥಿ 2022: ಮನೆಗೆ ಹಬ್ಬದ ಕಳೆ ತರಲು ಹೀಗೆ ಅಲಂಕರಿಸಿ..

ಗಣೇಶ ಚತುರ್ಥಿ 2022: ಮನೆಗೆ ಹಬ್ಬದ ಕಳೆ ತರಲು ಹೀಗೆ ಅಲಂಕರಿಸಿ..

ಗಣೇಶ ಚತುರ್ಥಿ 2022ದ ದಿನ ನಿಮ್ಮ ಮನೆಗೆ ಅದ್ಬುತ ಹಬ್ಬದ ಕಳೆ ತರಲು ಹೂವುಗಳಿಂದ ರಂಗೋಲಿಯವರೆಗೆ ಏನೆಲ್ಲ ಬಳಸಬಹುದು ಎಂಬುದಕ್ಕೆ ಇಲ್ಲಿವೆ ಅಲಂಕಾರ ಐಡಿಯಾಗಳು. 

2 Min read
Suvarna News
Published : Aug 29 2022, 03:15 PM IST
Share this Photo Gallery
  • FB
  • TW
  • Linkdin
  • Whatsapp
18

ಗಣೇಶ ಚತುರ್ಥಿಯ ವಿಶೇಷ ದಿನದಂದು, ಗಣಪತಿಯನ್ನು ತನ್ನ ತಾಯಿ ಪಾರ್ವತಿಯೊಂದಿಗೆ ಕೈಲಾಸ ಪರ್ವತದಿಂದ ಭೂಮಿಗೆ ಸ್ವಾಗತಿಸಲಾಗುತ್ತದೆ. ಈ ದಿನದಂದು ಭಕ್ತರು ಬೇಗನೆ ಎದ್ದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅವರೂ ಉಪವಾಸವಿದ್ದು ಗಣೇಶನ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ, ಇದನ್ನು ದೇಶದಾದ್ಯಂತ ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಜನರು ಮಂತ್ರ, ಪೂಜೆ, ಭಕ್ತಿಗೀತೆಗಳು, ಸಿಹಿತಿಂಡಿಗಳ ತಯಾರಿಯಲ್ಲಿ ತೊಡಗುತ್ತಾರೆ. ಗಣೇಶನಿಗಾಗಿ ಬಗೆಬಗೆಯ ತಿಂಡಿ ನೀಡಿ ಪ್ರೀತಿ ತೋರುತ್ತಾರೆ. ಮನೆಗೆ ಅತಿಥಿಗಳನ್ನು ಕರೆದು ಉಪಚರಿಸುತ್ತಾರೆ. 

ಇದೆಲ್ಲಕ್ಕಿಂತ ಮುನ್ನ ಗಣೇಶ ಚತುರ್ಥಿಯಂದು, ಜನರು ತಮ್ಮ ಮನೆಗಳಿಗೆ ಗಣೇಶನನ್ನು ಸ್ವಾಗತಿಸಲು ತಮ್ಮ ಮನೆಗಳನ್ನು ವಿಧವಿಧವಾಗಿ ಅಲಂಕರಿಸುತ್ತಾರೆ. ನಿಮ್ಮ ಮನೆಗೆ ಹಬ್ಬದ ಕಳೆ ತರಲು ನೀವು ಮನೆಯನ್ನು ಹೇಗೆಲ್ಲ ಅಲಂಕರಿಸಬಹುದು ಎಂಬುದಕ್ಕೆ ಕೆಲ ಐಡಿಯಾಗಳನ್ನಿಲ್ಲಿ ಕೊಡಲಾಗಿದೆ. 

28

ರಂಗೋಲಿ: ಸುಂದರವಾದ ರಂಗೋಲಿ, ವಿವಿಧ ಬಣ್ಣಗಳ ಛಾಯೆಯು ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಪ್ರತಿ ದಿನ ಮನೆಯೆದುರು ರಂಗೋಲಿ ಹಾಕಬೇಕು. ಹಬ್ಬದ ದಿನವಂತೂ ತಪ್ಪಿಸಕೂಡದು. ದೊಡ್ಡದಾದ ರಂಗೋಲಿ ಹಾಕಿ ಬಣ್ಣ ತುಂಬಿ. ಎಲ್ಲ ಹೊಸ್ತಿಲುಗಳಲ್ಲಿ ಸಣ್ಣ ಸಣ್ಣ ರಂಗೋಲಿ ಎಳೆ ಎಳೆಯಿರಿ. 

38

ತೋರಣ: ಮನೆಯ ಎದಿರು ಬಾಗಿಲಿಗೆ ಮತ್ತು ದೇವರ ಮನೆಗೆ ಮಾವಿನ ಎಲೆಗಳಿಂದ ತಯಾರಿಸಿದ ತೋರಣ ಹಾಕಿ. ಇದು ಧನಾತ್ಮಕ ವೈಬ್ ತರುವ ಜೊತೆಗೆ ಸಾಂಪ್ರಾದಾಯಿಕ ಲಿಕ್ಕನ್ನು ಕೂಡಾ ಮನೆಗೆ ನೀಡುತ್ತದೆ. 

48

ಬಾಳೆಗಿಡಗಳು: ಮನೆಗೆ ಹಬ್ಬದ ಕಳೆ ತರಲು ಬಾಳೆಗಿಡ ಬಳಕೆ ಮಾಡಿ. ಬಾಗಿಲಿನ ಎರಡೂ ಬದಿಯಲ್ಲಿ ಮತ್ತು ಗಣೇಶನನ್ನು ಕೂರಿಸುವಲ್ಲಿ ಬಾಳೆಗಿಡಗಳನ್ನು ಕಟ್ಟಿ ನಿಲ್ಲಿಸಿ. 

58

ಹೂವುಗಳು(Flowers): ಯಾವುದೇ ಹಬ್ಬಕ್ಕೂ ಹೂವುಗಳು ಇರಲೇಬೇಕು. ಪೂಜೆಗೆ ಹೂವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯಂದು ನಾವು ಗಣೇಶನಿಗೆ ಹೂವುಗಳನ್ನು ಅರ್ಪಿಸುವಾಗ, ಮನೆಯನ್ನು ಅಲಂಕರಿಸಲು ಮತ್ತು ಹೆಚ್ಚು ಹಬ್ಬದ ವೈಬ್ ಅನ್ನು ನೀಡಲು ಹೂವಿನ ದಳಗಳನ್ನು ತೊಟ್ಟಿಯಲ್ಲಿ ಹಾಕಿ ಎದುರು ಬಾಗಿಲಿನ ಬಳಿ ಇಡಿ. ಇದಲ್ಲದೆ, ಬಾಗಿಲ ಮಾವಿನ ತೋರಣದ ಜೊತೆಗೆ ಹೂವಿನ ತೋರಣಗಳನ್ನು ಹಾಕಿ ಸಿಂಗರಿಸಿ. ದೇವರ ಮನೆ, ಗಣೇಶನನ್ನು ಕೂರಿಸುವ ಸ್ಥಳವನ್ನು ಕೂಡಾ ಬಗೆಬಗೆಯ ಬಣ್ಣದ ಹೂವಿನ ಹಾರಗಳಿಂದ ಸಿಂಗರಿಸಿ. 

68

ಮಣ್ಣಿನ ದೀಪಗಳು: ಗಣಪತಿಯು ಕತ್ತಲೆಯನ್ನು ಓಡಿಸುವುದಕ್ಕೆ ಹೆಸರುವಾಸಿ. ಹಲವಾರು ಬಣ್ಣಗಳಲ್ಲಿ ಚಿತ್ರಿಸಿದ ಮಣ್ಣಿನ ದೀಪಗಳು  ಮನೆಗೆ ಸೊಗಸಾದ ಹಬ್ಬದ ಕಳೆ ತರುತ್ತವೆ. ಅವನ್ನು ಬಾಗಿಲ ಬುಡಗಳಲ್ಲಿ, ಪೂಜಾ ಮಂದಿರದಲ್ಲಿ, ಗಣಪತಿ ಕೂರಿಸಿದಲ್ಲಿ, ತುಳಸಿ ಗಿಡದ ಬುಡದಲ್ಲಿ ಬೆಳಗಿಸಿಡಿ. 

78
লাইট

লাইট

ದೀಪಗಳು(Lights): ಅಲಂಕಾರಿಕ ದೊಡ್ಡ ದೀಪಗಳು ಸಂತೋಷ ಮತ್ತು ಹಬ್ಬಗಳನ್ನು ಸಂಕೇತಿಸುತ್ತವೆ. ವಿವಿಧ ಲೈಟ್‌ಗಳ ಛಾಯೆಗಳಲ್ಲಿ ಮನೆಯನ್ನು ಅಲಂಕರಿಸಿ ಮತ್ತು ಅದು ಮನೆಯ ಕಳೆ ಹೆಚ್ಚಿಸುವುದನ್ನು ಸ್ವತಃ ನೀವೇ ನೋಡಿ.

88

ಕಾಗದದ ಅಲಂಕಾರಿಕೆಗಳು(Paper crafts): ವಿವಿಧ ರೀತಿಯ ಮತ್ತು ಬಣ್ಣಗಳ ಒರಿಗಾಮಿ ಪೇಪರ್‌ಗಳನ್ನು ಚೆನ್ನಾಗಿ ಹೂವಿನಂತೆ ಕತ್ತರಿಸಿ, ಅವನ್ನು ಬಳಸಿ ಪೂಜಾ ಕೊಠಡಿಯನ್ನು ಅಲಂಕರಿಸಬಹುದು ಮತ್ತು ಗಣೇಶನ ವಿಗ್ರಹವನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಬಹುದು.

About the Author

SN
Suvarna News
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved