MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ

ರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ

ಮಹಾಭಾರತದಲ್ಲಿ ಶಿಸ್ತಿನ ಕುರಿತಾಗಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ, ಅದನ್ನು ಅನುಸರಿಸಿದರೆ ತಾಯಿ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ವಾಸಿಸುತ್ತಾಳೆ. ಆದರೆ ಸಂಜೆಯ ವೇಳೆ ನೀವು ಮಾಡುವ ಕೆಲವೊಂದು ಕೆಲಸಗಳು ಲಕ್ಷ್ಮಿ ದೇವಿಗೆ (Lakshmi Devi )ಕೋಪ ಬರುವಂತೆ ಮಾಡುತ್ತದೆ. ಹಾಗಾದರೆ ಅಂತಹ ನಿಯಮಗಳು ಯಾವುವು ನೋಡೋಣ... 

2 Min read
Suvarna News
Published : Apr 22 2022, 12:34 PM IST
Share this Photo Gallery
  • FB
  • TW
  • Linkdin
  • Whatsapp
17

ಸೂರ್ಯಾಸ್ತದ ನಂತರ ನಿಯಮಗಳು
ಸೂರ್ಯಾಸ್ತದ (sun set) ನಂತರ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ, ಈ ನಿಯಮಗಳನ್ನು ನೋಡಿಕೊಳ್ಳದಿದ್ದರೆ, ತಾಯಿ ಲಕ್ಷ್ಮಿ ಕೋಪದಿಂದ ವರ್ತಿಸಬಹುದು. ಲಕ್ಷ್ಮೀ ದೇವಿ ಕೋಪಗೊಂಡರೆ ಏನಾಗುತ್ತದೆ ಅನ್ನೋದು ನಿಮಗೂ ಗೊತ್ತಿದೆ ಆಲ್ವಾ? ಆದುದರಿಂದ ಈ ನಿಯಮಗಳನ್ನು ಪಾಲಿಸಿ... 

27

ಉಗುರುಗಳು ಮತ್ತು ಕೂದಲನ್ನು ಕತ್ತರಿಸಬೇಡಿ :
ರಾತ್ರಿಯಲ್ಲಿ ಉಗುರುಗಳು (nails) ಮತ್ತು ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಆದುದರಿಂದ ಸಾಧ್ಯವಾದಷ್ಟು ಹಗಲು ಹೊತ್ತಿನಲ್ಲಿ ಉಗುರು, ಕೂದಲು ತೆಗೆಯಿರಿ. 

37

 ಅರಿಶಿನ ಮತ್ತು ಉಪ್ಪಿನ ದಾನ
ದಾನ ಮಾಡುವುದು ಒಳ್ಳೆಯ ಕೆಲಸವೇ ಸರಿ, ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವಾಗ ಹೆಚ್ಚು ಗಮನ ಹರಿಸೋದು ಮುಖ್ಯವಾಗಿದೆ. ಸೂರ್ಯಾಸ್ತದ ನಂತರ, ಯಾರೂ ಅರಿಶಿನ (turmeric) , ಉಪ್ಪು ಅಥವಾ ಹುಳಿ ವಸ್ತುಗಳನ್ನು ದಾನ ಮಾಡಬಾರದು. ಇದರಿಂದ ಆರ್ಥಿಕ ಸಮಸ್ಯೆ ಅನುಭವಿಸಬೇಕಾಗಿ ಬರುತ್ತದೆ. 

47

ತಾಯಿ ಲಕ್ಷ್ಮಿಗೆ ಬಿಳಿ ಬಣ್ಣ ಇಷ್ಟ 
ತಾಯಿ ಲಕ್ಷ್ಮಿ ಬಿಳಿ ಬಣ್ಣವನ್ನು ಪ್ರೀತಿಸುತ್ತಾಳೆ. ಆದ್ದರಿಂದ, ಪೂಜೆಯ ಸಮಯದಲ್ಲಿ, ತಾಯಿಗೆ ಬಿಳಿ ಆಹಾರದ ನೈವೇಧ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಬಿಳಿ ವಸ್ತ್ರವನ್ನು ಸಹ ನೀಡಲಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಬಿಳಿ ಬಣ್ಣವನ್ನು ಇಡಲು ಪ್ರಯತ್ನಿಸಿ. 

57

ಮೊಸರಿನ ಬಳಕೆ
ರಾತ್ರಿಯಲ್ಲಿ ಹಾಲನ್ನು ಹೊರತುಪಡಿಸಿ ಮೊಸರು (curd)ಅಥವಾ ಬರ್ಫಿ ಮುಂತಾದ ಯಾವುದೇ ಬಿಳಿ ವಸ್ತುವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.  ಇದು ಲಕ್ಷ್ಮಿ ದೇವಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ.
 

67

 ರಾತ್ರಿಯಲ್ಲಿ ಪೊರಕೆ ಹಾಕಬೇಡಿ 
ಪೊರಕೆಯನ್ನು ಮಾ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಸೂರ್ಯಾಸ್ತದ ನಂತರ ಮನೆಯಲ್ಲಿ ಪೊರಕೆಯನ್ನು ಹಾಕಬಾರದು. ಇದರಿಂದ ತಾಯಿಗೆ ಕೋಪ ಬಂದು ಮನೆ ಬಿಟ್ಟು ಹೊರ ಹೋಗುತ್ತಾಳೆ ಎಂದು ನಂಬಲಾಗಿದೆ. 

77

 ಕಸವನ್ನು ಹೊರಗೆ ಎಸೆಯಬೇಡಿ 
ಇದಲ್ಲದೆ, ಮನೆಯ ಕಸವನ್ನು (dust) ರಾತ್ರಿಯಲ್ಲಿ ಹೊರತೆಗೆಯಬಾರದು, ಹಾಗೆ ಮಾಡುವ ಮೂಲಕ, ತಾಯಿ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಆದುದರಿಂದ ತಪ್ಪಿಯೂ ಸಹ ಈ ಕೆಲಸವನ್ನು ಮಾಡಬೇಡಿ. ಕಸ ಇದ್ದರೆ ಅದನ್ನು ಮನೆಯ ಒಳಗೆಯೇ ಒಂದು ಕಡೆ ಇಟ್ಟು , ಮರುದಿನ ಅದನ್ನು ಬಿಸಾಕಿ. 

About the Author

SN
Suvarna News
ಜ್ಯೋತಿಷ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved