MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಚಾಣಕ್ಯ ನೀತಿ: ಈ ಗುಟ್ಟು ರಟ್ಟಾಗದಂತೆ ಹುಷಾರಾಗಿ ನೋಡಿ ಕೊಳ್ಳಿ

ಚಾಣಕ್ಯ ನೀತಿ: ಈ ಗುಟ್ಟು ರಟ್ಟಾಗದಂತೆ ಹುಷಾರಾಗಿ ನೋಡಿ ಕೊಳ್ಳಿ

ಆಚಾರ್ಯ ಚಾಣಕ್ಯನು ಅರ್ಥಶಾಸ್ತ್ರ (Economics) ಮತ್ತು ರಾಜಕೀಯ ಕ್ಷೇತ್ರದಲ್ಲಿ ಬಹಳ ಆಳ ಜ್ಞಾನವನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಅವರು ಸಮಾಜದ ಒಳಿತಿಗಾಗಿ ಅನೇಕ ನೀತಿಗಳನ್ನು ಸಹ ಮಾಡಿದ್ದಾರೆ ಮತ್ತು ಈ ನೀತಿಗಳ ಮೂಲಕ, ಒಬ್ಬ ಪುಟ್ಟ ಮಗುವನ್ನು ಅಖಂಡ ಭಾರತದ ಚಕ್ರವರ್ತಿಯನ್ನಾಗಿ ಮಾಡಿದರು, ಅವರು ಚಂದ್ರಗುಪ್ತ ಮೌರ್ಯ. ಅದೇ ರೀತಿ ಚಾಣಕ್ಯ ನೀತಿಯಲ್ಲಿ ಹಲವಾರು ವಿಷಯಗಳನ್ನು ತಿಳಿಸಲಾಗಿದೆ. ಅವುಗಳಲ್ಲಿ ಕೆಲವು ರಹಸ್ಯಗಳನ್ನು ನೀಡಲಾಗಿದೆ. ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.

2 Min read
Suvarna News
Published : Aug 26 2022, 05:01 PM IST
Share this Photo Gallery
  • FB
  • TW
  • Linkdin
  • Whatsapp
16

ಆಚಾರ್ಯ ಚಾಣಕ್ಯ ನೀತಿ ಶಾಸ್ತ್ರದಲ್ಲಿ ಸರಳ ಮತ್ತು ಸಂತೋಷದ ಜೀವನದ ಅನೇಕ ಸೂತ್ರಗಳನ್ನು ನೀಡಿದ್ದಾನೆ. ಚಾಣಕ್ಯನ ಈ ನೀತಿಗಳನ್ನು ಇಂದಿಗೂ ಅನುಸರಿಸಿದರೆ, ಒಬ್ಬ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಅದರಲ್ಲಿ ಕೆಲವೊಂದು ರಹಸ್ಯ ಬಗ್ಗೆಯೂ ತಿಳಿಸಲಾಗಿದೆ.

26

ಚಾಣಕ್ಯ ಒಂದು ನೀತಿಯಲ್ಲಿ ಹೀಗೆ ಹೇಳಿದ್ದಾನೆ, ನೀವು ಯಾರೊಂದಿಗಾದರೂ ಎಷ್ಟೇ ಕ್ಲೋಸ್ ಆಗಿದ್ದರೂ, ಕೆಲವೊಂದು ವಿಷ್ಯಗಳನ್ನು ಯಾರಿಂದಿಗೂ ಹಂಚಿಕೊಳ್ಳಬಾರದು, ಏಕೆಂದರೆ ಈ ವಿಷಯಗಳು ಯಾರಿಗಾದರೂ ತಿಳಿದರೆ, ಅವನು ನಿಮ್ಮನ್ನು ಅವಮಾನಿಸುವ ಸಾಧ್ಯತೆ ಹೆಚ್ಚಿರುತ್ತೆ. ಆಚಾರ್ಯ ಚಾಣಕ್ಯ ನೀತಿ ಮೂಲಕ ಯಾವ ವಿಷಯಗಳನ್ನು ಯಾರೊಂದಿಗೂ ಹಂಚಬಾರದು ಎಂದಿದ್ದಾರೆ ಅನ್ನೋದನ್ನು ನೋಡೋಣ.

36
ರಹಸ್ಯವಾಗಿಡಬೇಕಾದ ಮೊದಲ ವಿಷಯ

ರಹಸ್ಯವಾಗಿಡಬೇಕಾದ ಮೊದಲ ವಿಷಯ

ಹಣದ ನಷ್ಟದ (financial problem) ಬಗ್ಗೆ ಎಂದಿಗೂ ಮತ್ತು ಯಾರೂ ಯಾರಿಗೂ ಹೇಳಬಾರದು. ಅನೇಕ ಬಾರಿ ಹಣ ನಷ್ಟವಾದಾಗ, ಅವರು ದುಃಖಿತರಾಗುತ್ತಾರೆ ಮತ್ತು ಇತರರಿಗೆ ಹೇಳುತ್ತಾರೆ, ಅದು ತಪ್ಪು. ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಯಾರಿಗಾದರೂ ತಿಳಿದರೆ, ಆಗ ಯಾರೂ ಸಹಾಯ ಮಾಡೋದಿಲ್ಲ, ಆದ್ದರಿಂದ ನಷ್ಟವನ್ನು ಇತರರಿಗೆ ಹೇಳುವ ಬದಲು, ಮಾಡಿದ ನಷ್ಟವನ್ನು ಹೇಗೆ ಪೂರೈಸುವುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಉತ್ತಮ.

46
ರಹಸ್ಯವಾಗಿಡಬೇಕಾದ ಎರಡನೇ ವಿಷಯ

ರಹಸ್ಯವಾಗಿಡಬೇಕಾದ ಎರಡನೇ ವಿಷಯ

ಚಾಣಕ್ಯನು ಕಷ್ಟ ಮತ್ತು ದುಃಖದ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಿದ್ದಾನೆ. ನಿಮ್ಮ ಸಮಸ್ಯೆಗಳ ಬಗ್ಗೆ ನೀವು ಯಾರಿಗಾದರೂ ಹೇಳಿದರೆ, ಇತರರು ಅದನ್ನು ಗೇಲಿ ಮಾಡಬಹುದು. ಏಕೆಂದರೆ ಪ್ರತಿ ಯುಗದಲ್ಲೂ, ಸಮಾಜದಲ್ಲಿ ಕೆಲವು ಜನರು ಮುಂದೆ ಒಳ್ಳೆಯವರಂತೆ ನಟಿಸಿ, ಬೆನ್ನಿನ ಹಿಂದೆ ನಿಮ್ಮ ಮನಸ್ಸಿನ ಯಾತನೆಯನ್ನು ಕೇಳಿ ಸಂತೋಷಪಡುತ್ತಾರೆ, ಆದ್ದರಿಂದ ನಿಮ್ಮ ದುಃಖಗಳನ್ನು ನಿಮ್ಮೊಳಗೆ ಇಟ್ಟುಕೊಳ್ಳುವುದು ಒಳ್ಳೆಯದು.

56
ಮೂರನೆಯ ರಹಸ್ಯ ವಿಷಯ

ಮೂರನೆಯ ರಹಸ್ಯ ವಿಷಯ

ಚಾಣಕ್ಯನು ತಮ್ಮ ಮನೆಯ ಮಹಿಳೆಯರ ಒಳ್ಳೆಯ ಮತ್ತು ಕೆಟ್ಟ ನಡವಳಿಕೆ ಮತ್ತು ರೋಗಲಕ್ಷಣಗಳ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಿದ್ದಾನೆ. ಮನೆಯ ವಸ್ತುಗಳನ್ನು ಮನೆಯಲ್ಲಿ ಮಾತ್ರ ಇಟ್ಟುಕೊಳ್ಳುವವನು ಬುದ್ಧಿವಂತ. ಮನೆಯ ಪ್ರಮುಖ ವಿಷಯಗಳು, ಜಗಳಗಳು ಅಥವಾ ಸಂತೋಷಗಳ ಬಗ್ಗೆ ನೀವು ಹೇಳಿದರೆ, ನೀವು ಭವಿಷ್ಯದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಚಾಣಕ್ಯನು ಮಹಿಳೆಯರು ಅಥವಾ ಪುರುಷರು ತಮ್ಮ ಸಂಗಾತಿಯ ಬಗ್ಗೆ ಎಂದಿಗೂ ಇತರರಿಗೆ ಹೇಳಬಾರದು ಎಂದು ಹೇಳಿದ್ದಾನೆ.

66
ನಾಲ್ಕನೆಯ ರಹಸ್ಯ ವಿಷಯ

ನಾಲ್ಕನೆಯ ರಹಸ್ಯ ವಿಷಯ

ಒಬ್ಬ ಕೆಟ್ಟ ವ್ಯಕ್ತಿಯು ತಪ್ಪು ಮಾತುಗಳನ್ನು ಆಡಿದ್ದರೆ ಅಥವಾ ನಿಮ್ಮನ್ನು ಅವಮಾನಿಸಿದರೆ, ಮೊದಲನೆಯದಾಗಿ, ಅವನ ಮಾತುಗಳಿಗೆ ಗಮನ ನೀಡಬಾರದು ಮತ್ತು ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದು. ಕೆಟ್ಟ ಪ್ರವೃತ್ತಿಗಳನ್ನು (bad habits) ಹೊಂದಿರುವ ಜನರು ಯಾವಾಗಲೂ ನೋಯಿಸುವ ಕೆಲಸ ಮಾಡುತ್ತಾರೆ. ಅಂತಹ ಘಟನೆಯ ಬಗ್ಗೆ ನೀವು ಜನರಿಗೆ ಹೇಳಿದರೆ, ಭವಿಷ್ಯದಲ್ಲಿ ನೀವು ನಿಮ್ಮನ್ನು ಗೇಲಿ ಮಾಡಬಹುದು, ಇದು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ.

About the Author

SN
Suvarna News
ಚಾಣಕ್ಯ ನೀತಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved