ಕಲಘಟಗಿ: ಸರ್ಕಾರದ ನೀತಿ ಖಂಡಿಸಿ ಬೀದಿಗಿಳಿದು ಹೋರಾಟಕ್ಕಿಳಿದ ವಿದ್ಯಾರ್ಥಿಗಳು
ಹುಬ್ಬಳ್ಳಿ(ಜ.25): ಶಾಲೆಗೆ ನೀಡಿದ್ದ ವೇತನಾನುದಾನ ಹಿಂಪಡೆ ಹಾಗೂ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದಲ್ಲಿ ಇಂದು(ಸೋಮವಾರ) ನಡೆದಿದೆ.
ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಜೋಡಳ್ಳಿಯ ಶ್ರೀಸಂಗಮೇಶ್ಬರ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು
ಮೂಲಸೌಕರ್ಯ ಕಲ್ಪಿಸದ ಕಾರಣಕ್ಕೆ ಶಾಲೆಗೆ ನೀಡಿದ ವೇತನಾನುದಾನ ಹಿಂಪಡೆದ ಸರ್ಕಾರ
ಸರ್ಕಾರ ನಡೆಯಿಂದ ಶಿಕ್ಷಕರಿಲ್ಲದೆ ಸುಮಾರು 180 ಮಕ್ಕಳ ಪರದಾಟ
ಶೈಕ್ಷಣಿಕ ವರ್ಷದ ಮಧ್ಯಂತರದಲ್ಲಿ ಸರ್ಕಾರದ ಆತೂರದ ನಿರ್ಧಾರಕ್ಕೆ ವಿದ್ಯಾರ್ಥಿಗಳಿ ತೀವ್ರ ಆಕ್ರೋಶ
ಕಲಘಟಗಿ ಸಂಪರ್ಕ ಕಲ್ಪಿಸುವ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಶಾಲಾ ಮಕ್ಕಳು, ಶಿಕ್ಷಕರನ್ನು ಪುನಃ ಶಾಲೆಗೆ ನೇಮಿಸುವಂತೆ ವಿದ್ಯಾರ್ಥಿಗಳ ಆಗ್ರಹ