MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • Ankola: ಶಾಲಾ ಚಾವಣಿ ಪದರ ಕುಸಿದು 5 ಮಕ್ಕಳಿಗೆ ಗಾಯ

Ankola: ಶಾಲಾ ಚಾವಣಿ ಪದರ ಕುಸಿದು 5 ಮಕ್ಕಳಿಗೆ ಗಾಯ

ಅಂಕೋಲಾ(ಮಾ.10):  ಪ್ರಾಥಮಿಕ ಶಾಲೆಯ ವರ್ಗ ಕೊಠಡಿಯೊಂದರ ಚಾವಣಿ ಮೇಲ್ಪದರ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬುಧವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ನಿರ್ಮಲ ಹೃದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Government School) ನಡೆದಿದೆ.  

1 Min read
Kannadaprabha News | Asianet News
Published : Mar 10 2022, 10:46 AM IST
Share this Photo Gallery
  • FB
  • TW
  • Linkdin
  • Whatsapp
17

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಸಫಲ್ ಡಿ ಚಿಂಚಣಕರ, ಅಮೋಘ ನಾಯ್ಕ ಸುಹಾನಿ ಶೇಡಗೇರಿ, ಸೃಷ್ಟಿ ಎಸ್ ನಾಯ್ಕ ಹಾಗೂ ಒಂದನೇ ತರಗತಿಯ ವಿದ್ಯಾರ್ಥಿ ಸದ್ವಿನ್ ಡಿ ಚಿಂಚರಕರ ಗಾಯಗೊಂಡವರು.

27

ನಾಲ್ಕನೇ ತರಗತಿಯ ವರ್ಗಕೋಣೆಯಲ್ಲಿ 68 ವಿದ್ಯಾರ್ಥಿಗಳಿದ್ದು(Students), ಮದ್ಯಾಹ್ನ(Food) ಊಟದ ಸಮಯವಾಗಿದ್ದರಿಂದ 16 ವಿದ್ಯಾರ್ಥಿಗಳು ಮಾತ್ರ ವರ್ಗಕೋಣೆಯಲ್ಲಿ ಊಟ ಮಾಡುತ್ತಿದ್ದರು. ಊಟ ಮಾಡುತ್ತಿರುವ ವೇಳೆ ಮೇಲ್ಪದರ ಕುಸಿದು, ಕಾಂಕ್ರೀಟ್ ಚೂರುಗಳು ಆಸುಪಾಸಿನಲ್ಲಿದ್ದ ವಿದ್ಯಾರ್ಥಿಗಳ ತಲೆಗೆ ಮತ್ತು ಬೆನ್ನಿಗೆ ಬಡಿದಿವೆ. ಮೇಲ್ಪದರ ಕುಸಿದ ಪರಿಣಾಮ ವರ್ಗಕೋಣೆಯ ಬೆಂಚುಗಳು ಮುರಿದು ಬಿದ್ದಿವೆ.

37

ವಿದ್ಯಾರ್ಥಿಗಳು ಮೇಲ್ಪದರ ಕುಸಿದ ಜಾಗದಿಂದ ಸ್ವಲ್ಪ ದೂರದಲ್ಲಿ ಕುಳಿತ ಪರಿಣಾಮ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ. ವಿದ್ಯಾರ್ಥಿಗಳಾದ ಸಫಲ ಚಿಂಚಣಕರ ಹಾಗೂ ಸೃಷ್ಟಿ ನಾಯ್ಕ ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ವೈದ್ಯಕೀಯ ಆಸ್ಪತ್ರೆಗೆ(Karwar Medial College) ಹೆಚ್ಚಿನ ಚಿಕಿತ್ಸೆಗೆ(Treatment) ಸಾಗಿಸಲಾಗಿದೆ.

47

ತಹಶೀಲ್ದಾರ್ ಉದಯ ಕುಂಬಾರ, ಇ.ಒ ಪರಶುರಾಮ ಸಾವಂತ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪಿಎಸೈ ಪ್ರವೀಣಕುಮಾರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

57

ಶಾಲೆಯ ಕಟ್ಟಡ 30 ವರ್ಷಗಳಿಗಿಂತ ಹಳೆಯದಾಗಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ಪಾಲಕರು(Parents) ದೂರಿದ್ದಾರೆ. ಸುತ್ತಲೂ ಬಿರುಕುಗಳು ಇದ್ದರೂ ಅಧಿಕಾರಿಗಳು ತರಗತಿ ನಡೆಸಲು ಹೇಗೆ ಅನುಮತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಘಟನೆಯು ನಡೆಯಿತು.

67

ವರ್ಗಕೋಣೆ ವೀಕ್ಷಿಸಿದ ತಹಶೀಲ್ದಾರ್ ಉದಯ ಕುಂಬಾರ, 'ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿ. ಮುಂಜಾಗ್ರತಾ ಕ್ರಮ ಕೈಗೊಂಡ ಬಗ್ಗೆ ವಿವರ ಒದಗಿಸುವಂತೆ ಆದೇಶಿಸಿ' ಎಂದು ಶಿಕ್ಷಣ ಇಲಾಖೆಯ(Department of Education) ಅಧಿಕಾರಿಗಳಿಗೆ ಸೂಚಿಸಿದರು.

77

ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ದೌಡಾಯಿಸಿ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋದರು. ಘಟನೆಯಿಂದ ಹೆದರಿದ ಕೆಲವು ವಿದ್ಯಾರ್ಥಿಗಳು ಅಳುತ್ತಿದ್ದರೆ ಅವರೊಂದಿಗೆ ಪಾಲಕರು ಅಳುತ್ತಿರುವ ದೃಶ್ಯ ಕಂಡುಬಂತು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಉತ್ತರ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved