ಕಲಬುರಗಿ ಲಿಂಕ್; ಕುರಿದೊಡ್ಡಿಯಲ್ಲಿ ಹೂತಿಟ್ಟಿದ್ದ 13.5 ಕ್ವಿಂಟಾಲ್ ಗಾಂಜಾ ಸೀಜ್!
ಬೆಂಗಳೂರು/ ಕಲಬುರಗಿ( ಸೆ. 10 ) ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಬೃಹತ್ ಗಾಂಜಾ ಕಾರ್ಯಾಚರಣೆ ಮಾಡಲಾಗಿದೆ. ಕೇಂದ್ರ ವಿಭಾಗ ಪೊಲೀಸರ ಕಾರ್ಯಾಚರಣೆಯಲ್ಲಿ 13.5 ಕ್ವಿಂಟಾಲ್ ಗಾಂಜಾ ಸೀಜ್ ಮಾಡಿ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸರು ಒಂದು ವಾರದ ಕೆಳಗೆ 2 ಕೆಜಿ ಗಾಂಜಾ ವಶಪಡಿಸಿಕೊಂಡಿದ್ರು.
ಈ ಗಾಂಜಾ ಎಲ್ಲಿಂದ ಬರ್ತಿದೆ ಅಂತ ತನಿಖೆ ಮುಂದುವರಿಸಿದರು.
ಮಾದನಾಯಕಹಳ್ಳಿ ಸಿದ್ದು ನಾತ್ ನಾವಳಿ ಬಳಿಯಿಂದ ಗಾಂಜಾ ಪಡೆದ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದರು
ಸಿದ್ದುನಾಥ್ ನಾವಳಿಗೆ ಕಲಬುರಗಿಂದ ಗಾಂಜಾ ಬರುತ್ತಿತ್ತು. ಗಾಂಜಾ ಖರೀದಿ ಮಾಡುವ ಗಿರಾಕಿಗಳಂತೆ ಹೋಗಿದ್ದ ಶೇಷಾದ್ರಿ ಪುರಂ ಪೊಲೀಸರು ಕಮಲಾಪುರ ಬಳಿ ದೊಡ್ಡ ಕಾರ್ಯಾಚರಣೆ ಮಾಡಿದ್ದಾರೆ.
ಗಾಂಜಾ ಖರೀದಿ ಗೆ ಹೋಗಿದ್ದವರ ( ಪೊಲೀಸರು) ಬಳಿ ಹಣ ಕಿತ್ತುಕೊಳ್ಳುವ ಯತ್ನವೂ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಗನಾಥ್, ಚಂದ್ರಕಾಂತ್ ಚೌಹಾಣ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಕುರಿಫಾರಂ ಬಳಿ ಹೋದಾಗ ಶೇಖರಿಸಿಟ್ಟಿದ್ದ ಗಾಂಜಾ ನೋಡಿ ಅಚ್ಚರಿ ಕಾದಿತ್ತು ಭೂಮಿಯಲ್ಲಿ ಹೂತು ಇಟ್ಟಿದ್ದ 1352 ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಓರಿಸ್ಸಾದಿಂದ ತರಿಸಿಕೊಳ್ಳಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.