ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?
ಸಿಡ್ನಿ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 66 ರನ್ಗಳ ಆಘಾತಕಾರಿ ಸೋಲು ಕಾಣುವ ಮೂಲಕ ಹಿನ್ನಡೆ ಅನುಭವಿಸಿದೆ. ಇನ್ನು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಮುಂದಿನ ಪಂದ್ಯವನ್ನು ಜೀವಂತವಾಗಿರಿಸಿಕೊಳ್ಳಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಸಿಲುಕಿದೆ.
ನವೆಂಬರ್ 29ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಮುಖವಾಗಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
1. ಮಯಾಂಕ್ ಅಗರ್ವಾಲ್: ತಂಡಕ್ಕೆ ಮೊದಲ ಪಂದ್ಯಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರಾದರೂ, ದೊಡ್ಡ ಇನಿಂಗ್ಸ್ ಆಡಬೇಕಿದೆ ಮಯಾಂಕ್
2. ಶಿಖರ್ ಧವನ್: ಮೊದಲ ಪಂದ್ಯದಲ್ಲಿ ಆಕರ್ಷಕ 74 ರನ್ ಬಾರಿಸಿದ್ದು, ಎರಡನೇ ಪಂದ್ಯದಲ್ಲೂ ಇದೇ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ ಗಬ್ಬರ್ ಸಿಂಗ್
3. ವಿರಾಟ್ ಕೊಹ್ಲಿ: ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ವಿರಾಟ್ ಕೊಹ್ಲಿ ತಮ್ಮ ನಾಯಕನ ಆಟವನ್ನು ಪ್ರದರ್ಶಿಸಬೇಕಿದೆ.
4. ಶ್ರೇಯಸ್ ಅಯ್ಯರ್: ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಆಟ ಪ್ರದರ್ಶನ ತೋರಬೇಕಿದೆ.
5. ಕೆ,ಎಲ್. ರಾಹುಲ್: ವಿಕೆಟ್ ಕೀಪರ್ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ರಾಹುಲ್, ಬ್ಯಾಟಿಂಗ್ನಲ್ಲೂ ಅಬ್ಬರಿಸಬೇಕಿದೆ.
6. ಹಾರ್ದಿಕ್ ಪಾಂಡ್ಯ: ಹಾರ್ಡ್ ಹಿಟ್ಟರ್ ಪಾಂಡ್ಯ ಮೊದಲ ಪಂದ್ಯದಲ್ಲಿ 90 ರನ್ ಬಾರಿಸಿದ್ದು, ಅದೇ ಲಯವನ್ನು ಮುಂದುವರಿಸಬೇಕಿದೆ.
7. ರವೀಂದ್ರ ಜಡೇಜಾ: ಆಲ್ರೌಂಡರ್ ಜಡೇಜಾ ಬ್ಯಾಟಿಂಗ್ ಜತೆ ಜತೆಗೆ ಬೌಲಿಂಗ್ನಲ್ಲಿ ತಂಡಕ್ಕೆ ಆಸರೆಯಾಗಬೇಕಿದೆ.
8. ಮೊಹಮ್ಮದ್ ಶಮಿ: ಭಾರತ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿರುವ ಶಮಿ ಮೇಲೆ ದೊಡ್ಡ ಜವಾಬ್ದಾರಿಯಿದೆ.
9. ಟಿ. ನಟರಾಜನ್: ಕಳೆದ ಪಂದ್ಯದಲ್ಲಿ ಸೈನಿ ದುಬಾರಿಯಾಗಿದ್ದು, ಅವರ ಸ್ಥಾನದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
10. ಜಸ್ಪ್ರೀತ್ ಬುಮ್ರಾ: ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ, ಸಿಡ್ನಿ ಮೈದಾನದಲ್ಲಿ ತಮ್ಮ ಮೊನಚಿನ ದಾಳಿಯನ್ನು ಸಂಘಟಿಸಬೇಕಿದೆ.
11. ಯುಜುವೇಂದ್ರ ಚಹಲ್: ತಂಡದ ಸ್ಪಿನ್ ಅಸ್ತ್ರ ಕಳೆದ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದು, ಎರಡನೇ ಪಂದ್ಯದಲ್ಲಿ ಫಾರ್ಮ್ಗೆ ಮರಳಲೇಬೇಕಾದ ಒತ್ತಡಕ್ಕೆ ಸಿಲುಕಿದೆ.